ಆನೇಕಲ್ ನಲ್ಲಿರೌಡಿ ಪಟಾಲಂಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ !
ಬೆಂಗಳೂರು, ಡಿಸೆಂಬರ್ 11: ನೀವೇನ್ ಸ್ವತಂತ್ರ್ಯ ಹೋರಾಟಗಾರರೇ ? ಯಾರಿಂದಲೋ ಪೋನ್ ಮಾಡಿಸೋದು ಬಿಟ್ಟು ಬಿಡಿ. ಸಿಂಗಲ್ ಕೇಸ್ ಆದ್ರೂ ಮನೆಗೆ ನುಗ್ಗಿ ಹೊಡೀತೀನಿ, ಇದೇ ನನ್ನ ಕೊನೆ ವಾರ್ನಿಗ್ . ಕಣ್ಣು ಮುಚ್ಚಿ ಬೆಕ್ಕು ಹಾಲು ಕುಡಿದ್ರೆ ಪ್ರಪಂಚಕ್ಕೆ ಗೊತ್ತಾಗಲ್ಲ ಅಂತ ಟೂಲ್ಸ್ ಮುಟ್ರಿದ್ರೆ ಉಳಿಗಾಲ ಇರಲ್ಲ ಹುಷಾರ್ !
Recommended Video
ಆನೇಕಲ್ ವ್ಯಾಪ್ತಿಯ ರೌಡಿಗಳಿಗೆ ಡಿವೈಎಸ್ಪಿ ಮಹದೇವಪ್ಪ ಅವರು ರೌಡಿ ಪಟಾಲಂಗೆ ಕೊಟ್ಟಿರುವ ವಾರ್ನಿಂಗ್ ಇದು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಿದರು. ಆನೇಕಲ್ ಸದ್ಯದಲ್ಲಿ ಭೂ ವಿವಾದಗಳ ಅಗ್ರಗಣ್ಯ ಪ್ರದೇಶ. ಹೀಗಾಗಿ ರೌಡಿ ಪಟಾಲಂ ಕೂಡ ಅಷ್ಟೇ ದೊಟ್ಟ ಮಟ್ಟದಲ್ಲಿ ಬೆಳೆದು ನಿಂತಿದೆ. ಇತ್ತೀಚೆಗೆ ಆನೇಕಲ್ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆಯಾಗಿರುವ ಮಹದೇವಪ್ಪ ರೌಡಿ ಪಟಾಲಂಗೆ ಖಡಕ್ ವಾರ್ನಿಂಗ್ ರವಾನಿದ್ದಾರೆ.
ರೌಡಿಗಳು ಕಾಲಾಹರಣ ಮಾಡುಕ್ಕಿಂತಲೂ ಒಳ್ಳೆ ತನದಿಂದ ಬದಕಲು ಪ್ರಯತ್ನಿಸಿ. ಎಸ್ಪಿ ಸಹೇಬ್ರ ಮಾತಿನಂತೆ ಒಳ್ಳೆಯ ಪ್ರಜೆಗಳಾಗಲು ಪ್ರಯತ್ನಿಸಿ. ನನಗೆ ತಹಸೀಲ್ದಾರ್ ಮುಚ್ಚಳಿಕೆ ಕೊಟ್ಟಿದ್ದಾರೆ. ನನ್ನದು ಮುಗಿಯತು ಎಂದು ಏನಾದ್ರೂ ಮಾಡಿದ್ರೆ ಕತೆ ಮುಗಿಸಬೇಕಾಗುತ್ತೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಪ್ರಪಂಚಕ್ಕೆ ಗೊತ್ತಾಗಲ್ಲ ಎಂದು ಬಾಲ ಬಿಚ್ಚಿದರೆ ಕಥೆ ಬೇರೆಯದ್ದ ಆಗುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಕೂಡ ಅಷ್ಟೇ ಯಾವುದೇ ಸಣ್ಣ ದೂರು ನಿಮ್ಮ ಬಗ್ಗೆ ಬರಬಾರದು. ಪಂಚಾಯಿತಿ ಚುನಾವಣೆ ಮುಗಿದ ಮೇಲು ಕೂಡ ಅಷ್ಟೇ ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಿ. ಒಂದು ಅಪರಾಧದಲ್ಲಿ ನಿಮ್ಮ ಹೆಸರು ಕೇಳಿ ಬಂದರೂ ಪೊಲೀಸರನ್ನು ಮನೆಗೆ ನುಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಳ್ಳೆಯವರಾಗಿ ಬದುಕಿ. ಈ ಬಗ್ಗೆ ನೇರವಾಗಿ ತಮ್ಮ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ. ಅದು ಬಿಟ್ಟು ಬೇರೆಯವರಿಂದ ಒತ್ತಡ ಹಾಕಿಸಿದ್ರೆ, ಪೋನ್ ಮಾಡಿಸಿದ್ರೆ ಅದು ನನ್ನ ಬಳಿ ನಡೆಯಲ್ಲ. ನಿಮ್ಮದೇನಿದ್ದರೂ ಅಹವಾಲು ಇದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಸಲ್ಲಿಸಿ. ನಿಜವಾಗಿಯೂ ಒಳ್ಳೆಯವರಾಗಿರುವುದು ಕಂಡು ಬಂದರೆ ನಾನೇ ಎಸ್ಪಿಯವರಿಗೆ ಶಿಫಾರಸು ಮಾಡುತ್ತೇನೆ. ಅದು ಬಿಟ್ಟು ಏನಾದ್ರೂ ಅಪರಾಧ ಚಟುವಟಿಕೆಯಲ್ಲಿ ಹೆಸರು ಕೇಳಿ ಬಂದರೆ ಸುಮ್ಮನೆ ಬಿಡಲ್ಲ. ರೌಡಿಗಳು ನೀವು, ಸ್ವಾತಂತ್ರ್ಯ ಹೋರಾಟಗಾರರಂತೆ ಯಾರಿಂದಲೋ ಪೋನ್ ಮಾಡಿ ಶಿಫಾರಸು ಮಾಡುವುದನ್ನು ಮೊದಲು ಬಿಡಿ. ರೌಡಿ ಎಂಬ ಪಟ್ಟ ಕಟ್ಟಿಕೊಂಡು ಬದುಕೋದನ್ನು ಬಿಟ್ಟು ಸಮಾಜದ ಸಜ್ಜನ ವ್ಯಕ್ತಿಗಳಾಗಿ ಬದುಕಿ. ಪ್ರತಿ ರೌಡಿ ಪೆರೇಡ್ ನಲ್ಲೂ ತಪ್ಪದೇ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಡಿವೈಎಸ್ಪಿ ರವಾನಿಸಿರುವ ವಾರ್ನಿಂಗ್ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications