92.7 ಬಿಗ್ ಎಫ್ ಎಂ ನಿಂದ ವಿಶಿಷ್ಟ ಸಂಗೀತ ಹಬ್ಬ ಆಚರಣೆ
ಬೆಂಗಳೂರು, ಜನವರಿ 30: ಭಾರತದಲ್ಲಿ ಮುಂಚೂಣಿಯಲ್ಲಿರುವ 92.7 ಬಿಗ್ ಎಫ್.ಎಂ ಭಾರತದ 69ನೇ ಗಣರಾಜ್ಯೋತ್ಸವದಂದು ಸಂಗೀತ ಆಚರಣೆಯೊಂದಿಗೆ ಹೆಚ್ಚಿನ ಸಂಗೀತವನ್ನು ಒದಗಿಸುವ ಭರವಸೆಯನ್ನು ನೀಡಿತ್ತು.
ಬೆಂಗಳೂರಿನಲ್ಲಿ ಏಕೈಕ ದ್ವಿಭಾಷಾ ರೇಡಿಯೋ ಸ್ಟೇಷನ್ ಆಗಿರುವ 92.7 ಬಿಗ್ ಎಫ್ ಎಂ, ಜನವರಿ 26 ರಂದು ವಿವಿಧ ಸಂಗೀತ ಕಾರ್ಯಕ್ರಮಗಳೊಂದಿಗೆ 'ಮ್ಯೂಸಿಕ್ ಯೂನಿಟ್ಸ್' ಸಂದೇಶವನ್ನು ಉತ್ತೇಜಿಸಿತು. 'ಸ್ಟುಡಿಯೋ-ಆನ್-ವೀಲ್ಸ್' ಎಂಬ ಪರಿಕಲ್ಪನೆಯೊಂದಿಗೆ 5ಲಕ್ಷಕ್ಕೂ ಹೆಚ್ಚು ಬೆಂಗಳೂರಿಗರಿಗೆ ಈ ಪರಿಕಲ್ಪನೆಯ ಕುರಿತು ಸಾರಲು ಎಂಜೆಗಳು ಲಾಲ್ ಬಾಗ್ ನಲ್ಲಿ ಸೇರಿದರು. ಜನಪ್ರಿಯ ಸಂಗೀತ ತಂಡವಾದ ನಿನಾದ್ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಿಂದ ಸಾಕಷ್ಟು ಸಂಖ್ಯೆಯ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

92.7 ಬಿಗ್ ಎಫ್ ಎಂ ತನ್ನ ಹೊಸ ಹೊಸ ಪರಿಕಲ್ಪನೆಗಳ ಮೂಲಕ ಕೇಳುಗರಿಗೆ ಮನರಂಜನೆ ನೀಡಲು ಹೆಸರುವಾಸಿಯಾಗಿದೆ. ಈ ಗಣರಾಜ್ಯೋತ್ಸವ ದಿನದಂದು ರೇಡಿಯೋ ಸ್ಟೇಷನ್ ವಿವಿಧ ಭಾಷೆಗಳ ಜನರನ್ನು ಸಂಗೀತ ಶಕ್ತಿಯ ಮೂಲಕ ವೇದಿಕೆಯ ಮೇಲೆ ಒಟ್ಟು ಸೇರಿಸಿತು. ಸಂಗೀತ ತಂಡವು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನ ಎರಡೂ ಮನರಂಜನಾ ಕ್ಷೇತ್ರದ ಉತ್ಸಾಹಿಗಳನ್ನುಸಂಗೀತದ ಮೂಲಕ ಪ್ರೋತ್ಸಾಹಿಸಿತು.
ಇನ್ನು ಗಣರಾಜೋತ್ಸವದ ಕುರಿತು ಮಾತನಾಡಿದ 92.7 ಬಿಗ್ ಎಫ್ ಎಂ ನ ಎಂ.ಜೆ ಶೃತಿ 'ಕೇಳುಗರಿಗೆ ಅರ್ಥಪೂರ್ಣವಾದ ಮನರಂಜನೆಯನ್ನು ಒದಗಿಸುವ ಬಗ್ಗೆ ನಾವು ಪ್ರತಿ ವರ್ಷ ಪ್ರಯತ್ನಿಸುತ್ತೇವೆ. ಅದರಲ್ಲೂ ಇಂತಹ ಪ್ರಮುಖ ಸಂದರ್ಭದಲ್ಲಿ. 'ಮ್ಯೂಸಿಕ್ ಯೂನೈಟ್ಸ್' ಬೆಂಗಳೂರಿಗರ ವೈವಿಧ್ಯತೆಯ ಏಕತೆಯನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿತ್ತು.

ನಿನಾದ್ ತಂಡವು ಈ ದಿನದಂದು ನಮ್ಮೊಂದಿಗೆ ಸೇರಿಕೊಂಡು ಎಲ್ಲರಿಗೂ ಸಂಗೀತದ ರಸದೌತಣವನ್ನು ಉಣಬಡಿಸಿತು. ಇದರ ಜತೆ ನಮ್ಮ ಬಿಗ್ ಗಣ್ಯರಿಗೆ ತುಳಸಿ ಗಿಡಗಳನ್ನು ನೀಡುವುದು ಈ ಸಂಭ್ರಮದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು. ಸ್ವಚ್ಛ ಹಾಗೂ ಹಸಿರುಮಯವಾದ ಪರಿಸರವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ತೆಗದುಕೊಳ್ಳುವ ಅವರ ಉತ್ಸಾಹದ ಕುರಿತು ನಮಗೆ ತಿಳಿದಿದೆ.
ಒಂದು ಒಳ್ಳೆಯ ಕಾರಣದೊಂದಿಗೆ ಮನರಂಜನೆಯನ್ನು ನೀಡುತ್ತಿರುವ ಈ ರೇಡಿಯೋ ಸ್ಟೇಷನ್ ಆಗಾಧವಾದ ಪ್ರೇಕ್ಷಕರನ್ನು ತಲುಪಿದೆ. ಈ ಬಾರಿ 'ರೈಟ್ ಟು ಕ್ಲೀನ್ ಏರ್' ಎಂಬ ಕಾರಣವನ್ನು ತೆಗೆದುಕೊಂಡಿದೆ.
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ










Click it and Unblock the Notifications