ಕೋರಮಂಗಲದ ಬಿಲೆನಿಯರ್ ಸ್ಟ್ರೀಟ್ನಲ್ಲಿ ₹67.5 ಕೋಟಿಗೆ 10,000 ಚದರ ಅಡಿ ನಿವೇಶನ ಮಾರಾಟ- ಏನೆಲ್ಲಾ ವಿಶೇಷತೆಗಳಿವೆ?
ಕೋರಮಂಗಲ, ನವೆಂಬರ್, 14: ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಅದರಲ್ಲೂ ಕೆಲವೊಂದು ಕಾಲೋನಿಗಳಲ್ಲಿ ಬರೀ ರಾಜಕಾರಣಿಗಳು, ಪ್ರಖ್ಯಾತ ಉದ್ಯಮಿಗಳು, ಕಗಾರಿಕೋದ್ಯಮಿಗಳೇ ನೆಲೆಸಿರುತ್ತಾರೆ. ಇಂತಹ ಪ್ರದೇಶಗಳಲ್ಲಿ ಸೈಟ್ಗಳನ್ನು ಅತ್ಯಂತ ದುಬಾರಿಯಾಗಿರುತ್ತವೆ. ಈ ಸಾಲಿನಲ್ಲಿ ಕೋರಮಂಗಲ ಕೂಡ ಇದ್ದು, ಇಲ್ಲಿ ಒಂದೊಂದು ಚದರ ಜಾಗಕ್ಕೂ ಅಡಿ ಜಾಗವೂ ವಜ್ರಕ್ಕಿಂತ ಬೆಲೆ ಇದೆ.
ಬೆಂಗಳೂರಿನ ಕೋರಮಂಗಲದ 3ನೇ ಬ್ಲಾಕ್ ಅನ್ನು ಬಿಲೆನಿಯರ್ ಸ್ಟ್ರೀಟ್ ಅಂತಲೂ ಕರೆಯಲಾಗುತ್ತದೆ. ಇಲ್ಲಿ ದೇಶದ ಪ್ರಖ್ಯಾತ ಉದ್ಯಮಿಗಳು, ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳೇ ಇಲ್ಲಿ ವಾಸವಾಗಿದ್ದಾರೆ. ಇಲ್ಲಿನ ಒಂದೊಂದು ಚದುರ ಅಡಿ ಜಾಗಕ್ಕೂ ವಜ್ರಕ್ಕಿಂತ ಹೆಚ್ಚು ಬೆಲೆ ಇದೆ. ಇನ್ನೂ ಇದೀಗ ಇದೇ ಪ್ರದೇಶದಲ್ಲಿ ಉದ್ಯಮಿಯೊಬ್ಬರು ದಾಖಲೆ ಮಟ್ಟದಲ್ಲಿ ಹಣ ಸುರಿದು ಭೂಮಿ ಖರೀದಿ ಮಾಡಿ ಗಮನ ಸೆಳೆದಿದ್ದಾರೆ.

ಖ್ವೆಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್ ಅವರು ಬರೋಬ್ಬರಿ 67.5 ಕೋಟಿ ರೂಪಾಯಿ ಕೊಟ್ಟು 10,000 ಚದರ ಅಡಿಯ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದು, ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ. ಇದಕ್ಕೂ ಮುನ್ನ ಟಿವಿಎಸ್ ಮೋಟಾರ್ಸ್ ಸಂಸ್ಥೆಯು 9,488 ಚದುರ ಅಡಿ ವಿಸ್ತೀರ್ಣದ ಅಪಾರ್ಟ್ ಮೆಂಟ್ ಅನ್ನು ಪ್ರತಿ ಚದುರ ಅಡಿಗೆ 68,597 ರೂಪಾಯಿಗೆ ಕೊಟ್ಟು ಖರೀದಿಸಿದ್ದರು.
ಕೋರಮಂಗಲ 3ನೇ ಬ್ಲಾಕ್ ಮಾತ್ರ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನ ಆಗಲೀ ವಸತಿ ಸಮುಚ್ಚಯವಾಗಲೀ ಮಾರಾಟಕ್ಕೆ ಜಾಗ ಸಿಗುವುದೇ ಕಷ್ಟ. ಆದ್ದರಿಂದ ಬೆಲೆ ಹೆಚ್ಚಳ ಆಗುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಮಾದರಿಯನ್ನು ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ.
ಕೋರಮಂಗಲದ 6 ಬ್ಲಾಕ್ಗಳಲ್ಲಿ 3ನೇ ಬ್ಲಾಕ್ ಮಾತ್ರ ದುಬಾರಿ ಆಗಿದ್ದು, ಇಲ್ಲಿ ವಿಸ್ತಾರವಾದ ಅಪಾರ್ಟ್ಮೆಂಟ್ಗಳು ಮತ್ತು ಸ್ವತಂತ್ರ ಮನಗಳೂ ವಿಸ್ತಾರ ಆಗಿದ್ದು, ಇದು ಕೂಡ ದುಬಾರಿಯಾಗಲು ಕಾರಣವಾಗಿದೆ. ಮಧ್ಯವರ್ತಿಗಳ ಪ್ರಕಾರ ಇಲ್ಲಿ 4000 ಅಡಿಗಿಂತಲೂ ಕಡಿಮೆ ಇರುವ ಬಂಗಲೆಗಳೇ ಇಲ್ಲವಂತೆ ಇಲ್ಲಿ.
ದುಬಾರಿಯಾಗಲು ಕಾರಣಗಳೇನು?
* ಇಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು, ಶಿಕ್ಷಣ ಸಂಸ್ಥೆಗಳು, ಮಾಲ್ ಗಳು ಆಸ್ಪತ್ರೆಗಳು ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ.
* ಅನೇಕ ಐಟಿಬಿಟಿ ಕಂಪನಿಗಳಿಗೆ ಹತ್ತಿರದಲ್ಲಿರುವುದೂ ಭೂಮಿ ದರ ಹೆಚ್ಚಳಕ್ಕೆ ಕಾರಣವಾಗಿದೆ.
* ಬನ್ನೇರುಘಟ್ಟ, ಬೆಳ್ಳಂದೂರು, ಸರ್ಜಾಜಪುರ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸಮೀಪದಲಿವೆ.
* ಅಷ್ಟೇ ಅಲ್ಲದೆ, ಕೋರಮಂಗಲ ಪ್ರಮುಖ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಹಬ್ ಸಹ ಆಗಿದೆ.
ಯಾರೆಲ್ಲಾ ವಾಸವಿದ್ದಾರೆ?: ಕೋರಮಂಗಲ ಬೆಂಗಳೂರಿನ ಸ್ಟಾರ್ಟ್ ಅಪ್ ಹಬ್ ಎಂದು ಹೆಸರಾಗಿದೆ. ಇಲ್ಲಿ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್, ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮತ್ತು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಪ್ರಮುಖರು ವಾಸ ಮಾಡುತ್ತಿದ್ದಾರೆ.
ಬಿಲೆನಿಯರ್ಗಳೇ ಹೆಚ್ಚಾಗಿ ವಾಸ ಮಾಡುತ್ತಿರುವುದರಿಂದ ಐಷಾರಾಮಿ ಬಂಗಲೆಗಳು ಒಂದಕ್ಕಿಂತ ಒಂದು ಕಣ್ಣು ಕುಕ್ಕುವಂತಿವೆ. ಇಲ್ಲಿನ ಮನೆಗಳ ಒಂದಕ್ಕಿಂದ ಒಂದು ಅದ್ಭುತ ವಿನ್ಯಾಸದಲ್ಲಿವೆ. ಹೆರಿಟೇಜ್ ವಿಲ್ಲಾಗಳಿಂದ ಹಿಡಿದು ಜಗತ್ತಿನ ಅದ್ಭುತ ವಿನ್ಯಾಸದ ಮನೆಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಮನೆಯ ಒಳಾಂಗಣ ವಿನ್ಯಾಸ: ಎತ್ತರದ ಗೇಟ್ಗಳು, ಖಾಸಗಿ ಗಾರ್ಡನ್, ಈಜುಕೊಳ, ಜಿಮ್, ವಿಫುಲ ಕಾರ್ ಪಾರ್ಕಿಂಗ್, ಹಸಿರು ಇಂಧನ ಆಧಾರಿತ ಹಸಿರು ಕಟ್ಟಡಗಳು, ಮಳೆ ನೀರು ಕೊಯ್ಲಿನ ಮನೆಗಳನ್ನು ಕಾಣಬಹುದಾಗಿದೆ.
-
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್








Click it and Unblock the Notifications