ದಾವೂದನನ್ನು ಹಿಡಿಯೋಣ- ಅಮೆರಿಕಕ್ಕೆ ಭಾರತ ತಾಕೀತು
ನವದೆಹಲಿ, ಸೆ.10: ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇತ್ತೀಚೆಗೆ ಒಂದೇ ಸಮನೆ ಖಡಕ್ ನಿರ್ಧಾರಗಳನ್ನು 'ಕೈ'ಗೊಳ್ಳುತ್ತಿರುವ ಭಾರತ ಸರಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ.
ಅಮೆರಿಕದತ್ತ ಕೈಚಾಚಿರುವ ಕೇಂದ್ರ ಯುಪಿಎ ಸರಕಾರವು 'ಹೇಗಾದರೂ ಮಾಡಿ ಆ ಬ್ಲಡಿ ದಾವೂದ್ ಇಬ್ರಾಹಿಂನನ್ನು ಮಟ್ಟ ಹಾಕೋಣ. ಸ್ವಲ್ಪ ಸಹಾಯ ಮಾಡಿ' ಎಂದು ಕೋರಿದೆ.
'ದಶಕದ ಹಿಂದಿನ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ದೋಷಿ ದಾವೂದ್ ಇಬ್ರಾಹಿಂ ಉಪಟಳ ಬಹಳವಾಗಿದೆ. ದೇಶದಲ್ಲಿ ನಡೆಯುತ್ತಿರುವ ಅನೇಕ ಭಯೋತ್ಪಾದನೆ ಕೃತ್ಯಗಳ ತೆರೆಮರೆಯ ಸೂತ್ರಧಾರ ಅವನೇ ಎಂಬುದು ನಮಗೆ ಮನದಟ್ಟಾಗಿದೆ. ಅವನನ್ನು ಹಿಡಿಯಲು ನಮಗೆ ಸ್ವಲ್ಪ ನೆರವಾಗಿ' ಎಂದು ಅಮೆರಿಕ ಸರಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ಖುದ್ದು ಕೇಂದ್ರ ಸಚಿವ ಶುಶೀಲ್ ಕುಮಾರ್ ಶಿಂದೆ ಅವರೇ ತಿಳಿಸಿದ್ದಾರೆ.

'ಈ ಸಂಬಂಧ ಜಂಟಿ ಕಾರ್ಯಾಚಾರಣೆ ನಡೆಸೋಣ' ಎಂದು ಭಾರತ ಸರಕಾರವು ಅಮೆರಿಕದೆದುರು ಜಂಟಿ ಕಾರ್ಯಾಚರಣೆ ಯೋಜನೆಯೊಂದನ್ನು ಸಲ್ಲಿಸಿದೆ. ಈಗಾಗಲೇ ಭೂಗತ ಪಾತಕಿ ದಾವೂದ್ ವಿರುದ್ಧ red corner notice ಜಾರಿಯಲ್ಲಿದೆ. ನಮ್ಮ ಜಂಟಿ ಕಾರ್ಯಾಚರಣೆ ಯೋಜನೆಗೆ US Attorney General Eric Holder ಸಹ ಅಂಕಿತ ಹಾಕಿದ್ದಾರೆ' ಎಂದು ಸಚಿವ ಶಿಂದೆ ಸೋಮವಾರ ಸುದ್ದಿಗಾರರಿಗೆ ಹೇಳಿದರು.
'ಇತ್ತೀಚೆಗೆ ಕೆಲವು ಮೋಸ್ಟ್ ವಾಂಟೆಡ್ ಉಗ್ರರನ್ನು ಸದೆಬಡಿಸಿದ್ದೇವೆ. ಒಂದಿಬ್ಬರನ್ನು ನೇಣಿಗೂ ಹಾಕಿದ್ದೇವೆ. ಗಡಿ ಭಾಗದಲ್ಲೂ ಉಗ್ರರ ಉಪಟಳಕ್ಕೆ ತಕ್ಕ ಶಾಸ್ತಿಯಾಗಿದೆ. ಒಟ್ಟಾರೆಯಾಗಿ ಭಯೋತ್ಪಾದಕರ ವಿರುದ್ಧ ನಾವು ಮೇಲುಗೈ ಸಾಧಿಸಿದ್ದೇವೆ. ಈ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂಗೆ ಸಂಬಂಧಪಟ್ಟಂತೆ ಅಮೆರಿಕದ FBI ಜತೆ ಕೈಜೋಡಿಸಿದ್ದೇವೆ. ಶೀಘ್ರವೇ ಅವನನ್ನೂ ಸದೆಬಡಿಯುವುದು ನಿಶ್ಚಿತ' ಎಂದು ಸಚಿವ ಶಿಂದೆ ಆಶಾಭಾವ ವ್ಯಕ್ತಪಡಿಸಿದರು.
'ನಿಮಗೆ ಅತ್ಯಗತ್ಯವಾಗಿ ಬೇಕಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿಕೊಂಡಿದ್ದಾನೆ' ಎಂದು ಇತ್ತೀಚೆಗೆ NIA ಪೊಲೀಸರಿಗೆ ಸಿಕ್ಕಿಬಿದ್ದ ಭೂಗತ ಪಾತಕಿ, ಕರ್ನಾಟಕದವನೇ ಆದ ಯಾಸಿನ್ ಭಟ್ಕಳ್ ತಿಳಿಸಿದ್ದಾನೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications