ಜಗನ್ ರೆಡ್ಡಿ ಹೊಚ್ಚ ಹೊಸ ಸಂಪುಟ ಹೇಗಿದೆ? ಯಾರಿಗೆಲ್ಲ ಸ್ಥಾನ?

ಅಮರಾವತಿ, ಏಪ್ರಿಲ್ 10: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಮಾಡಿದ್ದಾರೆ. ಇದರಲ್ಲಿ ಅಂಥ ಕುತೂಹಲದ ವಿಷಯ ಏನಿದೆ ಎಂದರೆ, ಸಂಪುಟ ಪುನರ್ ರಚನೆಗೂ ಮುನ್ನ ಸಚಿವರೆಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಸರಿ ಸುಮಾರು 24 ಮಂದಿ ಸಚಿವರ ರಾಜೀನಾಮೆಯನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಆಂಧ್ರದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದ್ರನ್ ಅವರು ಎಲ್ಲರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದರ ಬೆನ್ನಲ್ಲೇ ಹೊಸದಾಗಿ ಮತ್ತೊಮ್ಮೆ ಜಗನ್ ತಮ್ಮ ಸಂಪುಟ ರಚಿಸಿದ್ದಾರೆ. ಏಪ್ರಿಲ್ 11ರಂದು ಹೊಸ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭರವಸೆ ನೀಡಿದಂತೆ ಎಲ್ಲಾ ಸಮುದಾಯ, ಹೊಸ ಜಿಲ್ಲೆ, ಹೊಸ ಮುಖಗಳಿಗೆ ಸಿಎಂ ಜಗನ್ ಆದ್ಯತೆ ನೀಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 25 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡ, ಅಲ್ಪ ಸಂಖ್ಯಾತರು ಹೀಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕರಾದವರಿಗೆ ಆದ್ಯತೆ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ರಾಜ್ಯಪಾಲರಿಗೆ 24 ಸಚಿವರ ರಾಜೀನಾಮೆ ಪತ್ರ ಸಲ್ಲಿಸಲಾಗಿತ್ತು. ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಲಾಗಿತ್ತು. ಏಪ್ರಿಲ್ 7ರಂದು ಜಗನ್ ಸಂಪುಟದ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಹೊಸ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದು, 24 ಮಂದಿ ಹೆಸರುಳ್ಳ ಪಟ್ಟಿಗೆ ಅನುಮೋದನೆ ಸಿಕ್ಕಿದೆ. ನಟಿ ರೋಜಾ ಸೇರಿದಂತೆ 10 ಮಂದಿ ಸಚಿವ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

CM Jagan Reddy Revamps Andhra Pradesh Cabinet, Here is the official list of new cabinet

2019 ರ ಜೂನ್‌ನಲ್ಲಿ ತಮ್ಮ ಕ್ಯಾಬಿನೆಟ್ ಅನ್ನು ಪುನರ್ ರಚಿಸುವ ಬಗ್ಗೆ ಜಗನ್ ತಿಳಿಸಿದ್ದರು. 2019 ರಲ್ಲಿ, ರೆಡ್ಡಿ ಮೊದಲ ಬಾರಿಗೆ ತಮ್ಮ ಸಂಪುಟವನ್ನು ರಚಿಸಿದಾಗ, ಅವರ 25 ಸಚಿವರಲ್ಲಿ 56 ಪ್ರತಿಶತದಷ್ಟು ಜನರು ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು. ಈ ಬಾರಿ ಅವರ ಪ್ರಾತಿನಿಧ್ಯವನ್ನು ಶೇ.68ಕ್ಕೆ ಹೆಚ್ಚಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಭಾನುವಾರ ಕಾರ್ಯಗತಗೊಳಿಸಿದ್ದಾರೆ ಎಂದು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಿದ್ದಾರೆ.

ಹೊಸ ಸಂಪುಟ ಸೇರಲಿರುವವರ ಪಟ್ಟಿ:ಗುಡಿವಾಡ ಅಮರನಾಥ, ದಾಡಿಶೆಟ್ಟಿ ರಾಜಾ, ಬೋತ್ಸ ಸತ್ಯನಾರಾಯಣ, ರಾಜಣ್ಣದೊರ ಧರ್ಮಣ್ಣ ಪ್ರಸಾದ ರಾವ್, ಸೀದಿರಿ ಅಪ್ಪಲರಾಜು, ಜೋಗಿ ರಮೇಶ್, ಅಂಬಟಿ ರಾಂಬಾಬು, ಕೊಟ್ಟು ಸತ್ಯನಾರಾಯಣ, ತಾನೇಟಿ ವನಿತಾ, ಕರುಮುರಿ ನಾಗೇಶ್ವರ ರಾವ್, ಮೇರುಗ ನಾಗಾರ್ಜುನ, ಬೂದಿ ಮುತ್ಯಾಲ ನಾಯ್ಡು, ವಿದುದಲ ರಜಿನಿ, ಕಾಕಣಿ ಗೋವರ್ಧನ ರೆಡ್ಡಿ, ಅಮ್ಜತ್ ಬಾಷಾ, ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ, ಬುಗ್ಗನ ರಾಜೇಂದ್ರನಾಥ ರೆಡ್ಡಿ, ಪಿನಿಪೆ ವಿಶ್ವರೂಪ, ಗುಮ್ಮನೂರು ಜಯರಾಂ, ಆರ್.ಕೆ ರೋಜಾ, ಉಷಶ್ರೀ ಚರಣ್, ತಿಪ್ಪೇಸ್ವಾಮಿ, ಚೆಲ್ಲುಬೋನ ವೇಣುಗೋಪಾಲ, ನಾರಾಯಣ ಸ್ವಾಮಿ.

ಹೊಸ ಆಂಧ್ರ ಕ್ಯಾಬಿನೆಟ್ ಹಿರಿಯ ಮತ್ತು ಅನುಭವಿ ನಾಯಕರ ಜೊತೆಗೆ ಸಮತೋಲಿತ ಆಡಳಿತಕ್ಕಾಗಿ ತಾಜಾ ಮತ್ತು ಯುವ ಮುಖಗಳನ್ನು ಒಳಗೊಂಡಿದೆ. ಹಿರಿಯರು ತಮ್ಮ ಪರಿಣತಿ ಮತ್ತು ಅನುಭವವನ್ನು ಮೇಜಿನ ಮೇಲೆ ತಂದರೆ, ಯುವ ನಾಯಕರು ನವೀನ ಆಲೋಚನೆಗಳು ಮತ್ತು ಉಪಕ್ರಮಗಳನ್ನು ತರುತ್ತಾರೆ, ಜನ-ಆಧಾರಿತ ಆಡಳಿತದ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ಪಕ್ಷ ಹೇಳಿದೆ.

Recommended Video

      ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ನಾಶ ಮಾಡಿದ ಹಿಂದೂ ಯುವಕರ ಮೇಲೆ HDK ಕೆಂಡಾಮಂಡಲ | Oneindia Kannada

      ರೆಡ್ಡಿಯವರ ಹೊಸ ಕ್ಯಾಬಿನೆಟ್‌ನಲ್ಲಿರುವ 25 ಸಚಿವರಲ್ಲಿ ಕನಿಷ್ಠ 17 ಮಂದಿ - 2024 ರ ಚುನಾವಣೆಗೆ ಮುಂಚಿತವಾಗಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ರಚಿಸಲಾಗಿದೆ - ಎಸ್‌ಸಿ, ಎಸ್‌ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಎಂದು ಮೂಲಗಳನ್ನು ಉಲ್ಲೇಖಿಸಿ ತೆಲುಗು ಮಾಧ್ಯಮಗಳು ವರದಿ ಮಾಡಿದೆ. ಹಿಂದಿನ ಸಂಪುಟದಲ್ಲಿ ಈ ಸಮುದಾಯಗಳ 14 ನಾಯಕರಿದ್ದರು. ಸಂಜೆ 7 ಗಂಟೆಗೆ ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗಿದ್ದರೂ, ಪ್ರಮಾಣ ವಚನ ಸಮಾರಂಭವು ಏಪ್ರಿಲ್ 11, ಸೋಮವಾರ ನಡೆಯಲಿದೆ ಎಂದು ಇದೀಗ ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+