ತಿರುಮಲ: ಆನ್ಲೈನ್ನಲ್ಲಿ ವಿಶೇಷ ಪ್ರವೇಶ ದರ್ಶನ ಟಿಕೆಟ್ ಬುಕ್ ಮಾಡುವುದು ಹೇಗೆ?
ತಿರುಮಲ ಅಕ್ಟೋಬರ್ 30: ತಿರುಪತಿ ದರ್ಶನಕ್ಕಾಗಿ ವಿಶೇಷ ಪ್ರವೇಶ ದರ್ಶನ ಟಿಕೆಟ್ಗಳನ್ನು ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಆನ್ಲೈನ್ನಲ್ಲಿ ಮಾಡಲಾಗುತ್ತಿದೆ. ಇತ್ತೀಚೆಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ 300 ರೂ.ಕ್ಕೆ ವಿಶೇಷ ಪ್ರವೇಶ ದರ್ಶನ ಟಿಕೆಟ್ಗಳ ಆನ್ಲೈನ್ ಕೋಟಾದಲ್ಲಿ ಬಿಡುಗಡೆ ಮಾಡಿದೆ.
ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ತಿರುಪತಿಗೆ ಹೋಗುವುದ ಅಷ್ಟೊಂದು ಸುಲಭವಲ್ಲ. ಈಗಾಗಲೇ ತಿರುಪತಿಗೆ ಹೋಗಿ ಬಂದಿರುವುದರಿಂದ ಸಲಹೆಗಳನ್ನು ಪಡೆಯುವುದು ಅತೀ ಅವಶ್ಯಕ. ಪ್ರತೀ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲಿನ ನೂಕುನುಗ್ಗಲು ಮಧ್ಯೆ ದೇವರ ದರ್ಶನ ಸರಿಯಾಗಿ ಆದರೆ ಅವರೇ ಪುಣ್ಯವಂತರು. ತಿರುಮಲ ವೆಂಕಟೇಶ್ವರ ದೇವಸ್ಥಾನವು ಆಂಧ್ರಪ್ರದೇಶದ ತಿರುಪತಿ ಬಳಿಯ ತಿರುಮಲದ ಏಳನೇ ಬೆಟ್ಟವಾದ ವೆಂಕಟದಲ್ಲಿರುವ ವಿಶ್ವ ಪ್ರಸಿದ್ಧ ದೇವಾಲಯವಾಗಿದೆ. ದೇಶದ ಅತ್ಯಂತ ಪೂಜ್ಯ ಮತ್ತು ಶ್ರೀಮಂತ ದೇವಾಲಯಗಳಲ್ಲಿ ಇದು ಒಂದಾಗಿದೆ.
ಯಾವಾಗ ಭೇಟಿ ನೀಡುವುದು ಸೂಕ್ತ
ಒಂದು ವೇಳೆ ನೀವು ಆಫ್ ಸೀಸನ್ , ಹೆಚ್ಚು ಜನ ಜಂಗುಳಿ ಇಲ್ಲದ ಸೀಸನ್ಗಾಗಿ ಕಾಯುವುದಾದರೆ ಅದು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಸೀಸನ್ನಲ್ಲಿ ಹೋದರೂ ಜನರು ತುಂಬಿ ತುಳುಕುತ್ತಿರುತ್ತಾರೆ. ಅದರಲ್ಲೂ ಸ್ವಲ್ಪ ಜನ ಕಡಿಮೆ ಇರುವಾಗ ಹೋಗಬೇಕೆಂದರೆ ಮಳೆಗಾಲದಲ್ಲಿ ಹೋಗುವುದು ಬೆಸ್ಟ್. ಆಗಸ್ಟ್ನಿಂದ ಸಪ್ಟೆಂಬರ್ ತಿಂಗಳು ಬೆಸ್ಟ್. ನೀವು ಮಳೆಯಲ್ಲಿ ಕೊಡೆಹಿಡಿದುಕೊಂಡು ದೇವರ ದರ್ಶನಕ್ಕೆ ಹೋಗಲು ಸಿದ್ಧರಿದ್ದೀರೆಂದಾದರೆ ಅಷ್ಟೇನು ನೂಕುನುಗ್ಗಲಿಲ್ಲದೆ ದರ್ಶನ ಪಡೆಯಬಹುದು.

