ಮಣಿಪಾಲ್ ರೇಪ್: ವಿದ್ಯಾರ್ಥಿನಿ ಶಿಕ್ಷಣದ ಕಥೆ ಏನಾಯ್ತು?

ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯ ಶಿಕ್ಷಣ ಇಲ್ಲಿಗೇ ಕೊನೆಗೊಳ್ಳುತ್ತದಾ? ಜೀವಮಾನದ ಪೆಟ್ಟು ತಿಂದಿರುವ ವಿದ್ಯಾರ್ಥಿನಿ ಆ ಕಹಿ ಘಟನೆಯನ್ನು ಮರೆತು ಮತ್ತೆ ಮಣಿಪಾಲಕ್ಕೆ ಬದು ಓದು ಮುಂದುವರಿಸುವಳೇ? ಬಾಕಿ ಇರುವ ಇನ್ನೂ ಒಂದು ವರ್ಷ ವೈದ್ಯ ಕೋರ್ಸ್ ಮುಗಿಸಲು ಸಾಧ್ಯವೇ?
ಬೆನ್ನು ಹತ್ತಿ ಕಾಡುವ ಆ ಕಹಿ ಘಟನೆಯ ನೆನಪನ್ನು ಹೊತ್ತು ಮತ್ತದೇ ಕ್ಯಾಂಪಸಿಗೆ ವಾಪಸಾಗುವುದು, ತನಗೇನೂ ಆಗಿಲ್ಲ ಎಂಬಂತೆ ವರ್ತಿಸುವುದು, ಪ್ರಶ್ನಾರ್ಥಕವಾಗಿ ನೋಡುವ ಸಹಪಾಠಿಗಳನ್ನು ಎದುರಿಸುವುದು ಆಕೆಯ ಜಾಗದಲ್ಲಿರುವ ಯಾರಿಗೇ ಆಗಲಿ ಸಾಧ್ಯವಾ?
ಆಪ್ತ ಮೂಲಗಳ ಪ್ರಕಾರ ಬಾಧಿತ ವಿದ್ಯಾರ್ಥಿನಿ ಮಣಿಪಾಲದ ಸಹವಾಸವೇ ಸಾಕು ಎನ್ನುತ್ತಿದ್ದಾಳಂತೆ. ಕಲಿಕೆಯಲ್ಲಿ ಚುರುಕಾಗಿರುವ ಆಕೆ ತನ್ನ ಕೊನೆಯ ವರ್ಷದ ಎಂಬಿಬಿಎಸ್ ಶಿಕ್ಷಣವನ್ನು ಬೇರೆ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ಮುಂದುವರಿಸಲು ಬಯಸಿದ್ದಾಳಂತೆ.
ಸಹಪಾಠಿಗಳ ಅಚಲ ಬೆಂಬಲ: ಸಹಪಾಠಿ ವಿದ್ಯಾರ್ಥಿನಿಗಳ ಪ್ರಕಾರ, ಆಕೆಗೆ ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅತ್ಯಂತ ಭೀಭತ್ಸ ಘಟನೆ ನಡೆದ ಮಣಿಪಾಲದಲ್ಲಿ ಮತ್ತೆ ಶಿಕ್ಷಣ ಮುಂದುವರಿಸುವ ಇಚ್ಛೆ ಇಲ್ಲ ಸುತರಾಂ ಇಲ್ವಂತೆ.
ಆದರೆ ಆಕೆಯ ಸಹಪಾಠಿಗಳು ಮಾತ್ರ ಆಕೆಗೆ ಅಚಲ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಮಣಿಪಾಲಕ್ಕೆ ಬಂದು ಶಿಕ್ಷಣ ಮುಂದುವರಿಸಬೇಕು ಎಂದು ಆಕೆಯನ್ನು ಒತ್ತಾಯಿಸಿದ್ದಾರೆ. ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿ ಯಾರು ಎಂಬುದು ಹೊರಪ್ರಪಂಚಕ್ಕೆ ಗೊತ್ತಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ತಾವು ಜತೆಗಿದ್ದೇವೆ ಎಂದು ಸಹಪಾಠಿಗಳು ಆಕೆಗೆ ಧೈರ್ಯ ತುಂಬಿದ್ದಾರೆ. ಆದರೆ ಆಕೆ ಮುಂದೇನು ಮಾಡುತ್ತಾಳೆಂದು ಕಾದು ನೋಡಬೇಕಾಗಿದೆ.
ಜೂ. 20 ರಂದು ರಾತ್ರಿ ಮೂವರು ಆಟೋ ಚಾಲಕರು ಸದರಿ ವಿದ್ಯಾರ್ಥಿನಿಯನ್ನು KMC ಆವರಣದಲ್ಲಿ ಅಪಹರಣ ಮಾಡಿ, ಸಾಮೂಹಿಕ ಅತ್ಯಾಚಾರಕ್ಕೀಡುಮಾಡಿದ್ದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications