ರಜನೀಕಾಂತ್ ರಾಜಕೀಯ ಅರಂಗೇಟ್ರಂಗೆ ಬೆಂಗಳೂರಿನ ಏಜೆನ್ಸಿ ನೆರವು
ಬೆಂಗಳೂರು, ಮೇ 29: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಅರಂಗೇಟ್ರಂಗೆ ಸಂಬಂಧಿಸಿದ ಹಾಗೆ ಒಂದೊಂದಾಗಿ ಸುದ್ದಿ ಹೊರಬೀಳುತ್ತಿದೆ. ಹೂಬೇಹೂಬು ಅವರ ಸಿನಿಮಾದ ಬಗ್ಗೆ ಹೇಗೆ ಇಷ್ಟಿಷ್ಟೇ ಸುದ್ದಿ ಬಹಿರಂಗವಾಗುತ್ತದೆಯೋ ಹಾಗೆ. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದರೆ ಬೆಂಗಳೂರು ಮೂಲದ ಏಜೆನ್ಸಿಯೊಂದನ್ನು ರಜನಿ ಸಂಪರ್ಕಿಸಿದ್ದಾರಂತೆ.
ರಜನಿ ರಾಜಕೀಯ ಪ್ರವೇಶಕ್ಕೆ ಇದು ಸಹಾಯ ಮಾಡಲಿದೆಯತೆ. ಅಂಕಿ-ಅಂಶಗಳ ಪೂರೈಕೆ, ಸಲಹೆ-ಸೂಚನೆಗಳನ್ನು ಈ ಏಜೆನ್ಸಿ ನೀಡುತ್ತದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ತಮಿಳುನಾಡಿನ ಮತಗಳ ಹಂಚಿಕೆ ಹೇಗೆ ಆಗಿದೆ, ಸಾರ್ವಜನಿಕ ಸಮಸ್ಯೆಗಳು ಮುಂತಾದವುಗಳ ಬಗ್ಗೆ ರಜನಿಗೆ ಮಾಹಿತಿ ಪೂರೈಸುತ್ತದೆ ಈ ಏಜೆನ್ಸಿ. ಆ ಮೂಲಕ ರಜನಿ ಪ್ರಚಾರಕ್ಕೆ ಸಹಾಯ ಆಗುತ್ತದೆ.[ಜುಲೈ ಕೊನೆಗೆ ರಾಜಕೀಯ ಪ್ರವೇಶ ಘೋಷಣೆ: ಸುಳಿವು ಕೊಟ್ಟ ರಜನಿ ಸಹೋದರ]

ವರದಿಗಳ ಪ್ರಕಾರ ರಜನೀಕಾಂತ್ ಸ್ವಂತ ಪಕ್ಷವೊಂದನ್ನು ಸದ್ಯದಲ್ಲೇ ಆರಂಭಿಸಲಿದ್ದಾರೆ. ಆ ಪಕ್ಷವು ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುತ್ತದೆ. ಈ ಮಧ್ಯೆ ರಜನಿ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಮಾತನಾಡಿ, ಈ ವರ್ಷದ ಜುಲೈ ಕೊನೆಗೆ ರಜನಿ ಹೊಸ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದಾರೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications