ಎಎಪಿ ಕಾರ್ಯಕರ್ತರಿಗೆ ಜನ ಸಾಮಾನ್ಯನ ಪ್ರಶ್ನೆ; ವಿಡಿಯೋ ವೈರಲ್
ಬೆಂಗಳೂರು, ಜುಲೈ08: ಲೋಕದ ಡೊಂಕು ತಿದ್ದುವ ಮೊದಲು ನಿಮ್ಮ ಡೊಂಕುಗಳನ್ನು ಸರಿ ಪಡಿಸಿಕೊಳ್ಳಿ ಎಂಬುದು ಲೋಕ ರೂಢಿಯಲ್ಲಿರುವ ಮಾತಾಗಿದೆ. ಆಮ್ ಆದ್ಮಿ ಪಕ್ಷ ದೇಶದ ಡೊಂಕನ್ನು ತಿದ್ದಲು ಮುಂದಾಗಿದೆ. ಆದರೆ ಅವರದೇ ಪಕ್ಷದ ಕಾರ್ಯಕರ್ತರನ್ನು ತಿದ್ದಲು ಸಾಧ್ಯವಾಗುತ್ತಿಲ್ಲವೇ?. ದೇಶದ ನೆಲದ ಕಾನೂನಿಗೆ ಗೌರವ ಕೊಡದ ಕಾರ್ಯಕರ್ತರು ಹೆಲ್ಮೆಟ್ ಹಾಕದೆ ರಸ್ತೆ ರಸ್ತೆಯಲ್ಲಿ ಸುತ್ತುವಾಗ ಅವರನ್ನು ಸಾಮಾನ್ಯನೊಬ್ಬ ಪ್ರಶ್ನಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆಮ್ ಆದ್ಮಿಯ ಕಾರ್ಯಕರ್ತರು ಬೆಂಗಳೂರಿನ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಒಂದು ವಾಹನದಲ್ಲಿ ಇಬ್ಬರು ಹೋಗುವ ಸಂದರ್ಭದಲ್ಲಿ ಹಿಂಬದಿ ಸವಾರ ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಈ ಸಮಯದಲ್ಲಿ ಜನ ಸಾಮಾನ್ಯ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾನೆ?. ಕೆಲವರು ಉತ್ತರಿಸದೇ ಹೋದರೆ ಇಲ್ಲೋಬ್ಬ ಅಲ್ಲೇ ಕೊಡುತ್ತಾರೆ ಎಂದು ಹೇಳಿ ಹೋಗಿದ್ದಾನೆ. ಈ ಎಲ್ಲಾ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ಗೆ ಜೈಕಾರ; ಎಎಪಿಯ ನಾಯಕರೂ ಆಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ಗೆ ಚನ್ನಾಗಿಯೇ ಕಾನೂನುಗಳು ಗೊತ್ತಿದೆ. ಕಾನೂನನ್ನು ಉಲ್ಲಂಘಿಸಬಾರದು ಎಂಬುದು ತಿಳಿದಿದೆ. ಆದರೆ ಭಾಸ್ಕರ್ ರಾವ್ಗೆ ಜೈಕಾರ ಹಾಕುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೆಲದ ಕಾನೂನಿಗೆ ಗೌರವವನ್ನು ನೀಡದೇ ಹೆಲ್ಮೆಟ್ ರಹಿತವಾದ ಪ್ರಯಾಣನ್ನು ಮಾಡುತ್ತಿದ್ದಾರೆ. ಪಕ್ಷ ಇಂಥ ಕಾರ್ಯಕರ್ತರಿಗೆ ಹಿತವಚನವನ್ನು ಹೇಳಬೇಕಿದೆ. ಇನ್ನು ಕಾರ್ಯಕರ್ತರು ಪುನೀತ್ ರಾಜ್ ಕುಮಾರ್ಗೆ ಸಹ ಜೈಕಾರವನ್ನು ಹಾಕುತ್ತಾ ಆಮ್ ಆದ್ಮಿ ಪಕ್ಷದ ಮುಖಂಡರಂತೆ ಬಿಂಬಿಸುತ್ತಿರುವುದು ಖಂಡನೀಯ ವಿಚಾರವಾಗಿದೆ. ಯಾಕೆಂದರೇ ಅಪ್ಪು ಯಾವತ್ತು ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿರಲಿಲ್ಲ.
ಎಲ್ಲಾ ಪಕ್ಷದ ಕಾರ್ಯಕರ್ತರು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಾರೆ ಅನ್ನೋದು ನಿಜ ಸಂಗತಿಯೇ. ಆದರೆ ಎಲ್ಲ ಪಕ್ಷಗಳಿಗಿಂತ ತಾವೂ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷವೂ ಬೇರೆದವರಂತೆ ಮಾಡುತ್ತಾರೆ, ನಾವೂ ಮಾಡುತ್ತೇವೆ ಎಂದರೆ ಅರ್ಥವೇನು?. ಆಮ್ ಆದ್ಮಿ ಪಕ್ಷವೂ ವಿಭನ್ನವಾಗಿ ಗುರುತಿಸಿಕೊಳ್ಳಬೇಕಾದರೆ ಬೇರೆ ಪಕ್ಷಕ್ಕೂ ತಮ್ಮ ಪಕ್ಷಕ್ಕೂ ಇರುವ ವ್ಯತ್ಯಾಸ ಜನರಿಗೆ ತಿಳಿಯಬೇಕಲ್ಲವೇ.

ಸಂಚಾರಿ ಪೊಲೀಸರು ಹಾಕಬೇಕಿದೆ ದಂಡ; ರಾಜ್ಯದ ಯಾವುದೇ ಪಕ್ಷಕದ ಕಾರ್ಯಕರ್ತರು ಬೈಕ್ ಜಾಥಾವನ್ನು ಮಾಡುವಾಗ ಹೆಲ್ಮೆಟ್ ಧರಿಸಬೇಕು. ಆದರೆ ಸಂಚಾರಿ ಪೊಲೀಸರು ಗುಂಪು ಗುಂಪಾಗಿ ಹೋಗುವ ಪಕ್ಷಗಳ ಕಾರ್ಯಕರ್ತನನ್ನು ಹಿಡಿದು ದಂಡವನ್ನು ಹಾಕುವುದಿಲ್ಲ. ಇದೇ ಧೈರ್ಯದ ಮೇಲೆ ಪಕ್ಷಗಳ ಕಾರ್ಯಕರ್ತರು ಜನರಿಗೂ ತೊಂದರೆಯಾಗುವ ರೀತಿಯಲ್ಲಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಸಂಚಾರವನ್ನು ಮಾಡುತ್ತಾರೆ. ಇಂಥವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದರೆ ಬೈಕ್ ತೆಗೆಯುವ ಮುನ್ನವೇ ತಲೆಗೆ ಹೆಲ್ಮೆಟ್ ಧರಿಸಿ ಹೊರಡುತ್ತಾರೆ.
Recommended Video
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications