ಮಣಿಪಾಲ್ ರೇಪ್: ವಿದ್ಯಾರ್ಥಿನಿ ಶಿಕ್ಷಣದ ಕಥೆ ಏನಾಯ್ತು?

ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯ ಶಿಕ್ಷಣ ಇಲ್ಲಿಗೇ ಕೊನೆಗೊಳ್ಳುತ್ತದಾ? ಜೀವಮಾನದ ಪೆಟ್ಟು ತಿಂದಿರುವ ವಿದ್ಯಾರ್ಥಿನಿ ಆ ಕಹಿ ಘಟನೆಯನ್ನು ಮರೆತು ಮತ್ತೆ ಮಣಿಪಾಲಕ್ಕೆ ಬದು ಓದು ಮುಂದುವರಿಸುವಳೇ? ಬಾಕಿ ಇರುವ ಇನ್ನೂ ಒಂದು ವರ್ಷ ವೈದ್ಯ ಕೋರ್ಸ್ ಮುಗಿಸಲು ಸಾಧ್ಯವೇ?
ಬೆನ್ನು ಹತ್ತಿ ಕಾಡುವ ಆ ಕಹಿ ಘಟನೆಯ ನೆನಪನ್ನು ಹೊತ್ತು ಮತ್ತದೇ ಕ್ಯಾಂಪಸಿಗೆ ವಾಪಸಾಗುವುದು, ತನಗೇನೂ ಆಗಿಲ್ಲ ಎಂಬಂತೆ ವರ್ತಿಸುವುದು, ಪ್ರಶ್ನಾರ್ಥಕವಾಗಿ ನೋಡುವ ಸಹಪಾಠಿಗಳನ್ನು ಎದುರಿಸುವುದು ಆಕೆಯ ಜಾಗದಲ್ಲಿರುವ ಯಾರಿಗೇ ಆಗಲಿ ಸಾಧ್ಯವಾ?
ಆಪ್ತ ಮೂಲಗಳ ಪ್ರಕಾರ ಬಾಧಿತ ವಿದ್ಯಾರ್ಥಿನಿ ಮಣಿಪಾಲದ ಸಹವಾಸವೇ ಸಾಕು ಎನ್ನುತ್ತಿದ್ದಾಳಂತೆ. ಕಲಿಕೆಯಲ್ಲಿ ಚುರುಕಾಗಿರುವ ಆಕೆ ತನ್ನ ಕೊನೆಯ ವರ್ಷದ ಎಂಬಿಬಿಎಸ್ ಶಿಕ್ಷಣವನ್ನು ಬೇರೆ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ಮುಂದುವರಿಸಲು ಬಯಸಿದ್ದಾಳಂತೆ.
ಸಹಪಾಠಿಗಳ ಅಚಲ ಬೆಂಬಲ: ಸಹಪಾಠಿ ವಿದ್ಯಾರ್ಥಿನಿಗಳ ಪ್ರಕಾರ, ಆಕೆಗೆ ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅತ್ಯಂತ ಭೀಭತ್ಸ ಘಟನೆ ನಡೆದ ಮಣಿಪಾಲದಲ್ಲಿ ಮತ್ತೆ ಶಿಕ್ಷಣ ಮುಂದುವರಿಸುವ ಇಚ್ಛೆ ಇಲ್ಲ ಸುತರಾಂ ಇಲ್ವಂತೆ.
ಆದರೆ ಆಕೆಯ ಸಹಪಾಠಿಗಳು ಮಾತ್ರ ಆಕೆಗೆ ಅಚಲ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಮಣಿಪಾಲಕ್ಕೆ ಬಂದು ಶಿಕ್ಷಣ ಮುಂದುವರಿಸಬೇಕು ಎಂದು ಆಕೆಯನ್ನು ಒತ್ತಾಯಿಸಿದ್ದಾರೆ. ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿ ಯಾರು ಎಂಬುದು ಹೊರಪ್ರಪಂಚಕ್ಕೆ ಗೊತ್ತಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ತಾವು ಜತೆಗಿದ್ದೇವೆ ಎಂದು ಸಹಪಾಠಿಗಳು ಆಕೆಗೆ ಧೈರ್ಯ ತುಂಬಿದ್ದಾರೆ. ಆದರೆ ಆಕೆ ಮುಂದೇನು ಮಾಡುತ್ತಾಳೆಂದು ಕಾದು ನೋಡಬೇಕಾಗಿದೆ.
ಜೂ. 20 ರಂದು ರಾತ್ರಿ ಮೂವರು ಆಟೋ ಚಾಲಕರು ಸದರಿ ವಿದ್ಯಾರ್ಥಿನಿಯನ್ನು KMC ಆವರಣದಲ್ಲಿ ಅಪಹರಣ ಮಾಡಿ, ಸಾಮೂಹಿಕ ಅತ್ಯಾಚಾರಕ್ಕೀಡುಮಾಡಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications