10 ಸಾವಿರ ಕೊಟ್ಬಿಡಿ, ಬೇಕಾದ ಹಾಗೆ ಕಾಪಿ ಮಾಡ್ಕೊಳಿ...
ಬಾಗಲಕೋಟೆ, ನವೆಂಬರ್ 19: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಢವಳೇಶ್ವರ ಪುನರ್ ವಸತಿ ಕೇಂದ್ರದಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಪದವಿ ವಿದ್ಯಾರ್ಥಿಗಳು ಬಿಂದಾಸ್ ಆಗಿ ಸಾಮೂಹಿಕ ನಕಲು ಮಾಡಿರುವ ಘಟನೆ ನಡೆದಿದೆ.
ಢವಳೇಶ್ವರದ ಸರ್.ಎಂ ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ. ಕಾಲೇಜಿನ ಸಿಬ್ಬಂದಿಯೇ ನಕಲು ಮಾಡಲು ಕುಮ್ಮಕ್ಕು ನೀಡಿರುವ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಗಳಿಗೆ ನಕಲು ಪೂರೈಕೆಗೆ ವಿಷಯವೊಂದಕ್ಕೆ 10 ಸಾವಿರ ಹಣವನ್ನು ಸಿಬ್ಬಂದಿ ವಸೂಲು ಮಾಡಿರುವುದಾಗಿ ತಿಳಿದುಬಂದಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ಯೂನಿವರ್ಸಿಟಿ ಅಧೀನದಲ್ಲಿರುವ ಕಾಲೇಜು ಇದಾಗಿದೆ.












Click it and Unblock the Notifications