ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭಿನ್ನಾಭಿಪ್ರಾಯದ ಡ್ಯಾಮೇಜ್ ಕಂಟ್ರೋಲ್ ಗಾಗಿ ಬಿಜೆಪಿ ಜನಸಂಪರ್ಕ'

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ವಿಆರ್ ಸುದರ್ಶನ್ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರಕಾರದ ಸಾಧನೆ ಬಗ್ಗೆ ಅಂಕಿ-ಅಂಶ ಸಹಿತ ತೆರೆದಿಟ್ಟಿದ್ದಾರೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 19: ಕಾಂಗ್ರೆಸ್ ಮುಖಂಡ ವಿಆರ್ ಸುದರ್ಶನ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ಪರ ಬ್ಯಾಟ್ ಬೀಸಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಆಡಿದ ಮಾತುಗಳನ್ನು ಇಲ್ಲಿ ಕೊಡಲಾಗಿದೆ.

- ನಮ್ಮ ಕಾಂಗ್ರೆಸ್ ಸರಕಾರವನ್ನು ತೇಜೋವಧೆ ಮಾಡಲು ಬಿಜೆಪಿಯವರು ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದಾರೆ, ಇದು ನೈಜ ಕಾಳಜಿಯಿಂದಲ್ಲ!

- ಬಿಜೆಪಿಯವರದ್ದು ಜನ ಸಂಪರ್ಕ ಅಭಿಯಾನವಲ್ಲ- ಜನರ ಮುಂದೆ ಅಭಿನಯ!

- ಬಿಜೆಪಿಯವರು ತಮ್ಮಲ್ಲಿನ ಭಿನ್ನಾಭಿಪ್ರಾಯಕ್ಕೆ ತೇಪೆ ಹಾಕಿಕೊಂಡು ನಿನ್ನೆಯಿಂದ ಜನ ಸಂಪರ್ಕ ಅಭಿಯಾನದ ಹೆಸರಿನಲ್ಲಿ ಓಡಾಟ ಆರಂಭಿಸಿದ್ದಾರೆ.[ಮೀಸಲಾತಿ ಶೇ. 70 ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ - ಸಿದ್ದರಾಮಯ್ಯ]

Siddaramaiah

- ನಾಲ್ಕು ವರ್ಷಗಳ ಅವಧಿಯಲ್ಲಿ ನಮ್ಮ ಪಕ್ಷದ ಸರಕಾರ ಅತ್ಯುತ್ತಮ ಸಾಧನೆ ಮಾಡುತ್ತಿದೆ. ನಮ್ಮ ಯಶಸ್ವಿ ಪಯಣವನ್ನು ಮೆಚ್ಚಿಯೇ ಈಚೆಗೆ ಜರುಗಿದ ಚುನಾವಣೆಗಳಲ್ಲಿ ಜನತೆ ಬೆಂಬಲಿಸಿದ್ದಾರೆ. ಆದರೆ ಬಿಜೆಪಿ ಆಳ್ವಿಕೆಯ 2008-2013ರ ದಿನಗಳನ್ನು ನೆನೆದರೆ ಜನರು ಈಗಲೂ ಬೆಚ್ಚಿ ಬೀಳುತ್ತಾರೆ.

- ಬಿಜೆಪಿ ಶಾಸಕರು, ಸಂಸದರಿಗೆ ನಮ್ಮ ಸರಕಾರದ ಸಾಧನೆಯ ಅಂಕಿ- ಅಂಶಗಳನ್ನು ಪಡೆದುಕೊಂಡು ವಸ್ತು ನಿಷ್ಠವಾಗಿ ಟೀಕಿಸುವ ಎಲ್ಲಾ ಅವಕಾಶಗಳಿವೆ. ಮಾಹಿತಿ ಹಕ್ಕು ಕಾಯಿದೆಯಿಂದ ಆರಂಭಿಸಿ ಶಾಸಕತ್ವದ- ಸಂಸದರ ಅಧಿಕಾರ ಬಳಸಿಕೊಳ್ಳಬಹುದು. ಆದರೆ ಸಂಸತ್ ಗೆ ಹಾಜರಾಗದೆ ಹಾದಿ ಬೀದಿಗಳಲ್ಲಿ ನಿಂತು ನಮ್ಮನ್ನು ಟೀಕಿಸುತ್ತಿರುವುದು ಅವರು ಹೊಂದಿರುವ ಪದವಿಗೆ ತಕ್ಕದ್ದಲ್ಲ.[ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ - ಸಿದ್ದರಾಮಯ್ಯ]

BSY-Eshwarappa

- ಶಿಕ್ಷಣಕ್ಕೆ ಬಿಜೆಪಿ 55,320 ಕೋಟಿಗಳನ್ನು ಬಿಡುಗಡೆ ಮಾಡಿದ್ದರೆ, ಕಾಂಗ್ರೆಸ್ 99,203 ಕೋಟಿ ಬಿಡುಗಡೆ ಮಾಡಿದೆ. ಆರೋಗ್ಯಕ್ಕೆ ಬಿಜೆಪಿ 10,240 ಕೋಟಿ ಕೊಟ್ಟಿದ್ದರೆ, ಕಾಂಗ್ರೆಸ್ ಸರ್ಕಾರ 21,475 ಕೋಟಿ ಕೊಟ್ಟಿದೆ. ಕೃಷಿಗೆ ಬಿಜೆಪಿ 17,182 ಕೋಟಿ- ಕಾಂಗ್ರೆಸ್ 44,655 ಕೋಟಿ, ಇಂಧನಕ್ಕೆ ಬಿಜೆಪಿ 40,913 ಕೋಟಿ, ಕಾಂಗ್ರೆಸ್ 61,323 ಕೋಟಿ ಬಿಡುಗಡೆ ಮಾಡಿದ ಬಗ್ಗೆ ಅಂಕಿ- ಅಂಶಗಳನ್ನು ತಿಳಿಸಿದರು.

- ಈಚೆಗೆ ಉಪಚುನಾವಣೆಗಳಲ್ಲಿ ಗೆದ್ದೇ ಬಿಟ್ಟೆವೆಂಬ ಸಂಭ್ರಮದಲ್ಲಿದ್ದ ಬಿಜೆಪಿಗೆ ಸೋಲಾಗಿದ್ದು, ಅವರು ಹತಾಶರಾಗಿದ್ದಾರೆ. ಹೀಗಾಗಿ ಅಸಂಬದ್ಧ ಮಾತನಾಡುತ್ತಿದ್ದಾರೆ. ಕರ್ನಾಟಕದ ಜನ ಇವರನ್ನು ನಂಬುವಷ್ಟು ಮೂರ್ಖರಲ್ಲ. ತಕ್ಕ ಪಾಠ ಕಲಿಸುವರು.[ಬಿಜೆಪಿಯವರಿಗೆ ಈಗ ದಲಿತರು, ಅಲ್ಪಸಂಖ್ಯಾತರ ನೆನಪು: ಎಚ್ ಡಿಕೆ ವ್ಯಂಗ್ಯ]

Kumarswamy

- ಜಂತಕಲ್ ಗಣಿಗಾರಿಕೆ ಕುರಿತಂತೆ 3 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ಕೋರ್ಟ್ ಕೊಟ್ಟ ಸೂಚನೆಯಂತೆ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಮ್ಮ ಸರಕಾರ ಹಾಗೂ ಸಿಎಂರನ್ನು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ.

Anurag Tiwari

- ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಸಾವಿನ ಬಗ್ಗೆ ಉತ್ತರಪ್ರದೇಶ ಸರಕಾರ ಪಕ್ಷಪಾತ ರಹಿತ ತನಿಖೆ ಮಾಡಿಸಲಿ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಲಿ.

English summary
Congress leader VR Sudarshan criticizes BJP jansampark campaign in Bengaluru. There is a crisis in BJP. So, in damage control mode they are doing jansampark campaign, Sudarshan added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X