ಬಳ್ಳಾರಿಯಲ್ಲಿ ಕುಡುಕರ ಎಡವಟ್ಟು; ಬಣವೆಗಳಿಗೆ ಬಿತ್ತು ಬೆಂಕಿ
ಬಳ್ಳಾರಿ, ಮೇ 05: ಕುಡುಕರು ಮಾಡಿರುವ ಎಡವಟ್ಟಿನಿಂದ ಬಣವೆಗಳಿಗೆ ಬೆಂಕಿ ಬಿದ್ದು, ಎಮ್ಮೆಗಳಿಗೂ ಬೆಂಕಿ ತಗುಲಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಿನ್ನೆ ಮದ್ಯದಂಗಡಿಗಳು ತೆರೆದಿದ್ದರಿಂದ, ಮದ್ಯ ಖರೀದಿಸಿ, ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಡ್ರೀಮ್ ವರ್ಲ್ಡ್ ಶಾಲೆಯ ಹಿಂಭಾಗದ ಹೊಲದಲ್ಲಿ ಕುಡುಕರು ಎಣ್ಣೆ ಪಾರ್ಟಿ ಮಾಡುತ್ತಾ ಸಿಗರೇಟ್ ಬಿಸಾಡಿದ್ದಾರೆ. ಸಿಗರೇಟ್ ಕಿಡಿ ತಗುಲುತ್ತಿದ್ದಂತೆ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ ವ್ಯಾಪಿಸಿದೆ. ಅಲ್ಲಿದ್ದ ಎಮ್ಮೆಗಳ ಮೈಗೂ ಬೆಂಕಿ ತಾಗಿದೆ.

ಕಪ್ಪಗಲ್ಲು ರಸ್ತೆಯಲ್ಲಿರುವ ಸುರೇಶ ಎಂಬುವರ 3 ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಎರಡು ಎಮ್ಮೆಗಳ ಮೈಗೆ ಬೆಂಕಿ ಹತ್ತಿಕೊಂಡು ಗಾಯಗಳಾಗಿವೆ. ಬೆಂಕಿ ವ್ಯಾಪಿಸುತ್ತಿದ್ದಂತೆ, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.












Click it and Unblock the Notifications