ರಾಜಕೀಯ ಅಸಹ್ಯ ಮೂಡಿಸಿದೆ : ಕ್ಷಮೆ ಕೇಳಿದ ಯುವ ಕಾಂಗ್ರೆಸ್ ಶಾಸಕ
ಬಾಗಲಕೋಟೆ, ಜುಲೈ 11 : 'ಕುದುರೆ ವ್ಯಾಪಾರದ ರಾಜಕೀಯ ನನ್ನಂತಹ ಹಲವಾರು ಯುವಕರಿಗೆ ಅಸಹ್ಯ ಮೂಡಿಸಿದೆ' ಎಂದು ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಹೇಳಿದ್ದಾರೆ. ಮತದಾರ ಬಾಂಧವರಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ.
2018ರ ನವೆಂಬರ್ನಲ್ಲಿ ನಡೆದ ಜಮಖಂಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆನಂದ್ ನ್ಯಾಮಗೌಡ ಅವರು ಆಯ್ಕೆಯಾಗಿದ್ದಾರೆ. ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದಾಗಿ ಎದುರಾದ ಉಪ ಚುನಾವಣೆಯಲ್ಲಿ ಅವರ ಪುತ್ರ ಆನಂದ್ ನ್ಯಾಮಗೌಡ ವಿಧಾನಸಭೆಗೆ ಆರಿಸಿ ಬಂದರು.
ಪ್ರಸ್ತುತ ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮ ನಡೆಯುತ್ತಿದೆ. 16 ಶಾಸಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಉಳಿಯುವುದೇ, ಬಹುಮತ ಕಳೆದುಕೊಳ್ಳುವುದೇ? ಎಂಬ ಆತಂಕ ಎದುರಾಗಿದೆ. ಶಾಸಕರು ರೆಸಾರ್ಟ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.

ಹಲವು ನಿರೀಕ್ಷೆಗಳೊಂದಿಗೆ ಮೊದಲ ಬಾರಿಗೆ ಆಯ್ಕೆಯಾಗಿ ಬಂದ ಆನಂದ್ ನ್ಯಾಮಗೌಡ ಅವರು ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಮತದಾರ ಬಾಂಧವರಲ್ಲಿ ಕ್ಷಮೆ ಕೇಳಿದ್ದಾರೆ....... ಶಾಸಕರು ಹೇಳಿದ್ದೇನು?.....
ಮತದಾರ ಬಾಂಧವರಲ್ಲಿ ಕ್ಷಮೆಯಾಚಿಸುತ್ತಾ,
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದರೂ ಸಹ ಬಹಳಷ್ಟು ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಹೊಸದೊಂದು ಅಭಿವೃದ್ಧಿಯ ಪರ್ವದ ಕೊಡುಗೆಯನ್ನು ನೀಡುವ ಭರವಸೆಯನ್ನು ಹೊಂದಿದ್ದೆ. ಆದರೆ ಕುದುರೆ ವ್ಯಾಪಾರದ ರಾಜಕೀಯ ನನ್ನಂತಹ ಹಲವಾರು ಯುವಕರಿಗೆ ಅಸಹ್ಯ ಮೂಡಿಸಿದೆ.
ಹಗಲೆನ್ನದೇ, ಇರುಳೆನ್ನದೇ, ದುಡಿಯುವ ಕಾರ್ಯಕರ್ತರಿಗೆ, ಜನತೆಗೆ ಈ ರೀತಿಯ ಪರಿಸ್ಥಿತಿ ತುಂಬಾ ನೋವು ತಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ಪಕ್ಷ ಆಡಳಿತ ನಡೆಸಿದರೆ ಇನ್ನೊಂದು ವಿರೋಧ ಪಕ್ಷವಾಗಿ ಜನತೆಯ ಆಶೋತ್ತರಗಳನ್ನು ಎತ್ತಿಹಿಡಿಯುವ ಕೆಲಸಮಾಡಬೇಕು.
