Bangalore metro: ಈ ಮೆಟ್ರೋ ಮಾರ್ಗದಲ್ಲಿ ಒಂದಲ್ಲ.. ಎರಡಲ್ಲ ಬರೋಬ್ಬರಿ 720 ಮರಗಳ ಕೊಂಬೆಗಳಿಗೆ ಬೀಳಲಿದೆ ಕೊಡಲಿ-ಮಾಹಿತಿ
ಬೆಂಗಳೂರು, ಏಪ್ರಿಲ್, 12: ಬೆಂಗಳೂರಿನ ನಮ್ಮ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಆದರೆ ಇದೀಗ ಈ ಮೆಟ್ರೋ ಮಾರ್ಗದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 750 ಮರಗಳ ಕೊಂಬೆಗಳಿಗೆ ಕೊಡಲಿ ಹಾಕಲು ಬಿಎಂಆರ್ಸಿಎಲ್ ಮುಂದಾಗಿದೆ. ಹಾಗಾದರೆ ಇದರ ಅಸಲಿ ಉದ್ದೇಶ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಮೆಟ್ರೋ ಹೋಗುವ ಮಾರ್ಗದಲ್ಲಿ ಯಾವುದೇ ಅಡೆತಡೆಗಳು ಇರಬಾರದು. ಒಂದು ವೇಳೆ ಏನಾದರೂ ಮರಗಳ ಕೊಬೆಗಳು ಅಡ್ಡ ಬಂದಿದ್ದರೆ ಮುಂಜಾಗ್ರತೆಗಾಗಿ ಅವುಗಳನ್ನು ಯಾವುದೇ ಬೇರೆ ದಾರಿಯಿಲ್ಲದೆ ಕತ್ತರಿಸಲಾಗುತ್ತದೆ.

ಮೆಟ್ರೊ ರೈಲಿನ ಸುರಕ್ಷತೆ ದೃಷ್ಟಿಯಿಂದ ವಯಾಡಕ್ಟ್ಗೆ ಹೊಂದಿಕೊಂಡಿರುವ ಮರಗಳ ಕೊಂಬೆಗಳನ್ನು ಕತ್ತರಿಸಲು ಬಿಎಂಆರ್ಸಿಎಲ್ ನಿರ್ಧಾರ ಮಾಡಿದೆ. ನಮ್ಮ ಮೆಟ್ರೋದ ವೈಟ್ಫೀಲ್ಡ್ನಿಂದ ಚಲ್ಲಘಟ್ಟವರೆಗೆ (ನೇರಳೆ ಮಾರ್ಗ) ಹಾಗೂ ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ (ಹಸಿರು ಮಾರ್ಗ)ವರೆಗಿನ ಒಟ್ಟು 74 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಯಾಡಕ್ಟ್ಗೆ ಹೊಂದಿಕೊಂಡಿರುವ ಸುಮಾರು 750 ಮರಗಳ ಕೊಂಬೆಗಳಿಗೆ ಕೊಡಲಿ ಹಾಕಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವರ್ಷಕ್ಕೆ ಎರಡು ಬಾರಿ ಟೊಂಗೆಗಳಿಗೆ ಕತ್ತರಿ ಹಾಕಲಾಗುತ್ತದೆ. ಇದೀಗ ನೇರಳೆ ಮಾರ್ಗದಲ್ಲಿನ 370 ಹಾಗೂ ಹಸಿರು ಮಾರ್ಗದಲ್ಲಿ 380 ಮರಗಳ ರೆಂಬೆಗಳನ್ನು 30 ಮೀಟರ್ ಕತ್ತರಿಸಲು ಬಿಎಂಆರ್ಸಿಎಲ್ ನಿರ್ಧಾರ ಮಾಡಿದೆ. ಇದಕ್ಕಾಗಿ 36 ಲಕ್ಷ ರೂಪಾಯಿ ಮೌಲ್ಯದ ಬಿಡ್ ಸಹ ಆಹ್ವಾನಿಸಿದ್ದು, ಇದಕ್ಕಾಗಿ 60 ಟನ್ ತೂಕದ ಹೈಡ್ರಾಲಿಕ್ ಕ್ರೇನ್ ಮತ್ತು ಮರದ ಕೊಂಬೆ ಕತ್ತರಿಸುವಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಸಂಸ್ಥೆ ಬಿಡ್ನಲ್ಲಿ ಭಾಗವಹಿಸಲು ನಿಯಮವನ್ನು ಹೊರಡಿಸಿದೆ.
ಹಸಿರು ಮಾರ್ಗದ ಶ್ರೀರಾಂಪುರ, ಸಂಪಿಗೆ ರಸ್ತೆ, ನ್ಯಾಷನಲ್ ಕಾಲೇಜು, ಲಾಲ್ಬಾಗ್, ಸೌತ್ ಎಂಡ್ ವೃತ್ತ, ಜಯನಗರ, ಆರ್.ವಿ.ರಸ್ತೆ, ಬನಶಂಕರಿ ಹಾಗೂ ಜೆಪಿ ನಗರದಲ್ಲಿ ಹೆಚ್ಚಿನ ಮರಗಳು ವಯಾಡಕ್ಟ್ಗೆ ಹೊಂದಿಕೊಂಡಿವೆ. ನೇರಳೆ ಮಾರ್ಗದಲ್ಲಿ ದೀಪಾಂಜಲಿ ನಗರ, ಅತ್ತಿಗುಪ್ಪೆ, ವಿಜಯನಗರ, ಹೊಸಹಳ್ಳಿ, ಮಾಗಡಿ ರಸ್ತೆ, ಟ್ರಿನಿಟಿ ಮತ್ತು ಹಲಸೂರು ನಿಲ್ದಾಣದ ಭಾಗದಲ್ಲಿ ಹೆಚ್ಚಿನ ಮರಗಳನ್ನು ಹೊಂದಿದೆ.
ಇನ್ನು ನೇರಳೆ ಮಾರ್ಗದಲ್ಲಿ ಹೆಚ್ಚು ಮರಗಳಿರುವ ಸಿಟಿ ರೈಲು ನಿಲ್ದಾಣ, ಸೆಂಟ್ರಲ್ ಕಾಲೇಜು, ವಿಧಾನಸೌಧ ಹಾಗೂ ಕಬ್ಬನ್ಪಾರ್ಕ್ ಭೂಗತ ಮಾರ್ಗ ಆಗಿರುವುದರಿಂದ ಮರಗಳು ಕೊಡಲಿ ಬೀಳುವುದನ್ನು ತಪ್ಪಿಸಿಕೊಳ್ಳಲಿವೆ.
ಮರಗಳ ಕೊಂಬೆಗಳು ಬೆಳೆದು ಮೆಟ್ರೊ ವಯಾಡಕ್ಟ್ಗೆ ಟಚ್ ಆಗುತ್ತಿವೆ. ಇನ್ನು, ಮಳೆಗಾಲದಲ್ಲಿ ಗಾಳಿ ಹೆಚ್ಚಿರುವುದರಿಂದ ನಿರಂತರವಾಗಿ ವಯಾಡಕ್ಟ್ಗೆ ಬಡಿದು ಹಾನಿ ಆಗಬಹುದು. ಮರಗಳು ಧರೆಗುರುಳುವ ಸಮಯದಲ್ಲಿ ರಭಸಕ್ಕೆ ಮೆಟ್ರೊ ಮಾರ್ಗಕ್ಕೆ ಹಾನಿ ಆಗಬಹುದು. ವಯಾಡಕ್ಟ್ ಮೇಲೆ ವಿದ್ಯುತ್ ರೈಲು ಹಳಿಗಳು ಇರುವುದಿಂದ ಆ ಕೊಂಬೆಗಳು ತಾಗಿದರೆ, ಆಪಾಯ ಉಂಟಾಗುವ ಸಾಧ್ಯತೆಯಿದೆ. ಸಿಗ್ನಲಿಂಗ್ ಸಮಸ್ಯೆ ಕೂಡ ಎದುರಾಗಬಹುದಾಗಿದ್ದು, ಈ ಎಲ್ಲಾ ದೃಷ್ಟಿಯಿಂದ ಮರಗಳ ಕೊಂಬೆಗಳಿಗೆ ಕೊಡಲಿ ಹಾಕಲಾಗುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications