ಬಳ್ಳಾರಿ ಜಿಲ್ಲೆಯ ಯೋಧ ಹಾಲಪ್ಪ ಹಾವನೂರು ಹೃದಯಘಾತದಿಂದ ನಿಧನ
ಬಳ್ಳಾರಿ, ಮೇ 30 : ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಳಲು ಗ್ರಾಮದ ಯೋಧ ಹಾಲಪ್ಪ ಹಾವನೂರು ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
13 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಸೋಮವಾರ ಮಧ್ಯಾಹ್ನ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇನ್ನೂ ಎರಡು ವರ್ಷ ಸೇವೆಯಲ್ಲಿರುವಾಗಲೇ ನಿಧನರಾಗಿದ್ದಾರೆ. ತಂದೆ, ಮೂರು ಜನ ಸಹೋದರರು ಹಾಗೂ ಒಬ್ಬ ಸಹೋದರಿತನ್ನು ಯೋಧ ಹಾಲಪ್ಪ ಅಗಲಿದ್ದಾರೆ.
ಇಂದು (ಮಂಗಳವಾರ) ಸಂಜೆ ವೇಳೆಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.












Click it and Unblock the Notifications