ಭಾರತೀಯ ರಾಜಕೀಯ ಇತಿಹಾಸದಲ್ಲೇ ಈ ರೀತಿಯ ಕುದುರೆ ವ್ಯಾಪಾರದ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಎಂದೂ ಕೂಡ ಕಂಡಿರಲಿಲ್ಲ, ಕೇಳಿರಲಿಲ್ಲ. ಇದು ನಾವು ನಮ್ಮನ್ನ, ಅದೆಷ್ಟೋ ಅಭಿಮಾನದಿಂದ, ಅಭಿಲಾಷೆಯಿಂದ ಆರಿಸಿಕಳಿಸಿದ ಮತದಾರರಿಗೆ ಮಾಡುತ್ತಿರುವ ಅವಮಾನವಾಗಿದೆ.
ಇಂದಿನ ಯುವ ಸಮೂಹ ತಾವಾಗಿಯೇ ಮೆಚ್ಚಿಕೊಂಡು ಜನತೆಯ ಸೇವೆಗೆ ಬರುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಜನರ ಆಶೀರ್ವಾದದಿಂದ ಆಯ್ಕೆಯಾದ ನಾವು ಜನಪರ ಕೆಲಸಗಳನ್ನು ಮಾಡುತ್ತಾ ಕ್ಷೇತ್ರವನ್ನು, ರಾಜ್ಯದ ಅಭಿವೃದ್ಧಿಯ ಪಥದಕಡೆಗೆ ಒಯ್ಯುವತ್ತ, ಗಮನಹರಿಸುವುದನ್ನ ಬಿಟ್ಟು ಸ್ವಂತ ಲಾಭಕ್ಕೆ, ಅಧಿಕಾರದ ಮೋಹಕ್ಕೆಬಿದ್ದು, ಅಮಾಯಕ ಜನತೆಗೆ ವಂಚಿಸುತ್ತಿರುವುದು ಯಾವ ನ್ಯಾಯ?.
ಗೆಲ್ಲುವಾಗ ಒಂದು, ಗೆದ್ದ ಮೇಲೊಂದು, ಎನ್ನುವ ದ್ವಿಮುಖ ಮುಖವಾಡ ಖಂಡನೀಯ. ನಾನೀಗ ಪಕ್ಷ ಬೇಧ ಮರೆತು ಎಲ್ಲಾ ಪ್ರಜಾಪ್ರತಿನಿಧಿಗಳಿಗೆ ಕೇಳುವುದಿಷ್ಟೇ. ಒಂದಿಷ್ಟು ಮನಸ್ಥಾಪ, ಭಿನ್ನಾಭಿಪ್ರಾಯದಿಂದ, ಪಕ್ಷದಿಂದ ಪಕ್ಷಕ್ಕೆ ಹಾರುವುದು, ರಾಜೀನಾಮೆ ನೀಡುವುದೊಂದೇ ಪರಿಹಾರವಲ್ಲ.
ಜನತೆಯ ಕಣ್ಣೀರು ವರೆಸಬೇಕಾದ ನಾಯಕರೇ, ಕಣ್ಣಿಗೆ ಮಣ್ಣೆರೆಚುವಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ತೋರುವ ಅಗೌರವವಾಗಿದೆ. ಕೈಮುಗಿದು ಮತ ಕೇಳುವ ನಾವು, ಜನತೆಯ ಒಪ್ಪಿಗೆ ಪಡೆಯದೇ, ಈ ರೀತಿ ವರ್ತಿಸುವುದು ಸಹ್ಯವಲ್ಲ.
ರಾಜಕೀಯದ ಮೌಲ್ಯ ಕುಸಿಯದಂತೆ ಜನತೆಯ ಪ್ರೀತಿಗೆ ಮೋಸಮಾಡದಂತೆ ಕಾರ್ಯನಿರ್ವಹಿಸುತ್ತಾ ಅಭಿವೃದ್ಧಿಯ ಕಡೆಗೆ ಗಮನಹರಿಸುವವರು ನಿಜವಾದ ನಾಯಕರು, ಪ್ರಜಾಪಾಲಕರು. ಇಂದಿನ ಅರಾಜಕತೆಗೆ ಧಿಕ್ಕಾರವಿರಲಿ.
ನಿಮ್ಮ,
ಆನಂದ ಸಿದ್ದು ನ್ಯಾಮಗೌಡ.
ಶಾಸಕರು ಜಮಖಂಡಿ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications