ಬಿಬಿಎಂಪಿ ಕದನ : 2 ಕಾಂಗ್ರೆಸ್, 1 ಜೆಡಿಎಸ್ ನಾಮಪತ್ರ ತಿರಸ್ಕೃತ
ಬೆಂಗಳೂರು, ಆಗಸ್ಟ್ 12 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. ಇಬ್ಬರು ಕಾಂಗ್ರೆಸ್ ಮತ್ತು ಒಬ್ಬರು ಜೆಡಿಎಸ್ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಹೊಂಗಸಂದ್ರ
ವಾರ್ಡ್
ಕಾಂಗ್ರೆಸ್
ಅಭ್ಯರ್ಥಿ
ಕೆ.ಮಹೇಶ್ವರಿ
ಹಾಗೂ
ಕೆ.ಆರ್.
ಮಾರುಕಟ್ಟೆ
ವಾರ್ಡ್
ಅಭ್ಯರ್ಥಿ
ರಫಿಯಾ
ಖಾನಂ
ಮತ್ತು
ಕಾಚರಕನಹಳ್ಳಿ
ವಾರ್ಡ್
ಜೆಡಿಎಸ್
ಅಭ್ಯರ್ಥಿ
ರಾಕೇಶ್
ಜೈನ್
ಅವರ
ನಾಮಪತ್ರಗಳನ್ನು
ಚುನಾವಣಾಧಿಕಾರಿಗಳು
ವಿವಿಧ
ಕಾರಣಗಳಿಗಾಗಿ
ತಿರಸ್ಕರಿಸಿದ್ದಾರೆ.
[ಕಾಂಗ್ರೆಸ್
ಅಭ್ಯರ್ಥಿ
ನಾಮಪತ್ರ
ತಿರಸ್ಕೃತ]
ಆತ್ಮಹತ್ಯೆ ಯತ್ನ : ತಮ್ಮ ನಾಮಪತ್ರ ತಿರಸ್ಕೃತವಾದ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಕೇಶ್ ಜೈನ್ ಅವರು ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ಬಿಬಿಎಂಪಿ ಚುನಾವಣೆ ಪಕ್ಷಗಳ ಬಲಾಬಲ]
ನಾಮಪತ್ರ ಸಲ್ಲಿಕೆ ವೇಳೆ ಸಮರ್ಪಕ ದಾಖಲೆ ನೀಡದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಾಮತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಆ.13ರ ಗುರುವಾರ ಕೊನೆಯ ದಿನವಾಗಿದೆ.
ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲು : ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಭಾರತಿನಗರ ವಾರ್ಡ್ (ಸಂಖ್ಯೆ 91)ರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲು ಪಕ್ಷ ಉಮಾ ಮಹೇಶ್ವರ ಅವರು ಅಭ್ಯರ್ಥಿ ಎಂದು ಹೆಸರು ಪ್ರಕಟಿಸಿತ್ತು. ಆದರೆ, ಅಂತಿಮ ಹಂತದಲ್ಲಿ ಎಂ.ಪಾರಿ ಅವರು ನಾಮಪತ್ರ ಸಲ್ಲಿಸಿದ್ದಾರೆ.