ಬಿಬಿಎಂಪಿ ವಿಸರ್ಜನೆ ಮಾಡಿ ಸರ್ಕಾರದ ಅಧಿಸೂಚನೆ
ಬೆಂಗಳೂರು, ಏ. 17 : ಮಹತ್ವದ ಬೆಳವಣಿಗೆಯೊಂದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಸರ್ಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಆರು ತಿಂಗಳ ಕಾಲ ಚುನಾವಣೆ ಮುಂದೂಡಲು ಅನುಕೂಲವಾಗುತ್ತದೆ. ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಸರ್ಕಾರ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ.
ಬಿಬಿಎಂಪಿಯಲ್ಲಿ
ನಡೆದ
ಅವ್ಯವಹಾರಗಳ
ಬಗ್ಗೆ
ತನಿಖೆ
ನಡೆಸಲು
ಸರ್ಕಾರ
ಐಎಎಸ್
ಅಧಿಕಾರಿ
ರಾಜೇಂದ್ರ
ಕುಮಾರ್
ಕಠಾರಿಯಾ
ನೇತೃತ್ವದ
ಸಮಿತಿಯನ್ನು
ರಚಿಸಿತ್ತು.
ಈ
ಸಮಿತಿಯ
ವರದಿಯನ್ನು
ಆಧಾರವಾಗಿಟ್ಟುಕೊಂಡು
ಪಾಲಿಕೆಯನ್ನು
ವಿಸರ್ಜನೆ
ಮಾಡಲಾಗಿದೆ.
ಪಾಲಿಕೆ
ವಿಸರ್ಜಿಸುವ
ಕುರಿತು
ಶುಕ್ರವಾರ
ಸಚಿವ
ಸಂಪುಟ
ಸಭೆಯಲ್ಲಿ
ಚರ್ಚಚೆ
ನಡೆಸಿ
ತೀರ್ಮಾನ
ಕೈಗೊಳ್ಳಲಾಗಿತ್ತು.
[ಬಿಬಿಎಂಪಿ
ವಿಸರ್ಜನೆ?]
ಶನಿವಾರ ನಗರಾಭಿವೃದ್ಧಿ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಪಾಲಿಕೆಯ ಆಡಳಿತ ಅವಧಿ ಏ.22ರ ವರೆಗೆ ಇತ್ತು. ಅದಕ್ಕೂ ಮುನ್ನವೇ ವಿಸರ್ಜನೆ ಮಾಡಲಾಗಿದೆ. ಏ.20ರ ಸೋಮವಾರ ಬಿಬಿಎಂಪಿ ಚುನಾವಣೆ ಕುರಿತು ಹೈಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದ್ದು, ಅಲ್ಲಿ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗಿದೆ. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]
ಪಾಲಿಕೆಯಲ್ಲಿ ನಡೆದಿರುವ ಅಕ್ರಮಗಳ ಹಿನ್ನಲೆಯಲ್ಲಿ ಪಾಲಿಕೆಯನ್ನು ಏಕೆ ವಿಸರ್ಜನೆ ಮಾಡಬಾರದು? ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್.ಗೋಪಾಲಯ್ಯ ಮಾ.18ರಂದು ಅವರು ಬಿಬಿಎಂಪಿ ಮೇಯರ್, ಉಪಮೇಯರ್, ಆಯುಕ್ತರು, ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದರು.
ಬಿಬಿಎಂಪಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ವರದಿಯನ್ನು ಆಧಾರವಾಗಿಟ್ಟುಕೊಂಡು ವಿಸರ್ಜನೆ ಮಾಡುವ ನೋಟಿಸ್ ನೀಡಲಾಗಿತ್ತು. ಇದಕ್ಕೆ ಉತ್ತರ ನೀಡಲು ಪಾಲಿಕೆ ಕಾಲವಕಾಶ ಕೇಳಿತ್ತು. ಆದರೆ, ಸರ್ಕಾರ ಏ.18ರಂದು ಪಾಲಿಕೆಯನ್ನು ವಿಸರ್ಜನೆ ಮಾಡಿದೆ.
ಪಾಲಿಕೆ ವಿಭಜನೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಹೈಕೋರ್ಟ್ ಮೇ30ರೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಚುನಾವಣೆ ಮುಂದೂಡಲು ಹಲವು ತಂತ್ರ ಅನುಸರಿಸಿದ ಸರ್ಕಾರ ಅಂತಿಮವಾಗಿ ಪಾಲಿಕೆಯನ್ನು ವಿಸರ್ಜನೆ ಮಾಡಿ ಅಧಿಸೂಚನೆ ಹೊರಡಿಸಿದೆ.