Khata Andolana: ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ, ಬಿಬಿಎಂಪಿಯಿಂದ ಖಾತಾ ಆಂದೋಲನ, ವಿವರಗಳು ಇಲ್ಲಿವೆ
ಬಿಬಿಎಂಪಿಯ ಎಲ್ಲಾ ವಲಯಗಳಲ್ಲಿನ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಬೆಂಗಳೂರು, ಫೆಬ್ರವರಿ. 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶುಕ್ರವಾರ ನಗರದ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದೆ. ಫೆಬ್ರವರಿ 27 ರಂದು ನಗರದಲ್ಲಿ 'ಖಾತಾ ಆಂದೋಲನ' ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಯಾವುದೇ ನೋಂದಣಿ ಹೊಂದಿರದ ಪುರಸಭೆಯ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರು ತಮ್ಮ ಆಸ್ತಿಯನ್ನು ನಮೂನೆ ಎ ರಿಜಿಸ್ಟರ್ನಲ್ಲಿ ನೋಂದಾಯಿಸಬಹುದು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಹಾಗೂ ಈ ಸಂಬಂಧ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಇದೇ 27 ರಿಂದ ಖಾತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯಗಳಲ್ಲಿನ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಬೆಳಗ್ಗೆ 11:00 ರಿಂದ ಸಂಜೆ 4:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿರುವ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಖಾತಾ ಎನ್ನುವುದು ಆಸ್ತಿಯ ಮೌಲ್ಯಮಾಪನದ ಖಾತೆಯಾಗಿದ್ದು, ಆಸ್ತಿ ತೆರಿಗೆಯನ್ನು ಪಾವತಿಸುವ ಉದ್ದೇಶಕ್ಕಾಗಿ ಅದರ ಗಾತ್ರ, ಸ್ಥಳ ಮತ್ತು ಕಟ್ಟಡದ ಪ್ರದೇಶದಂತಹ ಆಸ್ತಿಯ ಬಗ್ಗೆ ವಿವರಗಳನ್ನು ದಾಖಲಿಸುತ್ತದೆ. ಇದು ಆಸ್ತಿ ತೆರಿಗೆ ಪಾವತಿಗೆ ಪ್ರಾಥಮಿಕವಾಗಿ ಹೊಣೆಗಾರರಾಗಿರುವ ವ್ಯಕ್ತಿಯ ಗುರುತಿಸುವಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಮತ್ತು ಯಾವುದೇ ಖಾತೆ ಹೊಂದಿರದ ನಾಗರಿಕರು ಸಹಾಯಕ ಕಂದಾಯ ಅಧಿಕಾರಿಗಳ ನ್ಯಾಯವ್ಯಾಪ್ತಿಯ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಡಾ.ದೀಪಕ್ ಆರ್.ಎಲ್ ತಿಳಿಸಿದ್ದಾರೆ.
ಖಾತಾ ಆಂದೋಲನದ ಮೇಲ್ವಿಚಾರಣೆಗೆ ವಲಯ ಉಪ ಆಯುಕ್ತರುಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿರುತ್ತದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ದೂರವಾಣಿ ಸಂಖ್ಯೆ 1533, 080- 22221188ಕ್ಕೆ ಹಾಗೂ ಕಚೇರಿ ವಿಳಾಸ ಪಡೆಯಲು ಪಾಲಿಕೆಯ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬುಹುದು.
ಆಸ್ತಿ ಮಾಲೀಕರು ಖಾತಾ ನೋಂದಣಿಗಾಗಿ ಆಸ್ತಿಯ ಸ್ಥಳ ಮತ್ತು ಅಳತೆಯನ್ನು ತೋರಿಸುವ ಪ್ರಮಾಣಪತ್ರಗಳು, ಸ್ವಯಂ ದೃಢೀಕರಿಸಿದ ರೇಖಾಚಿತ್ರಗಳಂತಹ ದಾಖಲೆಗಳನ್ನು ಹೊಂದಿರಬೇಕು.ಮಾಲೀಕರು ಅಗತ್ಯ ದಾಖಲೆಗಳನ್ನು ಹೊಂದಿಲ್ಲದಿದ್ದರೆ ಆಸ್ತಿಯನ್ನು ಫಾರ್ಮ್-ಬಿ ಅಡಿಯಲ್ಲಿ ನೋಂದಾಯಿಸಲಾಗುತ್ತದೆ.

'ಎ' ಖಾತಾ ಆಸ್ತಿಗಳು ನಿಜವಾದ ದಾಖಲೆಗಳನ್ನು ಹೊಂದಿರುವವು ಮತ್ತು ಅವುಗಳು ರಾಜ್ಯ ಏಜೆನ್ಸಿಗಳಿಂದ ಪರಿಶೀಲಿಸಲ್ಪಡುತ್ತವೆ. ಆದರೆ, 'ಬಿ' ಖಾತಾ ಆಸ್ತಿಗಳು ದಾಖಲಾತಿಯಲ್ಲಿ ಸಮಸ್ಯೆಯಿದ್ದು, ಉಲ್ಲಂಘನೆ, ಅನುಮೋದನೆಯಿಲ್ಲದೆ ನಿರ್ಮಿಸಲಾದ ಕಟ್ಟಡಗಳ ಅಡಿಯಲ್ಲಿ ಬರುತ್ತವೆ.
ಬಿಬಿಎಂಪಿಯು 2008 ರಿಂದ, ಬೈಲಾಗಳನ್ನು ಉಲ್ಲಂಘಿಸುವ ಆಸ್ತಿಗಳಿಗೆ 'ಎ' ಖಾತಾ ನೀಡುವುದನ್ನು ನಿಲ್ಲಿಸಿತು. ನಂತರ ನಾಗರಿಕ ಸಂಸ್ಥೆಯು 'ಬಿ' ರಿಜಿಸ್ಟರ್ ಅನ್ನು ನಿರ್ವಹಿಸಲು ಪ್ರಾರಂಭಿಸಿತು. ಇದನ್ನು 'ಬಿ' ಖಾತಾ ಆಸ್ತಿ ಎಂದು ಕರೆಯಲಾಯಿತು. 'ಬಿ' ರಿಜಿಸ್ಟರ್ ಇರುವ ಕಾರಣ 'ಬಿ' ಖಾತಾ ಆಸ್ತಿಗಳ ಮಾಲೀಕರಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಬಿಬಿಎಂಪಿಗೆ ಸಾಧ್ಯವಾಯಿತು. 2018 ರಿಂದ, 'ಬಿ' ಖಾತಾ ಆಸ್ತಿಗಳನ್ನು ಸಕ್ರಮಗೊಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಕಂದಾಯ ಅಧಿಕಾರಿಗಳು ಅನುಮೋದಿತವಲ್ಲದ ಕಟ್ಟಡಗಳ ಮಾಲೀಕರಿಗೆ 'ಬಿ' ಖಾತಾ ಬದಲಿಗೆ 'ಎ' ಖಾತಾ ಪ್ರಮಾಣಪತ್ರವನ್ನು ಅಕ್ರಮವಾಗಿ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇತ್ತೀಚೆಗೆ ನಾಲ್ವರು ಸದಸ್ಯರ ತಂಡವನ್ನು ರಚಿಸಿದ್ದಾರೆ. ದಾಸರಹಳ್ಳಿ, ಬೊಮ್ಮನಹಳ್ಳಿ, ಆರ್ ಆರ್ ನಗರ, ಮಹದೇವಪುರ ಮತ್ತು ಯಲಹಂಕ ವಲಯಗಳಲ್ಲಿ ಅಕ್ರಮಗಳ ದೂರುಗಳು ಹೆಚ್ಚಾಗಿವೆ.
-
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ: ಸರ್ಕಾರದ ವಿರುದ್ಧ ಜೋಶಿ ಆಕ್ರೋಶ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka Tax: ಕರ್ನಾಟಕದಿಂದ ಮತ್ತೆ ನಮ್ಮ ತೆರಿಗೆ - ನಮ್ಮ ಹಕ್ಕು ಅಭಿಯಾನದ ಸುಳಿವು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ











Click it and Unblock the Notifications