Appu Agarbatti: 'ಅಪ್ಪು ಗಂಧದಗುಡಿ ಅಗರಬತ್ತಿ' ಉದ್ಯಮದ ಅಪ್ಡೇಟ್
ಬೆಂಗಳೂರು, ಏಪ್ರಿಲ್ 29: ಇದೇ ಏಪ್ರಿಲ್ 24ರಂದು ವರನಟ ಡಾ.ರಾಜಕುಮಾರ್ ಹುಟ್ಟು ಹಬ್ಬದ ದಿನವೇ ಹೊಸ ಉದ್ಯಮಕ್ಕೆ ಕಾಲಿಟ್ಟ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸೋಮವಾರ 'ಅಪ್ಪು ಗಂಧದಗುಡಿ ಅಗರಬತ್ತಿ' ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಿಮ್ಮ ಮನೆಗೆ ಅಪ್ಪು ಅಗರಬತ್ತಿಗಳು ಈ ಪ್ಯಾಕೇಟ್ನಲ್ಲಿ ಬರಲಿವೆ ಎಂದು ಮಾಹಿತಿ ನೀಡಿದ್ದಾರೆ.
ಹೌದು, ಅಪ್ಪು ಗಂಧದಗುಡಿ ಅಗರಬತ್ತಿ ಕುರಿತು ಸೋಮವಾರ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ''ಪ್ರಸ್ತುತಪಡಿಸುತ್ತಿದ್ದೇವೆ ಅಪ್ಪು ಗಂಧದಗುಡಿ ಅಗರಬತ್ತಿ, ಇದು ಸುಗಂಧದ ಪರಂಪರೆ'' ಎಂದು ಬರೆದುಕೊಂಡಿದ್ದಾರೆ.

ಅಪ್ಪು ಅಗರಬತ್ತಿ ಜೊತೆಗೆ ಕಡ್ಡಿಪೊಟ್ಟಣ ಉಚಿತ ಎಂಬ ಮಾಹಿತಿ ಈ ಪೋಸ್ಟ್ನಲ್ಲಿದೆ. ಅಶ್ವಿನಿ ಅಪ್ಪು ಅವರ ಈ ಪೋಸ್ಟ್ ಅನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಶೇರ್ ಲೈಕ್ ಕೊಟ್ಟು ಬೆಂಬಲಿಸುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಬಿಳಿ ಶರ್ಟು ಪಂಚೆ ತೊಟ್ಟ ಅಪ್ಪು ಫೋಟೋ ಇರುವ ಅರಬತ್ತಿ ಪ್ಯಾಕೇಟ್ ಇದಾಗಿದೆ.
ಪೂಜೆಯಲ್ಲಿ ಸುಗಂಧ ಭರಿತ ಸ್ನೇಹ
ಈ ಅಗರಬತ್ತಿ ಬಳಸುವ ಮುಖೇನ ನೀವು ದಿನನಿತ್ಯ ಪೂಜೆಯಲ್ಲಿ ಸುಗಂಧ ಭರಿತ ಸ್ನೇಹ ಇರಲಿದೆ ಎಂದು ಪ್ಯಾಕೇಟ್ ಮೇಲೆ ಬರೆಯಲಾಗಿದೆ. ಅಪ್ಪು ಅವರು ಬದುಕಿರುವಾಗಲೇ ಈ ಕುರಿತು ಒಂದಷ್ಟು ಮಾತುಕತೆಗಳು ನಡೆದಿದ್ದವು. ಆದರೆ ಯಾವುದು ಅಂತಿಮವಾಗಿರಲಿಲ್ಲ.
ಇದೀಗ ಅಗರಬತ್ತಿ ಉದ್ಯಮದ ರಾಜೇಶ್ ಎಂಬುವವರು ಅಶ್ವಿನಿ ಅವರ ಬಳಿ ಮಾತನಾಡಿ ಒಪ್ಪಂದದ ಮೂಲಕ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ. ಈ ಕುರಿತು ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವೇ ಹೊಸ ಉದ್ಯಮ ಲೋಕಾರ್ಪಣೆ ಮಾಡಲಾಗಿತ್ತು.

ಅಪ್ಪಾಜಿ ಹುಟ್ಟು ಹಬ್ಬ ಹಾಗೂ ಗಂಧದಗುಡಿ ಸಿನಿಮಾ ಐವತ್ತು ವರ್ಷದ ಸ್ಮರಣೀಯ ಇಂದಿನ ನೆನಪಿನಲ್ಲಿ ಅಪ್ಪು ಗಂಧದಗುಡಿ ಅಗರಬತ್ತಿಯೊಂದಿಗೆ ಮಹತ್ವದ ದಿನಗಳನ್ನು ಸ್ಮರಿಸೋಣ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಬರೆದುಕೊಂಡಿದ್ದಾರೆ. ಇದೀಗ ಹೊಸ ಪ್ಯಾಕೇಟ್ಗಳನ್ನು ಪೋಸ್ಟ್ ಮಾಡಿದ್ದಾರೆ.
ಆದಷ್ಟು ಶೀಘ್ರವೇ ನಾಡಿನ ಪ್ರತಿ ಮನೆ ಮನೆಯಲ್ಲೂ, ಅಪ್ಪು ಅಭಿಮಾನಿಗಳ ಮನೆಯಲ್ಲೂ ಅಪ್ಪು ಹೆಸರಿನ ಗಂಧದಗುಡಿ ಅಗರಬತ್ತಿಗಳು ಬೆಳಗಲಿವೆ.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ












Click it and Unblock the Notifications