ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾನಕ್ಕೂ ಮುನ್ನ ಗೋ ಪೂಜೆ, ಯಂತ್ರದ ಮುಂದೆ ಶ್ರೀ ರಾಮುಲು ಧ್ಯಾನ!

|
Google Oneindia Kannada News

ಬಳ್ಳಾರಿ, ಮೇ 12 : ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಮತಯಂತ್ರಕ್ಕೆ ಊದಿ, ಯಂತ್ರದ ಮುಂದೆ ಧ್ಯಾನ ಮಾಡಿ ಮತದಾನ ಮಾಡಿ ಅಚ್ಚರಿ ಮೂಡಿಸಿದರು. ಎರಡು ಕ್ಷೇತ್ರಗಳಲ್ಲಿ ಅವರು ಕಣಕ್ಕಿಳಿದ್ದಾರೆ.

LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರುLIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು

Karnataka elections : Sriramulu performs pooja, meditation before voting

ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಬಳ್ಳಾರಿ ನಗರದ ದೇವಿನಗರದ 25ನೇ ಮತಗಟ್ಟೆಯಲ್ಲಿ ಶನಿವಾರ ಹಕ್ಕು ಚಲಾಯಿಸಿದರು. ಅದಕ್ಕೂ ಮುನ್ನ ಮನೆಯಲ್ಲಿ ಗೋ ಪೂಜೆ ನೆರವೇರಿಸಿದರು. ದೇವಾಲಯಕ್ಕೆ ಭೇಟಿ ನೀಡಿ ನಂತರ ಮತಕೇಂದ್ರಕ್ಕೆ ತೆರಳಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Karnataka elections : Sriramulu performs pooja, meditation before voting

ಮತ ಕೇಂದ್ರದಲ್ಲಿ ಮತಯಂತ್ರದ ಮುಂದೆ ಕೆಲವು ಸೆಕೆಂಡ್‌ಗಳ ಕಾಲ ಧ್ಯಾನ ಮಾಡಿದರು. ಬಳಿಕ ಮತಯಂತ್ರಕ್ಕೆ ಮೂರು ಬಾರಿ ಊದಿ ನಂತರ ಹಕ್ಕು ಚಲಾಯಿಸಿದರು.

ನಿಯಮದಂತೆ ಮತಯಂತ್ರಕ್ಕೆ ಪೂಜೆ ಸಲ್ಲಿಸುವಂತಿಲ್ಲ. ಶ್ರೀರಾಮುಲು ಅವರು ಮತಯಂತ್ರಕ್ಕೆ ಊದಿರುವುದು ಚುನಾವಣಾ ನಿಯಮದ ಉಲ್ಲಂಘನೆಯಲ್ಲವೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿಯೂ ಸ್ಪರ್ಧಿಸಿದ್ದಾರೆ. ಆದರೆ, ಅವರು ಎರಡೂ ಕಡೆಯೂ ಮತದಾನ ಮಾಡುವಂತಿಲ್ಲ.

English summary
Karnataka assembly elections 2018 : Ballari MP B.Sriramulu (46) performed Pooja, meditation before voting on May 12, 2018. He is contesting for elections from Badammi against Chief Minister Siddaramaiah and Molakalmuru, Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X