ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ
Recommended Video

ಬೆಂಗಳೂರು, ಜನವರಿ 2 : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಿಕಲ ಚೇತನ ಅರ್ಜಿದಾರರಿಗೆ ಶೇ. 3 ರಷ್ಟು ನಿವೇಶನ ಮೀಸಲಾತಿಯಲ್ಲದೇ ನಿವೇಶನದ ಮೂಲದರದಲ್ಲಿ ಶೇ.5ರಷ್ಟು ವಿನಾಯಿತಿ ನೀಡುವ ಮಹತ್ವಸ ನಿರ್ಧಾರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದೆ.
ಪ್ರಾಧಿಕಾರದ ಹೊಸ ಬಡಾವಣೆಗಳಲ್ಲಿ ಸೈಟ್ ಹಂಚಿಕೆಗೆ 1984ರ ನಿವೇಶನ ಹಂಚಿಕೆ ನಿಯಮಾವಳಿಗಳನ್ನು ಅಳವಡಿಸಿಕೊಂಡಿದೆ. ನಿಯಮಾವಳಿಯ 11ನೇ ಉಪ ನಿಯಮದಡಿ ನಾನಾ ವರ್ಗಗಳಿಗೆ ಸೈಟಿಗೆ ಹಂಚಿಕೆ ಮಾಡುವ ಮೀಸಲು ಮಿತಿ ನಿಗದಿಯಾಗಿದೆ. ಒಟ್ಟು ಸೈಟ್ ಗಳಲ್ಲಿ ಅರ್ಧದಷ್ಟು ಸಾಮಾನ್ಯ ವರ್ಗ ಹಾಗೂ ಉಳಿದ ಶೇ.50. ರಷ್ಟನ್ನು ಮೀಸಲು ಅಡಿ ಹಂಚಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ಐದು ಸಾವಿರ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದ ವೇಳೆ ಮೊದಲ ಬಾರಿಗೆ ಹಿಂದುಳಿದವರಿಗೆ ಶೇ.10 ರಷ್ಟು ಸೈಟ್ ಗಳನ್ನು ಮೀಸಲಿಡಲಾಗಿತ್ತು. ವಿಕಲಚೇತನರಿಗೆ ಶೇ.1ರಷ್ಟು ಸೈಟ್ ಮಾತ್ರ ಮೀಸಲಿಟ್ಟಿದ್ದಕ್ಕೆ ಆ ವರ್ಗದವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸೈಟ್ ಹಂಚಿಕೆ ಮೀಸಲು ವಿವರ: ಪ್ರವರ್ಗ -1- ಶೇ.2, ಪರಿಶಿಷ್ಟ ಜಾತಿ-ಶೇ.15, ಪರಿಶಿಷ್ಟ ಪಂಗಡ-ಶೇ.3, ಹಿಂದುಳಿದ ವರ್ಗ-ಶೇ.10, ಮಾಜಿ ಸೈನಿಕರು-ಶೇ.5, ರಾಜ್ಯ ಸರ್ಕಾರಿ ನೌಕರರು-ಶೇ.8, ಕೇಂದ್ರ ಸರ್ಕಾರಿ ನೌಕರರು-ಶೇ.2, ವಿಕಲಚೇತನರು-ಶೇ.3 , ಸಾಧಕರು-ಶೇ.2 ಸಾಮಾನ್ಯ ವರ್ಗ-ಶೇ.50 ಮೀಸಲಿಡಲಾಗಿದೆ.
ಸರ್ಕಾರಿ ನೌಕರರ ಕೋಟಾ ಬದಲು: ವಿಕಲಚೇತನರಿಗೆ ಶೇ.3 ರಷ್ಟು ಸೈಟ್ ಗಳನ್ನು ಮೀಸಲಿಡಲು ರಾಜ್ಯ ಸರ್ಕಾರಿ ನೌಕರರ ಕೋಟಾವನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ ಶೇ.10ರಷ್ಟಿದ್ದ ಮೀಸಲನ್ನು ಶೇ.8ಕ್ಕೆ ಇಳಿಸಲಾಗಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಶೇ.2 ರಷ್ಟು ಸೈಟ್ ಗಳು ಖೋತಾ ಆಗಲಿವೆ.
ಆದರೆ, ಕೇಂದ್ರ ಸಕಾರಿ ನೌಕರರಿಗೆ ನಿಗದಿಯಾಗಿದ್ದ ಶೇ.2ರಷ್ಟು ಮಿತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಬೇರೆ ವರ್ಗದ ಕೋಟಾ ಬದಲಿಸಲು ಅಗತ್ಯ ಪ್ರಮಾಣದ ಮಿತಿ ಇಲ್ಲದ ಕಾರಣ ರಾಜ್ಯ ಸರ್ಕಾರಿ ನೌಕರರ ಕೋಟಾದಿಂದ ತೆಗೆದು ವಿಕಲಚೇತನರಿಗೆ ನೀಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications