Get Updates
Get notified of breaking news, exclusive insights, and must-see stories!

ಗೋದಾವರಿ ನದಿ ಪ್ರವಾಹಕ್ಕೆ ಆಂಧ್ರ ನೂರಾರು ಹಳ್ಳಿಗಳು ತತ್ತರ!

ಅಮರಾವತಿ,ಜು.15: ಆಂಧ್ರಪ್ರದೇಶದ ರಾಜಮಹೇಂದ್ರವರಂ ಬಳಿಯ ದೋವಲೇಶ್ವರಂನಲ್ಲಿರುವ ಸರ್ ಆರ್ಥರ್ ಕಾಟನ್ ಬ್ಯಾರೇಜ್‌ನಲ್ಲಿ ಪ್ರವಾಹವು ಮೂರನೇ ಅಪಾಯದ ಮಟ್ಟವನ್ನು ಈಗ ದಾಟಿದೆ.

ಉಕ್ಕುತ್ತಿರುವ ಗೋದಾವರಿ ನದಿಯಿಂದ ಶುಕ್ರವಾರ ಬೆಳಿಗ್ಗೆ 19.05 ಲಕ್ಷ ಕ್ಯೂಸೆಕ್ ನೀರನ್ನು ಹೊರಹಾಕುತ್ತಿರುವುದರಿಂದ ನೂರಾರು ಹಳ್ಳಿಗಳು, ಮುಖ್ಯವಾಗಿ ದ್ವೀಪದಂತಹ ಆಂಧ್ರ ಗ್ರಾಮಗಳು ಅತ್ಯಂತ ಭೀಕರವಾದ ಪ್ರವಾಹದ ಹಿನ್ನೆಲೆಯಲ್ಲಿ ತತ್ತರಿಸುತ್ತಿವೆ.

ಇಲ್ಲಿನ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಿಂದ ಪರಿಸ್ಥಿತಿಯನ್ನು ಅವಲೋಕಿಸಿರುವ ವಿಶೇಷ ಮುಖ್ಯ ಕಾರ್ಯದರ್ಶಿ (ಕಂದಾಯ-ವಿಪತ್ತು ನಿರ್ವಹಣೆ) ಜಿ ಸಾಯಿ ಪ್ರಸಾದ್, ಕಾಟನ್ ಬ್ಯಾರೇಜ್‌ನಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ 22- 23 ಲಕ್ಷ ಕ್ಯೂಸೆಕ್‌ಗೆ ನೀರು ಹರಿಸಬಹುದು ಎಂದು ಹೇಳಿದ್ದಾರೆ. ಕಾಟನ್ ಬ್ಯಾರೇಜ್‌ನಲ್ಲಿ 20 ಲಕ್ಷ ಕ್ಯೂಸೆಕ್‌ಗೆ ನೀರು ಹೊರ ಬಂದರೆ ಆರು ಜಿಲ್ಲೆಗಳ 42 ಮಂಡಲಗಳ ವ್ಯಾಪ್ತಿಯ 554 ಗ್ರಾಮಗಳು ಪ್ರವಾಹದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ನಾವು ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

 ಕೋನಸೀಮಾ ಜಿಲ್ಲೆಯ 20 ಮಂಡಲಗಳು ಬಾಧಿತ

ಕೋನಸೀಮಾ ಜಿಲ್ಲೆಯ 20 ಮಂಡಲಗಳು ಬಾಧಿತ

ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಶುಕ್ರವಾರ ಮಧ್ಯಾಹ್ನ ಗೋದಾವರಿ ಪ್ರವಾಹದಿಂದ ಉಂಟಾದ ಹಾನಿಯನ್ನು ವೀಕ್ಷಿಸಲು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಆಂಧ್ರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಕೋನಸೀಮಾ ಜಿಲ್ಲೆಯ 20 ಮಂಡಲಗಳು, ಪೂರ್ವ ಗೋದಾವರಿಯಲ್ಲಿ 8 ಮಂಡಲಗಳು, ಅಲ್ಲೂರಿ ಸೀತಾರಾಮ ರಾಜುವಿನ 5, ಪಶ್ಚಿಮ ಗೋದಾವರಿ 4, ಏಲೂರು ಮೂರು ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ 2 ಮಂಡಲಗಳಲ್ಲಿ ಪ್ರವಾಹದ ಪರಿಣಾಮ ಉಂಟಾಗಬಹುದು ಎಂದು ತಿಳಿಸಿದೆ.

ಮಳೆ ಹಿನ್ನೆಲೆ ಗೋದಾವರಿ ಗಂಟೆಗಟ್ಟಲೆ ಉಗ್ರ ಸ್ವರೂಪ ಪಡೆಯುತ್ತಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ತಂಡಗಳ ಸಂಖ್ಯೆಯನ್ನು ಎಂಟಕ್ಕೆ ಮತ್ತು ಎಸ್‌ಡಿಆರ್‌ಎಫ್ 10ಕ್ಕೆ ಹೆಚ್ಚಿಸಲಾಗಿದೆ. ತುರ್ತು ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಅನ್ನು ಸಹ ಸೇವೆಗೆ ಒತ್ತಾಯಿಸಲಾಗಿದೆ.

 ಶ್ರೀಶೈಲಂ ಜಲಾಶಯಕ್ಕೆ 1,46,278 ಕ್ಯೂಸೆಕ್ ನೀರು

ಶ್ರೀಶೈಲಂ ಜಲಾಶಯಕ್ಕೆ 1,46,278 ಕ್ಯೂಸೆಕ್ ನೀರು

ಏತನ್ಮಧ್ಯೆ, ಕೃಷ್ಣಾ ನದಿಯೂ ನಿರಂತರ ಪ್ರವಾಹವನ್ನು ಪಡೆಯುತ್ತಿದ್ದು, ಶ್ರೀಶೈಲಂ ಜಲಾಶಯಕ್ಕೆ ಶುಕ್ರವಾರ ಬೆಳಗ್ಗೆ 1,46,278 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಇಲ್ಲಿ ಪ್ರಸ್ತುತ ಶೇಖರಣಾ ಮಟ್ಟವು 56.38 ಟಿಎಂಸಿ ಅಡಿಗಳಾಗಿದ್ದು, 159.43 ಟಿಎಂಸಿ ಅಡಿಗಳ ಪ್ರವಾಹದ ಮಟ್ಟ ಬಿಟ್ಟು ಪೂರ್ಣ ಜಲಾಶಯದ ಮಟ್ಟವಾದ 215.81 ಟಿಎಂಸಿ ಅಡಿಗಳಾಗಿದೆ. ಕಳೆದ ಕೆಲವು ದಿನಗಳಿಂದ ತನ್ನ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೋದಾವರಿ ನದಿಯು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹಕ್ಕೆ ಒಳಗಾಗಿರುವ ಏಲೂರು ಜಿಲ್ಲೆಯ ಏಜೆನ್ಸಿ ಮಂಡಲಗಳ ಪೋಲಾವರಂ ಯೋಜನೆ ಪೀಡಿತ ಗ್ರಾಮಗಳಲ್ಲಿ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.

ಪರಿಹಾರ ಕೇಂದ್ರಗಳಿಗೆ ಸ್ಥಳಾಂತರರ ವ್ಯವಸ್ಥೆ

ಭದ್ರಾಚಲಂನಲ್ಲಿ ಗೋದಾವರಿ ನೀರಿನ ಮಟ್ಟ 51.40 ಅಡಿ ಇದ್ದು, ಇದು ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಅಧಿಕಾರಿಗಳು ತಿಳಿಸಿದ್ದರು. ನೀರಾವರಿ, ಗಿರಿಜನ ಕಲ್ಯಾಣ, ಕಂದಾಯ, ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಅವಲೋಕಿಸಿದ ಏಲೂರು ಜಿಲ್ಲಾಧಿಕಾರಿ ವಿ.ಪ್ರಸನ್ನ ವೆಂಕಟೇಶ್, ಹೆಚ್ಚಿನ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡುವಂತೆ ಪ್ರವಾಹ ದಳದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

 ದೋಣಿ ಬಳಸಿ ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

ದೋಣಿ ಬಳಸಿ ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

ಏಲೂರು ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಗ್ರಾಮಗಳಲ್ಲಿ ಹಳ್ಳ, ಹೊಳೆ, ಕಾಲುವೆಗಳೆಲ್ಲ ತುಂಬಿ ಹರಿಯುತ್ತಿದ್ದು, ಕೆಲ ಪ್ರದೇಶಗಳಲ್ಲಿ ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ಗ್ರಾಮಸ್ಥರು ದೋಣಿಗಳನ್ನು ಬಳಸಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ಮೂರು ದಿನಗಳಿಂದ ಗೋದಾವರಿ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಜನವಸತಿ ಸಂಪರ್ಕ ಕಡಿತಗೊಂಡಿದ್ದರಿಂದ ಹಲವು ದ್ವೀಪ ಗ್ರಾಮಗಳು ಕಂಗಾಲಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+