ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ಸಿಬಿಐ ಮೊದಲು ಪ್ರಬಲ ಸಾಕ್ಷಿ ಹುಡುಕಲಿ
ಬೆಳಗಾವಿ, ನವೆಂಬರ್ 15 : ಸಚಿವ ಜಾರ್ಜ್ ಈಗಲೇ ರಾಜೀನಾಮೆ ನೀಡೋದು ಉಚಿತ ಅಲ್ಲ, ಸಚಿವ ಜಾರ್ಜ್ ರಾಜೀನಾಮೆಗೆ ಈಗ ಸಮಯ ಅಲ್ಲ ಪ್ರಕರಣದಲ್ಲಿ ಸಿಬಿಐ ಪ್ರಬಲ ಸಾಕ್ಷಿ ಹುಡುಕಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಬುಧವಾರ (ನ.15) ಹೇಳಿದರು.
ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆಯಲ್ಲಿ ಬುಲೆಟ್ ಸಿಕ್ಕಿದೆ ಎಷ್ಟರ ಮಟ್ಟಿಗೆ ಮಹಜರು ಮಾಡಲಾಗಿದೆ? ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಾಕ್ಷಿ ನಾಶ ಮಾಡಲು ಹೋಗಿ ಸರಕಾರದಿಂದ ಅಧಿಕಾರ ದುರ್ಬಳಕೆಯಾಗುತ್ತಿದೆ.

ಈ ಅಧಿವೇಶನದಲ್ಲಿ ಸರ್ಕಾರ ಎಸ್ಸಿಎಸ್ಟಿ ನೌಕರರ ಮೀಸಲು ಮುಂದುವರೆಸುವ ವಿಧೇಯಕ ತಂದಿದ್ದಾರೆ. ಈ ವಿಧೇಯಕ ಬಹಳ ದಿನಗಳ ಕಾಲ ಜಾರಿಯಲ್ಲಿ ಇರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಬುಧವಾರ (ನ.15) ಹೇಳಿದರು.
ಈ ವಿಧೇಯಕ ಬಹಳ ದಿನಗಳ ಕಾಲ ಜಾರಿಯಲ್ಲಿ ಇರಲ್ಲ ನೌಕರರು ಕಾಯ್ದೆ ಪ್ರಶ್ನಿಸಿ ಮತ್ತೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು ಆಗ ಕಾಯ್ದೆ ಅನೂರ್ಜಿತವಾಗುವ ಸಾಧ್ಯತೆ ಇದೆ. ಎಸ್ಸಿ, ಎಸ್ಟಿ ವರ್ಗದ ವಿರೋಧದಿಂದ ಪಾರಾಗಲು ಈ ವಿಧೇಯಕ ಜಾರಿಗೆ ತರುವ ಪ್ರಯತ್ನದಿಂದ ಎಸ್ಸಿ, ಎಸ್ಟಿ ನೌಕರರ ಹಿತ ಕಾಯಲು ಆಗಲ್ಲ. ವಿಧೇಯ ಮಂಡನೆಗೆ ಕಾನೂನು ಸಲಹೆಯನ್ನು ನೀಡಿದವರು ಯಾರು?, ಮುಂದೆ ಸರ್ಕಾರ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳಲಿದೆ ಎಂದರು.












Click it and Unblock the Notifications