‘ಏರೋ ಇಂಡಿಯಾ 2021’ ರಲ್ಲಿ ಹಾರಾಟ ನಡೆಸಲು ‘ಏರ್ಬಸ್’ ಸಜ್ಜು
ಬೆಂಗಳೂರು,ಜನವರಿ 20: ಬೆಂಗಳೂರಿನಲ್ಲಿ ಫೆ.3 ರಿಂದ 5 ವರೆಗೆ ನಡೆಯಲಿರುವ ಪ್ರತಿಷ್ಠಿತ 'ಏರೋ ಇಂಡಿಯಾ 2021' ಪ್ರದರ್ಶನದಲ್ಲಿ ತನ್ನ ಸುಧಾರಿತ, ಸುಸ್ಥಿರ ವೈಮಾನಿಕ ತಂತ್ರಜ್ಞಾನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸಲು ಏರ್ಬಸ್ ಸಂಸ್ಥೆ ಸಜ್ಜಾಗಿದೆ.
ಈ ಪ್ರದರ್ಶನ ಏರ್ಬಸ್ನ ವಿಶೇಷ ಆವಿಷ್ಕಾರಗಳ ಉತ್ಪನ್ನಗಳು, ಗ್ರಾಹಕರ ಸೇವೆಗಳು ಹಾಗೂ ತರಬೇತಿ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ದೇಶದಲ್ಲಿ ಸುಸ್ಥಿರ ವೈಮಾನಿಕ ಪರಿಸರವನ್ನು ಅಭಿವೃದ್ಧಿಪಡಿಸುವತ್ತ ಕೇಂದ್ರೀಕರಿಸಿದ ಕಂಪನಿಯ ತಂತ್ರಗಾರಿಕೆಯ ಸ್ಥಳಿಯ ಉದ್ಯಮ ಪಾಲುದಾರಿಕೆಯನ್ನು ಬಿಂಬಿಸಲು ಒಂದು ವಿಭಾಗವನ್ನು ಮೀಸಲಿರಿಸಲಾಗಿದೆ.
ಪ್ರದರ್ಶನದ ಹಾಲ್ ಬಿ ಯಲ್ಲಿ ಸ್ಟ್ಯಾಂಡ್ ಬಿ .2.6 ನಲ್ಲಿ ಏರ್ಬಸ್ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಸಿ 295 - ಮಧ್ಯಮ ಸಾರಿಗೆ ವಿಮಾನದ ಸ್ಕೇಲ್ ಮಾದರಿ ಮತ್ತು ಎ 330 ಎಂಆರ್ಟಿಟಿ - ಮಲ್ಟಿ-ರೋಲ್ ಟ್ಯಾಂಕರ್ ಟ್ರಾನ್ಸ್ಪೋರ್ಟ್ (ಎಂಆರ್ಟಿಟಿ) ವಿಮಾನದ ಡಿಜಿಟಲ್ ಪ್ರದರ್ಶನ ಇರುತ್ತದೆ. ಹೆಲಿಕಾಪ್ಟರ್ಗಳಿಂದ ಹಿಡಿದು H225M ನ ಸ್ಕೇಲ್ ಮಾದರಿಗಳು, ಯುದ್ಧವಿಶೇಷ ಬಹುಪಯೋಗಿ ಹೆಲಿಕಾಪ್ಟರ್ ಮತ್ತು ಎಲ್ಲಾ ಹವಾಮಾನಕ್ಕೆ ಸೂಕ್ತವಾಗುವ ಬಹುಪಾತ್ರ ಬಲದ ಗುಣಕ ಎಎಸ್565ಎಂಬಿಇ ಪ್ಯಾಂಥರ್ ಇರಲಿವೆ. ಇದರ ವಿಶೇಷ ಆಕರ್ಷಣೆಯೆಂದರೆ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿರುವ ಎಸ್ 850 ರಾಡಾರ್, ವ್ಯಾಪಕವಾದ ಎಸ್ಎಆರ್ ಸಾಮರ್ಥ್ಯಗಳನ್ನು ನೀಡುವ ಈ ಉನ್ನತ ಶಕ್ತಿಯ ಉಪಗ್ರಹದಲ್ಲಿ ಹೆಚ್ಚಿನ ಸಂಖ್ಯೆಯ ಗುರಿಗಳ ಮೇಲ್ವಿಚಾರಣೆ ಮತ್ತು ಆಗಾಗ್ಗೆ ಪುನರಾವರ್ತನೆಗಳು ಮತ್ತು ಒಂದೇ ಪಾಸ್ನಲ್ಲಿ ವರ್ಧಿತ ಕಾರ್ಯಕ್ಷಮತೆ ಇರುತ್ತದೆ.

ಏರ್ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲ್ಲಾರ್ಡ್, ''ಏರೋ ಇಂಡಿಯಾದಲ್ಲಿ "ಏರ್ಬಸ್" ಭಾಗವಹಿಸುವಿಕೆಯು ಭಾರತೀಯ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ತ್ವರಿತ ಆಧುನೀಕರಣ ಮತ್ತು ದೇಶೀಕರಣಕ್ಕೆ ನಮ್ಮ ಬದ್ಧತೆಯ ಪ್ರದರ್ಶನವಾಗಿದೆ. ಈ ವಲಯದಲ್ಲಿ ಸಾಧಿಸಿದ ನಾವೀನ್ಯತೆಗಳು ಮತ್ತು ತಾಂತ್ರಿಕ ಪ್ರಗತಿಯನ್ನು ಉದ್ಯಮಿಗಳು, ಜನರ ಮುಂದಿಡಲು ಇದು ಒಂದು ಪ್ರಮುಖ ವೇದಿಕೆಯಾಗಿದೆ. ಮತ್ತು ಪ್ರದರ್ಶನಕ್ಕೆ ನಮ್ಮ ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ನಮಗೆ ಹೆಮ್ಮೆ ಇದೆ" ಎಂದಿದ್ದಾರೆ.

Recommended Video
ಏರ್ಬಸ್ ಪ್ರದರ್ಶಣಕ್ಕೆ ಭೇಟಿ ನೀಡುವವರು ಕಂಪನಿಯ ಅಳವಡಿಸಿಒಂಡಿರುವ 'ಮೇಕ್ ಇನ್ ಇಂಡಿಯಾ', 'ಸ್ಕಿಲ್ ಇಂಡಿಯಾ' ಮತ್ತು 'ಸ್ಟಾರ್ಟ್ಅಪ್ ಇಂಡಿಯಾ' ಉಪಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು. ಏರ್ಬಸ್ 'ಮೇಕ್ ಇನ್ ಇಂಡಿಯಾ' ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ ಮತ್ತು ಏರ್ಬಸ್ ಭಾಗವಹಿಸುತ್ತಿರುವ ಹಲವಾರು ರಕ್ಷಣಾ ಯೋಜನೆಗಳು ಸಾವಿರಾರು ಹೊಸ ಉದ್ಯೋಗಗಳು, ಜನರ ಕೌಶಲ್ಯ, ತಂತ್ರಜ್ಞಾನ ಮತ್ತು ಪೂರೈಕೆದಾರ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಭರವಸೆಯನ್ನು ಕಾಪಾಡಿಕೊಂಡು ಬಂದಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD










Click it and Unblock the Notifications