ಬಿಐಇಸಿಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸೆ.15ರಿಂದ ಬೀಗ

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಿರುವ ಕೋವಿಡ್ ಆರೈಕೆ ಕೇಂದ್ರವನ್ನು ಮುಚ್ಚಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ನಡೆದ ಸಭೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.

Recommended Video

      ಜಮೀರ್ ಅಹಮದ್ ಮತ್ತು ಸಂಜನಾ ಇಬ್ಬರೇ ಕೊಲಂಬೊ ಹೋಗಿದ್ರು | Oneindia Kannad

      ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 15ರಿಂದ ಮಾದಾವರ ಬಳಿ ಇರುವ ಬಿಐಇಸಿ ಕೋವಿಡ್ ಆರೈಕೆ ಕೇಂದ್ರವನ್ನು ಮುಚ್ಚಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 10 ಸಾವಿರ ಹಾಸಿಗೆಗಳನ್ನು ಹೊಂದಿರುವ ದೊಡ್ಡ ಆರೈಕೆ ಕೇಂದ್ರವಿದು.

      ಈ ಕೋವಿಡ್ ಆರೈಕೆ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ ಆಗಿದೆ. ಆರೈಕೆ ಕೇಂದ್ರವನ್ನು ಮುಚ್ಚಿ ಸದ್ಯ ಅದರಲ್ಲಿ ಇರುವ ರೋಗಿಗಳನ್ನು ಬೇರೆ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಆರೈಕೆ ಕೇಂದ್ರ ಮುಚ್ಚಲು ಒಪ್ಪಿಗೆ ನೀಡಿದ್ದಾರೆ.

      ಬೆಂಗಳೂರು ನಗರದಲ್ಲಿ ಶನಿವಾರ 3093 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,44,757. ಸಕ್ರಿಯ ಪ್ರಕರಣಗಳ ಸಂಖ್ಯೆ 41,479. ಕೋವಿಡ್ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ. ಆದ್ದರಿಂದ, ಆರೈಕೆ ಕೇಂದ್ರಗಳಿಗೆ ಯಾರೂ ದಾಖಲಾಗುತ್ತಿಲ್ಲ.

      10 ಸಾವಿರ ಬೆಡ್‌ ವ್ಯವಸ್ಥೆ

      10 ಸಾವಿರ ಬೆಡ್‌ ವ್ಯವಸ್ಥೆ

      ಮಾದವರದ ಬಳಿ ಬಿಬಿಎಂಪಿ 10 ಸಾವಿರ ಬೆಡ್‌ಗಳು ಇರುವ ದೇಶದ ಅತಿ ದೊಡ್ಡ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿತ್ತು. ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. 6 ಸಾವಿರ ರೋಗಿಗಳು ದಾಖಲಾಗಲು ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.

      1500 ಹಾಸಿಗೆಗಳು ಉದ್ಘಾಟನೆ

      1500 ಹಾಸಿಗೆಗಳು ಉದ್ಘಾಟನೆ

      ಬಿಇಐಸಿಯ ಕೋವಿಡ್ ಆರೈಕೆ ಕೇಂದ್ರದಲ್ಲಿ 1500 ಹಾಸಿಗೆಗಳನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ, ಬೆಂಗಳೂರು ನಗರದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ, ಆರೈಕೆ ಕೇಂದ್ರಕ್ಕೆ ಯಾರೂ ದಾಖಲಾಗಿತ್ತಿಲ್ಲ. 1500 ಹಾಸಿಗೆಯೂ ಭರ್ತಿಯಾಗಿಲ್ಲ.

      ಉಪಕರಣ ಸರ್ಕಾರಿ ಹಾಸ್ಟೆಲ್‌ಗೆ ರವಾನೆ

      ಉಪಕರಣ ಸರ್ಕಾರಿ ಹಾಸ್ಟೆಲ್‌ಗೆ ರವಾನೆ

      ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಉಕ್ಕಿನ ಮಂಚ, ಹಾಸಿಗೆ, ಫ್ಯಾನ್, ಕಸದ ಬುಟ್ಟಿ, ಬಕೆಟ್, ಮಗ್‌ಗಳನ್ನು ಸರ್ಕಾರಿ ಹಾಸ್ಟೆಲ್‌ಗಳಿಗೆ ಮತ್ತು ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಎನ್.ಮಂಜುನಾಥ ಪ್ರಸಾದ್ ಆದೇಶದಲ್ಲಿ ತಿಳಿಸಿದ್ದಾರೆ.

      ಎಲ್ಲೆಲ್ಲಿಗೆ ಪಿಠೋಪಕರಣಗಳ ರವಾನೆ

      ಎಲ್ಲೆಲ್ಲಿಗೆ ಪಿಠೋಪಕರಣಗಳ ರವಾನೆ

      ಬಾಗಲಕೋಟೆ ಕೃಷಿ ವಿವಿ ಹಾಸ್ಟೆಲ್‌ಗೆ, ಅಲ್ಪ ಸಂಖ್ಯಾತರ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ, ಜಿಕೆವಿಕೆಗೆ ತಲಾ 1 ಸಾವಿರ ಪಿಠೋಪಕರಣ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ 2500 ಪಿಠೋಪಕರಣ ಹಸ್ತಾಂತರ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಉಳಿದವುಗಳನ್ನು ಬೇಡಿಕೆ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗೆ ನೀಡಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+