'ಬಾಲಕೋಟ್ ದಾಳಿಯಲ್ಲಿ ಪಾಕ್ ಸೈನಿಕರಾಗಲಿ, ನಾಗರಿಕರಾಗಲಿ ಸಾವನ್ನಪ್ಪಿಲ್ಲ'
ಅಹ್ಮದಾಬಾದ್, ಏಪ್ರಿಲ್ 19: ಭಾರತೀಯ ವಾಯು ಸೇನೆಯು ಕಳೆದ ಫೆಬ್ರವರಿಯಲ್ಲಿ ನಡೆಸಿದ ಬಾಲಕೋಟ್ ದಾಳಿಯಲ್ಲಿ ಪಾಕಿಸ್ತಾನಿ ಯೋಧರಾಗಲಿ ಅಥವಾ ನಾಗರಿಕರಾಗಲಿ ಸಾವನ್ನಪ್ಪಿಲ್ಲ ಎಂದು ಗುರುವಾರ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಫೆಬ್ರವರಿ ಇಪ್ಪತ್ತಾರರಂದು ಬಾಲಕೋಟ್ ನಲ್ಲಿರುವ ಜೈಷ್-ಇ-ಮೊಹ್ಮದ್ ಉಗ್ರ ನೆಲೆ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿತ್ತು.
ಫೆಬ್ರವರಿ ಹದಿನಾಲ್ಕನೇ ತಾರೀಕು ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಆ ದಾಳಿ ನಡೆದಿತ್ತು. "ಆ ದಾಳಿ ನಡೆಸಿದ್ದು ಸ್ವ ರಕ್ಷಣೆಗಾಗಿ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. "ಪುಲ್ವಾಮಾ ಉಗ್ರ ದಾಳಿ ನಡೆದ ಮೇಲೆ ಗಡಿಯಾಚೆಗೆ ನಾವು ನಡೆಸಿದ ವಾಯು ದಾಳಿಯು ಸ್ವರಕ್ಷಣೆಗಾಗಿ ಎಂಬುದನ್ನು ಜಾಗತಿಕ ಸಮುದಾಯಕ್ಕೆ ತಿಳಿಸಿದೆವು" ಎಂದು ಅವರು ಹೇಳಿದ್ದಾರೆ.
ದಾಳಿಯ ವೇಳೆ ಪಾಕಿಸ್ತಾನಿ ನಾಗರಿಕರಿಗಾಗಲೀ ಅಥವಾ ಆ ದೇಶದ ಸೈನಿಕರಿಗಾಗಲೀ ಯಾವುದೇ ಹಾನಿ ಆಗಬಾರದು ಎಂದು ನಮ್ಮ ಸಶಸ್ತ್ರ ಪಡೆಗೆ ತಿಳಿಸಿದ್ದೆವು. ಅದನ್ನೇ ಜಾಗತಿಕ ಸಮುದಾಯದ ಮುಂದೆ ಹೇಳಿದ್ದೆವು ಎಂದಿದ್ದಾರೆ ಸುಷ್ಮಾ ಸ್ವರಾಜ್.

ಪುಲ್ವಾಮಾ ದಾಳಿಗೆ ಕಾರಣವಾದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ನೆಲೆಗಳನ್ನು ನಾಶ ಮಾಡಲು ಮಾತ್ರ ಸೇನೆಗೆ ತಿಳಿಸಲಾಗಿತ್ತು. ಮತ್ತು ನಮ್ಮ ಸೈನ್ಯವು ಅದೇ ರೀತಿ ಪಾಕಿಸ್ತಾನಿ ನಾಗರಿಕರಿಗಾಗಲೀ ಅಥವಾ ಸೈನಿಕರಿಗಾಗಲೀ ಹಾನಿ ಮಾಡದೆ ಕೆಲಸ ಮುಗಿಸಿತ್ತು ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಇಷ್ಟೊಂದು ಕೆಲಸವನ್ನು ಐದು ವರ್ಷದಲ್ಲಿ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಬರಬಹುದು. ಬಹುಮತದ ಸರಕಾರ ಇದ್ದುದರಿಂದ ಆಯಿತು. ಒಂದು ವೇಳೆ ಸಮ್ಮಿಶ್ರ ಸರಕಾರ ಆಗಿದ್ದರೆ ಅದು ಆಗುತ್ತಿರಲಿಲ್ಲ. ಅವರ ಮೇಲೆ ಒತ್ತಡ ಇರುತ್ತಿತ್ತು. ವಾಜಪೇಯಿ ಸರಕಾರದಲ್ಲಿ ನಾನು ಸಚಿವೆ ಆಗಿ ಕೆಲಸ ಮಾಡಿದ್ದರಿಂದ ನನಗೆ ಗೊತ್ತಿದೆ. ಅಟಲ್ ಜೀ ಹಲವಾರು ಕೆಲಸ ಮಾಡಬೇಕು ಅಂದುಕೊಂಡಿದ್ದರು. ಆದರೆ ಸಮ್ಮಿಶ್ರ ಸರಕಾರವಾದ್ದರಿಂದ ಎಲ್ಲ ಮಾಡಲು ಆಗಲಿಲ್ಲ ಎಂದಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications