ಇದು ಹಳೆ ಪುಸ್ತಕಗಳ ಆನ್ ಲೈನ್ ಅಂಗಡಿ
ಬೆಂಗಳೂರು, ಡಿ.19: ಹಳೆ ಕಥೆ ಪುಸ್ತಕ, ಕಾದಂಬರಿ, ಮ್ಯಾಗಜೀನ್, ಇಂಜಿನಿಯರಿಂಗ್, ಮೆಡಿಕಲ್ ಪುಸ್ತಕಗಳು ಬೇಕಾದಾಗ ಪುಸ್ತಕ ಪ್ರೇಮಿಗಳಿಗೆ ಥಟ್ಟನೆ ನೆನಪಾಗುವುದು ಅವೆನ್ಯೂ ರಸ್ತೆಯ ಫುಟ್ ಪಾತ್ ಅಂಗಡಿಗಳು, ಅದು ಬಿಟ್ಟರೆ ನವರಂಗ್ ಹತ್ತಿರ, ಜಯನಗರದಲ್ಲಿ ಆ ಕಾಲ ವೇದಾ ಬುಕ್ ಹೌಸ್ ಹಳೆ ಪುಸ್ತಕಗಳಿಗೆ ಬೆಲೆ ತಂದುಕೊಟ್ಟಿತ್ತು. ಈಗ ಹಳೆ, ಹೊಸ ಪುಸ್ತಕಗಳೆರಡನ್ನು ಒಂದೆ ಕಡೆ ಖರೀದಿಸುವ ಸೌಲಭ್ಯ ನಿಮ್ಮ ಬೆರಳು ತುದಿಯಲ್ಲೇ ಸಿಗುವಂತಾಗಿದೆ.
ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕರ್ತ ಸುನೀಲ್ ಎಸ್. ಪಾಟೀಲ್ ಹಾಗೂ ಬೆಂಗಳೂರಿನ ಸಚಿನ್ ಕುಡ್ತುರಕರ್ ಅವರು ಹೀಗೊಂದು ಸೌಲಭ್ಯ ಕಲ್ಪಿಸಿದ್ದಾರೆ. ಅಫೋರ್ಡಬಲ್ (a4dable.in) ಎಂಬ ಹೆಸರಿನ ವೆಬ್ ತಾಣ ಆರಂಭಿಸಿದ ಇಬ್ಬರು ಕನ್ನಡ ಪ್ರೇಮಿಗಳು ಈಗ ಮೊಬೈಲ್ ಮೂಲಕ ಪುಸ್ತಕ ಖರೀದಿಯ ಹೊಸ ಸೌಲಭ್ಯವನ್ನು ಸಾಧ್ಯವಾಗಿಸಿದ್ದಾರೆ.
ಇಂಗ್ಲೀಷ್ ಹಳೆ, ಹೊಸ ಪುಸ್ತಕ ಖರೀದಿ ಸಾಕಷ್ಟು ವೆಬ್ ತಾಣಗಳಿವೆ. ಕನ್ನಡದಲ್ಲೂ ಟೋಟಲ್ ಕನ್ನಡ, ಸಪ್ನ, ಅಕೃತಿ ಬುಕ್ ಹೌಸ್, ಕನ್ನಡ ಸ್ಟೋರ್, ಬುಕ್ಸ್ ಫಾರ್ ಯೂ ಅಲ್ಲದೆ ಫ್ಲಿಪ್ ಕಾರ್ಟ್ ಮುಂತಾದ ಆನ್ ಲೈನ್ ಶಾಪಿಂಗ್ ವೆಬ್ ತಾಣಗಳು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಮೂಲಕ ಖರೀದಿಸುವ ಸೌಲಭ್ಯ ಒದಗಿಸಿವೆ. ಇವೆಲ್ಲದರ ನಡುವೆ ಅಫೊರ್ಡಬಲ್ ಹೇಗೆ ಭಿನ್ನ? ಈ ವೆಬ್ ತಾಣ ಹುಟ್ಟು ಹಾಕಲು ಪ್ರೇರಣೆ ಏನು? ಯಾವ ಯಾವ ಹಳೆ ಪುಸ್ತಕ ಸಿಗಲಿದೆ? ಮೊಬೈಲ್ ಮೂಲಕ ಖರೀದಿ ಹೇಗೆ? ಮುಂದೆ ಓದಿ...

ಎಸ್ ಎಲ್ ಭೈರಪ್ಪರ ಪುಸ್ತಕಗಳು ಲಭ್ಯ
ಎಸ್ ಎಲ್ ಭೈರಪ್ಪರ ಎಲ್ಲಾ ಪುಸ್ತಕಗಳು ಅನ್ ಲೈನ್ ಮೂಲಕ ಲಭ್ಯವಿದೆ. ಬೆಂಗಳೂರಿನವರಿಗೆ cash on delivery ಸೌಲಭ್ಯವನ್ನೂ ಒದಗಿಸಲಾಗಿದೆ. ಎಲ್ಲಾ ಪಬ್ಲಿಕೇಷನ್ ನ ಎಲ್ಲಾ ಸಾಹಿತಿಗಳ ಹಳೆ ಪುಸ್ತಕಗಳನ್ನು ಇಲ್ಲಿ ನೀಡಲು ನಾವು ಮುಂದಾಗಿದ್ದೇವೆ ಎಂದು ಸುನಿಲ್ ಹೇಳಿದ್ದಾರೆ.

ಜ್ಞಾನ ಎಂಬುದು ನಿರಂತರವಾಗಿ ಹರಿಯಬೇಕು
ನಾವು ನಮ್ಮ ಕಾಲೇಜು ದಿನಗಳಲ್ಲಿ ಹಳೆ ಪುಸ್ತಕಗಳನ್ನು ನಮ್ಮನಮ್ಮಲ್ಲೇ ಹಂಚಿಕೊಳ್ಳುತ್ತಿದ್ದೆವು. ಇನ್ನು ಕೆಲವು ರದ್ದಿ ಕಾಗದವಾಗುತ್ತಿತ್ತು. ಆದರೆ, ಜ್ಞಾನ ಎಂಬುದು ನಿರಂತರವಾಗಿ ಹರಿಯಬೇಕು ಈ ಕಾರಣಕ್ಕೆ ಹಳೆ ಪುಸ್ತಕಗಳ ಮಾರಾಟ ಮುಖ್ಯವೆನಿಸುತ್ತದೆ ಎಂದು ಸಂಸ್ಥಾಪಕರು ಹೇಳಿದ್ದಾರೆ.
ಎಸ್ ಎಲ್ ಭೈರಪ್ಪ, ದರಾ ಬೇಂದ್ರೆ, ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ 700ಕ್ಕೂ ಅಧಿಕ ಪುಸ್ತಕಗಳಿವೆ

ದೇಶಪಾಂಡೆ ಪ್ರತಿಷ್ಠಾನ
ಯಾರಾದರೂ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರೆ ಆದರ ಬಹುತೇಕ ಭಾಗವನ್ನು ಶೈಕ್ಷಣಿಕ ಸಂಸ್ಥೆ ನಡೆಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲು ದೇಶಪಾಂಡೆ ಪ್ರತಿಷ್ಠಾನ ಉದ್ದೇಶಿಸಲಾಗಿದೆ.
ಪುಸ್ತಕ ಖರೀದಿ ಹೇಗೆ
ಆನ್ ಲೈನ್ ಖರೀದಿ ನಂತರ 48 ಗಂಟೆಗಳಲ್ಲಿ ನಿಮ್ಮ ಕೈ ತಲುಪಲಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...
ಅಥವಾ 08553133393 ಸಂಖ್ಯೆಗೆ ಕರೆ ಮಾಡಿ ಬೇಕಾದ ಪುಸ್ತಕ ಬುಕ್ ಮಾಡಿ ಬ್ಯಾಂಕಿಗೆ ದುಡ್ಡು ತುಂಬಿ ನಿಮ್ಮ ಮನೆಗೆ ಪುಸ್ತಕ ತರೆಸಿಕೊಳ್ಳಿ-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications