ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಕ್ಕೆ ಹೋಗೋ ಮೋದಿಗೆ ಕರ್ನಾಟಕಕ್ಕೆ ಬರಲು ಟೈಮಿಲ್ವ?; ಸಿದ್ದು ಪ್ರಶ್ನೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ವಿದೇಶಕ್ಕೆ ಹೋಗೋ ಮೋದಿಗೆ ಕರ್ನಾಟಕಕ್ಕೆ ಬರಲು ಟೈಮಿಲ್ವ?; ಸಿದ್ದು ಪ್ರಶ್ನೆ | Oneindia Kannada

ಬೆಳಗಾವಿ, ಆಗಸ್ಟ್ 28: "ರಾಜ್ಯದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದರೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ತುರ್ತಾಗಿ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಮೋದಿಗೆ ವಿದೇಶಕ್ಕೆ ಹೋಗೋಕೆ ಸಮಯ ಸಿಗುತ್ತೆ, ಕರ್ನಾಟಕಕ್ಕೆ ಭೇಟಿ ನೀಡಲು ಟೈಮ್ ಇಲ್ಲವೆ?" ಎಂದು ಪ್ರಶ್ನಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಎದುರಾಳಿಯಾದರೂ ಯಡಿಯೂರಪ್ಪ ಮೇಲೆ ಅನುಕಂಪ ಎಂದ ಸಿದ್ದರಾಮಯ್ಯಎದುರಾಳಿಯಾದರೂ ಯಡಿಯೂರಪ್ಪ ಮೇಲೆ ಅನುಕಂಪ ಎಂದ ಸಿದ್ದರಾಮಯ್ಯ

ಪ್ರವಾಹದ ಪರಿಹಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾತನಾಡಿದ ಅವರು, "ಕೇಂದ್ರದಿಂದ ರಾಜ್ಯದ ಪ್ರವಾಹ ಪರಿಸ್ಥಿತಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು. ಅಮಿತ್ ಶಾ, ನಿರ್ಮಲಾ ಸೀತಾರಾಂ ಕಾಟಾಚಾರಕ್ಕೆ ಇಲ್ಲಿಗೆ ಬಂದು ಹೋಗಿದ್ದಾರೆ. ನೆರೆ ಪರಿಸ್ಥಿತಿಗೆ ಬಿಜೆಪಿ ಸ್ಪಂದಿಸದೇ ಇದ್ದರೆ, ಬೀದಿಗೆ ಇಳಿದು ಹೋರಾಟ ಮಾಡ್ತಿವಿ" ಎಂದು ಎಚ್ಚರಿಕೆ ನೀಡಿದರು.

Modi Dont Have Time To Visit Karnataka Asked Siddaramaiah In Belagavi

ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಕುರಿತೂ ಮಾತನಾಡಿದರು. "ಇಂದಿರಾ ಕ್ಯಾಂಟೀನ್ ಯೋಜನೆ ಬಡವರಿಗಾಗಿ ಮಾಡಿದ್ದು. ಕ್ಯಾಂಟೀನ್ ನಿಲ್ಲಿಸಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯುತ್ತೇನೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜತಗೆ ಮಾತುಕತೆ ನಡೆಸಿದ್ದೇನೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ" ಎಂದು ದೂರಿದರು.

ಯಡಿಯೂರಪ್ಪ- ಸಿದ್ದರಾಮಯ್ಯ ಹೊಸ ದೋಸ್ತಿ; ಒಬ್ಬರ ನೋವಿಗೆ ಮತ್ತೊಬ್ಬರ ಕೊರಳುಯಡಿಯೂರಪ್ಪ- ಸಿದ್ದರಾಮಯ್ಯ ಹೊಸ ದೋಸ್ತಿ; ಒಬ್ಬರ ನೋವಿಗೆ ಮತ್ತೊಬ್ಬರ ಕೊರಳು

"ಬಿಜೆಪಿಗೆ 5 ವರ್ಷ ಸರ್ಕಾರ ನಡೆಸಲು ಜನಾಭಿಪ್ರಾಯ ಇಲ್ಲ. ಅನೈತಿಕವಾದ ಶಿಶು ಬಿಜೆಪಿ ಸರ್ಕಾರ" ಎಂದು ಆಕ್ರೋಶಗೊಂಡಿದ್ದಾರೆ.

English summary
"Even though there is a flood in the state, there is no single rupee from central government. Modi has time to visit foreign, but no time to come to karnataka" asked Former CM Siddaramaiah in belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X