ಸಂತ್ರಸ್ತ ನೇಪಾಳಿಗಳಿಗಾಗಿ ಬೆಂಗಳೂರಲ್ಲಿ ಸೂಫಿ ಸಂಗೀತ
ಬೆಂಗಳೂರು, ಜುಲೈ, 04: ಸೂಫಿ ಸಂಗೀತ ಇಷ್ಟಪಡುವರು ಮುಂದಿನ ವಾರ ಚೌಡಯ್ಯ ಸ್ಮಾರಕ ಭವನದಲ್ಲಿ ಗಾಯಕಿ ಕವಿತಾ ಸೇಠ್ ಅವರ ಗಾನಸುಧೆಯಲ್ಲಿ ಮುಳುಗೇಳಬಹುದು. ನೇಪಾಳದ ಭೂಕಂಪ ಸಂತ್ರಸ್ತರಿಗಾಗಿ ಕವಿತಾ ಅವರು ದೇಣಿಗೆ ಸಂಗ್ರಹಿಸಲು ಈ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸ್ಪಿರಿಟ್ ಆಫ್ ಸ್ಕ್ಯಾಕ್ರಿಫೈಸ್ ಹೆಸರಿನ ಈ ಗಾಯನ ಕಾರ್ಯಕ್ರಮವನ್ನು ಪರಿಕ್ರಮ ಫೌಂಡೇಷನ್, ಕಾಲಿಯೋಪ್ ಇವೆಂಟ್ಸ್ ಹಾಗೂ ಎನಿ ಫೌಂಡೇಷನ್ ಆಯೋಜಿಸುತ್ತಿದೆ. ಒನ್ ಇಂಡಿಯಾ ಕೂಡಾ ಈ ಸಾಮಾಜಿಕ ಕಳಕಳಿ ಕಾರ್ಯಕ್ರಮಕ್ಕೆ ಕೈಜೋಡಿಸಿದೆ.
ನೇಪಾಳದಲ್ಲಿ ಭೂಕಂಪಪೀಡಿತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ದೃಷ್ಟಿಯಿಂದ ಪರಿಕ್ರಮ ವಿದ್ಯಾರ್ಥಿಗಳು ಈ ಸಂಗೀತ ಆಯೋಜನೆಯ ಬಗ್ಗೆ ಉತ್ಸುಕರಾಗಿದ್ದರು. ಕಾಲಿಯೋಪ್ ಇವೆಂಟ್ಸ್ ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಕುಮಾರ್ ಅವರು ಕೂಡಾ ನೆರವು ನೀಡಲು ಮುಂದಾದರು.

ನೇಪಾಳದಲ್ಲಿ ಭೂಕಂಪದಿಂದ ರಕ್ಷಿಸಬಲ್ಲ ಶಾಲೆಗಳ ನಿರ್ಮಾಣಕ್ಕೆ ಎಎನ್ ಐ ಫೌಂಡೇಷನ್ ಮುಂದಾಗಿದೆ. ಇದಕ್ಕೆ ಇತರೆ ಸಮಾನ ಮನಸ್ಕ ಸಂಸ್ಥೆಗಳು ಕೈಜೋಡಿಸಿವೆ. ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಅನುಭವ ಹೊಂದಿರುವ ಕ್ಯಾಲಿಯೋಪ್ ಇವೆಂಟ್ಸ್ ಸಂಸ್ಥೆ ಈಗ ಜುಲೈ 11ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸೂಫಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮಕ್ಕೆ ಒನ್ ಇಂಡಿಯಾ.ಕಾಂ ಅಲ್ಲದೆ ಸಿಎಎನ್ ಐಬಿಎನ್, ಐಡೆಂಟಿಟಿ, ರೇಡಿಯೋ ಸಿಟಿ, ಬುಕ್ ಮೈಶೋ, ಹಾನಿಕೂಂಬ್ ಕೂಡಾ ಸಹ ಪ್ರಾಯೋಜಕರಾಗಿದ್ದಾರೆ. Kavita Seth Live Fund Raiser for Nepal School ಕಾರ್ಯಕ್ರಮದ ಟಿಕೆಟ್ ಗಾಗಿ ಕ್ಲಿಕ್ ಮಾಡಿ... ಕವಿತಾ ಅವರ ಗಾಯನದ ಝಲಕ್ ಇಲ್ಲಿದೆ:
(ಒನ್ ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications