ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:ಬಿಬಿಎಂಪಿ ಆಯುಕ್ತ ಮಂಜುನಾಥ್ ಸೇರಿ ಹಲವರಿಗೆ ಕೊರೊನಾ ಲಸಿಕೆ

|
Google Oneindia Kannada News

ಬೆಂಗಳೂರು,ಫೆಬ್ರವರಿ 10: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿ ಹಲವು ಸಿಬ್ಬಂದಿ ಕೊರೊನಾ ಲಸಿಕೆ ಹಾಕಿಸಿಕೊಂಡರು.

ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಮಂಗಳವಾರ ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತ ಅವರೊಂದಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ 2ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

ಭಾರತದಲ್ಲಿ ಒಂದೇ ದಿನ 11067 ಮಂದಿಗೆ ಕೊರೊನಾ ಪಾಸಿಟಿವ್ಭಾರತದಲ್ಲಿ ಒಂದೇ ದಿನ 11067 ಮಂದಿಗೆ ಕೊರೊನಾ ಪಾಸಿಟಿವ್

ವದಂತಿಗಳ ನಂಬಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಿಬ್ಬಂದಿಗಳಿಗೆ ಪ್ರೇರಣೆ ಹಾಗೂ ಅಭಯ ನೀಡುವ ಸಲುವಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮಂಗಳವಾರ ಲಸಿಕೆ ಹಾಕಿಸಿಕೊಂಡರು.

BBMP Commissioner Manjunath Prasad Takes The Covid 19 Vaccine at Head Office

ಕೊರೊನಾ ಮುಂಚೂಣಿ ಹೋರಾಟಗಾರರ ಕುರಿತು ಮಾತನಾಡಿ, ಭಾರತದಿಂದ ಇತರೆ ರಾಷ್ಟ್ರಗಳು ಲಸಿಕೆಗಾಗಿ ಬೇಡಿಕೆಗಳನ್ನು ಇಡುತ್ತಿವೆ. ದೇಶದಲ್ಲಿ ಉಚಿತ ದರದಲ್ಲಿ ಲಸಿಕೆ ನೀಡುತ್ತಿರುವಾಗ ಇಂತಹ ಅವಕಾಶವನ್ನು ಜನರು ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ನಿಯಮಗಳನ್ನೂ ಅನುಸರಿಸಿ, ಲಸಿಕೆ ಪಡೆದುಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Recommended Video

ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಭಯ ಪಡಬಾರದು. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇತರರಿಗೆ ಪ್ರೇರಣೆ ಹಾಗೂ ಉದಾಹರಣೆಯಾಗಬೇಕು. ಸಂದೇಹಗಳನ್ನು ಪರಿಹರಿಸಬೇಕು. ಲಸಿಕೆ ಪಡೆಯುವಂತೆ ಯಾರಿಗೂ ಬಲವಂತ ಮಾಡಬಾರದು ಎಂದರು.

English summary
Bruhat Bengaluru Mahanagara Palike (BBMP) Commissioner N Manjunatha Prasad, along with Administrator Gaurav Gupta and special commissioners D Randeep and Rajendra Cholan, took the Covid-19 vaccine on Tuesday. As part of Phase-2 of the Covid19 vaccination drive, many BBMP frontline workers also took the vaccine on Tuesday. After taking the jab, the Commissioner told officials to come forward and take the vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X