ವಿಶೇಷ ಪ್ರವೇಶ ದರ್ಶನ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಹೇಗೆ ಬುಕ್ ಮಾಡಬಹುದು ಎಂಬುದು ಇಲ್ಲಿದೆ:
1. https://tirupatibalaji.ap.gov.in/#/login, TTD ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
2. ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಸೈಟ್ಗೆ ಲಾಗಿನ್ ಮಾಡಿ
3. ವಿಶೇಷ ಪ್ರವೇಶ ದರ್ಶನದ ಮೇಲೆ ಕ್ಲಿಕ್ ಮಾಡಿ
4. ಕ್ಯಾಲೆಂಡರ್ ತೆರೆಯುತ್ತದೆ ಮತ್ತು ನಿಮ್ಮ ಆಯ್ಕೆಯ ದಿನಾಂಕಗಳನ್ನು ಆಯ್ಕೆ ಮಾಡಿಕೊಳ್ಳಿ
5. ಈ ವೇಳೆ ಹಸಿರು ಬಣ್ಣವು ಲಭ್ಯತೆಯನ್ನು ಸೂಚಿಸುತ್ತದೆ. ಹಳದಿ ಬಣ್ಣ ಇದ್ದರೆ ಎಂದರೆ ಸ್ಲಾಟ್ಗಳು ವೇಗವಾಗಿ ತುಂಬುತ್ತವೆ ಮತ್ತು ಕೆಂಪು ಉಲ್ಲೇಖವು ಪ್ರವೇಶ ಪೂರ್ಣವಾಗಿದೆ ಎಂದು ಘೋಷಿಸುತ್ತದೆ. ದಿನಾಂಕಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ನೀಲಿ ಬಣ್ಣ ಸೂಚಿಸುತ್ತದೆ.
6. ದಿನಾಂಕಗಳನ್ನು ಆಯ್ಕೆ ಮಾಡಿದ ನಂತರ, ವಿವರಗಳನ್ನು ಭರ್ತಿ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ
7. ನಂತರ, ನೀವು ಹೆಸರು, ವಯಸ್ಸು ಮತ್ತು ಆಧಾರ್ ಕಾರ್ಡ್ ಸೇರಿದಂತೆ ವಿವರಗಳನ್ನು ಸೇರಿಸುವ ಅಗತ್ಯವಿದೆ.
8. ಈ ದಿನಾಂಕಗಳು ವಿಶೇಷ ಸಂದರ್ಭಗಳನ್ನು ಹೊಂದಿರುವ ಕಾರಣ ಡಿಸೆಂಬರ್ 8 ಮತ್ತು 16 ರ ಟಿಕೆಟ್ಗಳನ್ನು ತಡೆಹಿಡಿಯಲಾಗಿದೆ. ತಿರುಚನೂರು ದೇವಸ್ಥಾನದಲ್ಲಿ ಡಿಸೆಂಬರ್ 8 ರಂದು ಪಂಚಮಿ ತೀರ್ಥವಾದರೆ, ಡಿಸೆಂಬರ್ 16 ರಂದು ಧನುರ್ಮಾಸಂ ಆರಂಭವಾಗಿದೆ. ಮಾನ್ಯವಾದ ವಿಶೇಷ ಪ್ರವೇಶ ದರ್ಶನ ಬುಕಿಂಗ್ ಇದ್ದರೆ ಮಾತ್ರ ಯಾತ್ರಾರ್ಥಿಗಳು ತಿರುಮಲ ಸ್ಥಳಕ್ಕೆ ವಸತಿಯನ್ನು ಕಾಯ್ದಿರಿಸಬಹುದು.
ವಿಶೇಷ ಸವಲತ್ತುಗಳು
ನಿಮ್ಮೊಂದಿಗೆ ಸಣ್ಣ ಮಗು, ಹಿರಿಯ ನಾಗರಿಕರು ಅಥವಾ ಅಂಗವಿಕಲ ಸಿಬ್ಬಂದಿಗಳಿದ್ದರೆ ನೀವು ವಿಶೇಷ ಸವಲತ್ತುಗಳನ್ನು ಪಡೆಯಬಹುದು ಮತ್ತು ವೇಗವಾಗಿ ದರ್ಶನ ಪಡೆಯಬಹುದು. ಹಿರಿಯ ನಾಗರಿಕರನ್ನು ಹೋಟೆಲ್ಗೆ ಕರೆದೊಯ್ಯಲು ಮತ್ತು ಹೊರಗೆ ಹೋಗಲು ವಿಶೇಷ ವ್ಯವಸ್ಥೆಗಳಿವೆ. ತಿಮ್ಮಪ್ಪನ ದರ್ಶನಕ್ಕಾಗಿ ಗಂಟೆಗಟ್ಟಲೆ ದೀರ್ಘ ಸರತಿಯಲ್ಲಿ ಕಾಯುತ್ತಿರುವಾಗ ನೀವು ನೀರಿನ ಬಾಟಲಿ ಮತ್ತು ತಿಂಡಿಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಒಳ್ಳೆಯದು. ಇಲ್ಲಿ ಎಲ್ಲಾ ಸಮಯದಲ್ಲೂ ಸರತಿಯಲ್ಲೇ ನಿಲ್ಲುವುದನ್ನು ಮರೆಯದಿರಿ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications