ಶ್ರೀರಾಮುಲುರನ್ನು ಬಿಜೆಪಿ ರಾಜಕೀಯ ಬಲಿಪಶು ಮಾಡುತ್ತಿದೆ: ಉಗ್ರಪ್ಪ
ಬಾಗಲಕೋಟೆ, ಮೇ 3: ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಿರುವ ಬಿಜೆಪಿ, ಅವರನ್ನು ರಾಜಕೀಯವಾಗಿ ಬಲಿಪಶು ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಬಾದಾಮಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರನ್ನು ಬಿಜೆಪಿ ಡಿಸಿಎಂ ಮಾಡಲ್ಲ. ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕಡೆಗಳಲ್ಲಿ ಅವರು ಸೋಲುತ್ತಾರೆ. ಸಿದ್ದರಾಮಯ್ಯ ಗೆಲುವು ಖಚಿತ ಎಂದು ಹೇಳಿದರು.
ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಬಾದಾಮಿಯಲ್ಲೂ ಸಿದ್ದರಾಮಯ್ಯಗೆ ಸೋಲು
"ಶ್ರೀರಾಮುಲು ಅವರ ಮೇಲೆ ಹಾಗೂ ವಾಲ್ಮೀಕಿ ಸಮಾಜದ ಮೇಲೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಕೇಂದ್ರದಲ್ಲಿ ಅವರನ್ನು ಮಂತ್ರಿ ಮಾಡಲಿಲ್ಲವೇಕೆ?" ಎಂದು ಇದೇ ಸಂದರ್ಭದಲ್ಲಿ ಉಗ್ರಪ್ಪ ಪ್ರಶ್ನಿಸಿದರು.
ಬಿಎಸ್ ವೈ ಮೇಲೆ 4 ಕೋಟಿ ಲಂಚ ಆರೋಪ: ಕಾಂಗ್ರೆಸ್ ನಿಂದ ದಾಖಲೆ ಬಿಡುಗಡೆ
"ರಾಮುಲುಗೂ , ಬಾದಾಮಿಗೂ ನಿಕಟ ಸಂಬಂಧ ಇರಲಿಲ್ಲ. ಬಿಜೆಪಿಗೆ ನಿಜಕ್ಕೂ ತಾಕತ್ ಇದ್ದಿದ್ದರೆ ಸಿಎಂ ವಿರುದ್ಧ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಇಲ್ಲವೇ ಸಂಸದ ಗದ್ದಿಗೌಡರ ಅವರನ್ನು ಕಣಕ್ಕೆ ಇಳಿಸಬೇಕಿತ್ತು. ಆದರೆ, ರಾಮುಲು ಅವರನ್ನು ರಾಜಕೀಯ ತಂತ್ರಗಾರಿಕೆ ಮಾಡಿ ಬಲಿಪಶು ಮಾಡುತ್ತಿದೆ," ಎಂದು ಅವರು ಹೇಳಿದರು.