Breaking: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ
ಅಹಮದಾಬಾದ್,
ಸೆಪ್ಟೆಂಬರ್
11:
ಗುಜರಾತ್
ಮುಖ್ಯಮಂತ್ರಿ
ವಿಜಯ್
ರೂಪಾನಿ
ರಾಜೀನಾಮೆ
ನೀಡಿದ್ದಾರೆ.
ಶುಕ್ರವಾರ
ರಾತ್ರಿ
ಕೇಂದ್ರ
ಗೃಹ
ಸಚಿವ
ಅಮಿತ್
ಶಾ
ಗಾಂಧಿನಗರಕ್ಕೆ
ಬಂದಿದ್ದು,
ಅವರ
ನೇತೃತ್ವದಲ್ಲಿ
ಕೋರ್
ಕಮಿಟಿ
ಸಭೆ
ನಡೆದಿದೆ
ಎನ್ನಲಾಗಿದೆ.
ಸಭೆಯಲ್ಲಿ
ಮುಖ್ಯಮಂತ್ರಿ
ಬದಲಾವಣೆ
ಕುರಿತು
ನಿರ್ಧಾರ
ತೆಗೆದುಕೊಳ್ಳಲಾಗಿದೆ
ಎಂಬ
ಮಾಹಿತಿ
ಲಭ್ಯವಾಗಿದೆ.
ಇನ್ನು ರಾಜೀನಾಮೆ ನಂತರ ಹೇಳಿಕೆ ನೀಡಿರುವ ವಿಜಯ್ ರೂಪಾನಿ, ನಮ್ಮ ಪಕ್ಷದಲ್ಲಿ ಕಾಲಕ್ಕೆ ತಕ್ಕಂತೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂಸ್ಕೃತಿ ಇದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ . ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.
ಐದು ವರ್ಷ ಮುಖ್ಯಮಂತ್ರಿ ಆಗಿದ್ದ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ. ಮುಂದಿನ ವರ್ಷವೇ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಜಯ್ ರೂಪಾನಿ ನಡೆ ಆಶ್ಚರ್ಯ ಮೂಡಿಸಿದೆ. ಬಿ.ಎಲ್.ಸಂತೋಷ್ ಗುಜರಾತ್ನ ರಾಜಭವನದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿಜಯ್ ರೂಪಾನಿ ಅವರು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುವೆ. ಮುಂದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದ್ದಾರೆ.
2016ರ ಆಗಸ್ಟ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣವಚನ ಸ್ವೀಕರಿಸಿದ್ದರು. ಐದು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು, ಇದೀಗ ಅವರು ಸಿಎಂ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆನಂದಿ
ಬೇನ್
ಪಟೇಲ್
ವಿರುದ್ಧ
ಪಕ್ಷದಲ್ಲಿ
ಭಾರಿ
ಅಸಮಾಧಾನ
ವ್ಯಕ್ತವಾದ
ಹಿನ್ನೆಲೆಯಲ್ಲಿ
ಅಮಿತ್
ಶಾ
ಆಪ್ತರೆನಿಸಿಕೊಂಡಿದ್ದ
ವಿಜಯ್
ರೂಪಾನಿ
ಅವರನ್ನು
ಮುಖ್ಯಮಂತ್ರಿ
ಹುದ್ದೆಯಲ್ಲಿ
ಕೂರಿಸಲಾಗಿತ್ತು.
ಗುಜರಾತ್ನಲ್ಲಿನ
ಪ್ರಬಲ
ಸಮುದಾಯಕ್ಕೆ
ಸೇರಿರದಿದ್ದರೂ,
ರೂಪಾನಿಗೆ
ಅವಕಾಶ
ನೀಡಲಾಗಿತ್ತು.
ಹಾಗೆಯೇ
ಗುಜರಾತ್ನಲ್ಲಿದ್ದ
ಪಟೇಲ್
ಮೀಸಲಾತಿ
ಹೋರಾಟದಿಂದ
ಬಿಜೆಪಿಗೆ
ಆದ
ನಷ್ಟವನ್ನು
ತುಂಬುವ
ಜವಾಬ್ದಾರಿಯನ್ನು
ರೂಪಾನಿಗೆ
ವಹಿಸಲಾಗಿತ್ತು.
ಇವೆರಡನ್ನು ತಕ್ಕಮಟ್ಟಿಗೆ ರೂಪಾನಿ ನಿಭಾಯಿಸಿದ್ದರು.ಆದಾಗ್ಯೂ 2017ರ ವಿಧಾನಸಭಾ ಚುನಾವಣೆಯಲ್ಲಿ ರೂಪಾನಿಗೆ ಭಾರಿ ಪೈಪೋಟಿ ಎದುರಾಗಿತ್ತು. ನರೇಂದ್ರ ಮೋದಿ ಅವಧಿಯಲ್ಲಿ ದೊರಕುತ್ತಿದ್ದ ಸುಲಭದ ಗೆಲುವು 2017ರಲ್ಲಿ ಬಿಜೆಪಿಗೆ ದಕ್ಕಿರಲಿಲ್ಲ.
ಆದರೆ ಇದೀಗ ದಿಢೀರ್ ಬೆಳವಣಿಗೆಯಲ್ಲಿ ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಅಂದಹಾಗೆ ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ.
ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಿಸುತ್ತಿರುವುದು ಇದು ಮೂರನೇ ರಾಜ್ಯವಾಗಿದೆ. ಈ ಹಿಂದೆ ಉತ್ತರಾಖಂಡ ಹಾಗೂ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿಯನ್ನು ಬದಲಿಸಲಾಗಿತ್ತು.