Get Updates
Get notified of breaking news, exclusive insights, and must-see stories!

ಹಿಂದೂ ಧರ್ಮದ ಹೆಸರಿನಲ್ಲಿ ಗುಂಡಿಟ್ಟು ಕೊಂದಿಲ್ಲ, ಇದೆಲ್ಲ ರಾಜಕೀಯ: RB ತಿಮ್ಮಾಪುರ

ಬಾಗಲಕೋಟೆ, ಏಪ್ರಿಲ್ 27: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರ ದಾಳಿಗೆ 26 ಭಾರತೀಯ ಪ್ರವಾಸಿಗರನ್ನು ಹತ್ಯೆಗೈಯಲಾಗಿದೆ. ಈ ಸಂಬಂಧ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಗಳು ಆಕ್ರೋಶಕ್ಕೆ ಕಾರಣವಾಗಿವೆ. ಇದೀಗ ಉಗ್ರರ ದಾಳಿ ವಿಚಾರವಾಗಿ, ಅಬಕಾರಿ ಸಚಿವ ಆರ್ ಬಿ.ತಿಮ್ಮಾಪುರ ಈ ದೇಶದಲ್ಲಿ ಬೇಹುಗಾರಿಕೆ ವಿಫಲತೆ ಆಗುತ್ತಿದೆ. ಇದೇನು ಮೊದಲಲ್ಲ ಮೊದಲಲ್ಲ ಎಂದು ಅವರು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಬೇಹುಗಾರಿಕೆ ಪೆಲ್ಯೂರ್ ಆಗಿರುವುದು ಇದೇನು ಮೊದಲಲ್ಲ. ಈ ಹಿಂದೆ ಕಾರ್ಗಿಲ್ ಯುದ್ಧ, ಪುಲ್ವಾಮಾದಲ್ಲಿ ವಿಫಲವಾಗಿತ್ತು. ಇದೀಗ ಮತ್ತೆ ಪಹಲ್ಗಾಮ್ ನಲ್ಲಿ ಆಗಿದೆ. ಇದನ್ನು ಕೇಳಿದರೆ ಹಿಂದು ಐಡಿ ಕಾರ್ಡ್ ನೋಡಿದರೂ ಗುಂಡು ಹೊಡೆದರು ಎಂದು ಹೇಳುತ್ತಿದ್ದಾರೆ. ಯಾಕೆ ಮುಸ್ಲಿಮರನ್ನು ಕೊಲ್ಲೆ ಮಾಡಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

India s Espionage is Failure There was no Killing Name of Hinduism RB Thimmapura

ಹಿಂದೂದವರ ಹುಡುಕಿ ಹತ್ಯೆ ಬಗ್ಗೆ ಸಚಿವ ಅನುಮಾನ

ಯಾರೆ ಮೃತಪಟ್ಟರು ಅದನ್ನು ರಾಜಕೀಯವಾಗಿ ಹೇಗೆ ಲಾಭ ತಗೊಬೇಕು? ಎನ್ನುವುದೇ ನಮ್ಮ ಧ್ಯೇಯ ಆದರೆ, ದೇಶದ ಪರಿಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಬೇಕು. ಜನರ ಮೃತಪಟ್ಟಾಗ ದೇಶಕ್ಕೆ ಗಂಡಾಂತರ ಬಂದಿದೆ. ಈ ವಿಚಾರಕ್ಕೆ ನೋವು ವ್ಯಕ್ತಪಡಿಸುವುದು ಬಿಟ್ಟು. ಹಿಂದು ಧರ್ಮದವರನ್ನಷ್ಟೆ ಹುಡುಕಿ ಹುಡುಕಿ ಕೊಂದರು ಎಂದು ಹೇಳುವುದು ಸರಿಯಲ್ಲ.

ಈ ಹಿಂದೆ ಚುನಾವಣೆ ಬಂದಾಗ ಕಾರವಾರದಲ್ಲಿ ಯಾರೋ ಸತ್ತರೆ ಮುಸ್ಲಿಮರೇ ಕೊಂದರು ಎಂದರು. ಆನಂತರ ಅಸಹಜ ಸಾವು ಎಂದು ತಿಳಿದು ಬಂತು. ಎಲ್ಲವನ್ನೂ ಎಲೆಕ್ಷನ್ ದೃಷ್ಟಿಯಿಂದ ನೋಡುವುದು ಸರಿನಾ?. ಪಹಲ್ಗಾಮ್‌ನಲ್ಲಿ ಮೃತಪಟ್ಟ ಮಂಜುನಾಥ ಅವರ ಪತ್ನಿಯೇ, ನಮಗೆ ಆಗ ಮುಸ್ಲಿಂ ವ್ಯಕ್ತಿಯೊಬ್ಬ ಬಂದು ಸಹಾಯ ಮಾಡಿದ ಎಂದಿದ್ದಾರೆ ಎಂದರು.

India s Espionage is Failure There was no Killing Name of Hinduism RB Thimmapura

ಕೆಲವರನ್ನು ಹಿಂದು ಧರ್ಮದವರಾ? ಎಂದು ಕೇಳಿ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಆಘಾತದಲ್ಲಿದ್ದಾಗ ಮನುಷ್ಯ ಧರ್ಮ ಕೇಳಿ ಹೊಡೆದರು ಎಂದು ಸಹಜವಾಗಿ ಹೇಳಿರಬಹುದು ಎಂದ ತಿಮ್ಮಾಪುರ ಅವರು ಹಿಂದೂ ಹೆಸರು ಕೇಳಿ ಗುಂಡ ಹೊಡೆದರು ಎಂಬುದನ್ನು ಅಲ್ಲೆ ಗಳೆದದಿದ್ದಾರೆ. ಮುಸ್ಲಿಂ ಯುವಕರು ಹಿಂದುಗಳನ್ನು ರಕ್ಷಣೆ ಮಾಡಿದಾರೆ. ಈ ಬಗ್ಗೆ ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಿ ಎಂದು ಹೇಳಿದರು.

ಗುಂಡು ಹೊಡೆದವನು ನಿಲ್ಲದೇ ಬಡ ಬಡ ಓಡಿ ಹೋಗುತ್ತಾನೆ. ನಿಂತು ಜಾತಿ ಕೇಳಿ ಹೊಡೆಯುವಷ್ಟು ವ್ಯವದಾನ ಯಾರಿಗೂ ಇರುವುದಿಲ್ಲ. ಏನೆ ಇದ್ದರು ಅದನ್ನು ಧರ್ಮಕ್ಕೆ ಹಚ್ಚಿ ಲಾಭ ತೆಗೆದುಕೊಳ್ಳುವುದು ಹುನ್ನಾರ ಏನು‌ ನಡೆಯುತ್ತಿದೆ. ಇದು ಆಗಬಾರದು. ಹಿಂದೂ ಹೆಸರಿನಲ್ಲಿ ರಾಜಕಾರಣ ಮಾಡದೇ, ದೇಶ ಗಂಡಾಂತರ ಇರುವುದನ್ನು ಎದುರಿಸಬೇಕು ಎಂಬ ಭಾವನೆ ನಮ್ಮಲ್ಲಿ ಬರಬೇಕೇ ವಿನಃ ಧರ್ಮ ಅಂತ ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು. ಹಿಂದೂ ಹೆಸರಿನಲ್ಲಿ ಕೊಲೆ ಮಾಡಿಲ್ಲ ಎಂದು ಅವರು ಹೇಳಿದರು.

ಒಂದು ವೇಳೆ ಧರ್ಮದ ಹೆಸರಿನಲ್ಲಿ ಕೇಳಿ ಗುಂಡಿಕ್ಕಿದ್ದರೆ ಅದನ್ನು ಧರ್ಮ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವ ಹುಚ್ಚುತನ ಮಾಡಬಾರದು. ಕಲಬುರ್ಗಿಯಲ್ಲಿ ಮಹಿಳೆಯರಿಂದ ಪಾಕ್ ಧ್ವಜ ‌ರಕ್ಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಸ್ತೆ ಮೇಲೆ ಅಂಟಿಸಿದ ಪಾಕ್ ಧ್ವಜ ರಕ್ಷಣೆ ಮಾಡಿದವರ ಬಗ್ಗೆ ಪ್ರತಿಕ್ರಿಯಿಸಿ ಅವರು, ರಾಷ್ಟ್ರದ್ರೋಹಿಗಳು ಯಾರಿದ್ದಾರೆ. ಅವರನ್ನು ಬಂಧಿಸಬೇಕು, ಶಿಕ್ಷೆ ಆಗಬೇಕು. ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದವರು ಯಾರು? ದ್ವಜ ರಕ್ಷಿಸಿದ ಮುಸ್ಲಿಂ ಮಹಿಳೆಯರ ಮೇಲೂ ಕ್ರಮ ಆಗುತ್ತದೆ ಎಂದು ಸಚಿವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+