ಚಿತ್ರಗಳಲ್ಲಿ: ಈ ಸರೀಸೃಪ, ಎರಡು ತಲೆ ನಾಗರವಲ್ಲ
ಲಂಡನ್, ಜೂ.27:ಥೆಲ್ಮಾ ಹಾಗೂ ಲೂಸಿ ಎಂದು ಕರೆಯಲ್ಪಡುವ ಒಂದೇ ದೇಹ ಎರಡು ತಲೆ ಇರುವ ಟೆಕ್ಸಾಸ್ ನ ಆಮೆ ಇದಾಗಿದೆ. ಸ್ಯಾನ್ ಅಂಟಾನಿಯೋ ಮೃಗಾಲಾಯದಲ್ಲಿರುವ ಈ ವಿಶಿಷ್ಟ ಆಮೆ ಅವರ ಪ್ರಕಾರ ಜೂ.18 ಈ ಆಮೆ ಹುಟ್ಟಿದ ದಿನವಂತೆ.
ಜೂನ್ ತಿಂಗಳಲ್ಲಿ ಇದೇ ರೀತಿಯ ಅನೇಕ ಆಮೆಗಳನ್ನು ಟೆಕ್ಸಾಸ್ ಮೃಗಾಲಯ ಹೊಂದಿದೆಯಂತೆ. ಕಳೆದ ಎರಡು ದಿನಗಳಿಂದ ಈ ಆಮೆ ಫ್ರೆಡಿಕ್ ಆಕ್ವೇರಿಯಂನ ಆಕರ್ಷಣೆಯಾಗಿದೆ.
ಈ ಬಾರಿ ವಿಂಬಲ್ಡನ್ ಯಾಕೋ ಆರಂಭದಲ್ಲೇ ಡಲ್ ಹೊಡೆಯಲು ಶುರು ಮಾಡಿದೆ. ಆವೆಮಣ್ಣಿನ ರಾಜ ರಫೆಲ್ ನಡಾಲ್ ನಿರ್ಗಮನವಾಗಿದ್ದೇ ತಡ, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ ಸೇರಿದಂತೆ ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪೋರ್ಚು ಗಲ್ ನ ಮಿಚೆಲ್ ಲಾರ್ಚರ್ ಡಿ ಬ್ರಿಟೋ ಅವರ ವಿರುದ್ಧ ರಷ್ಯಾದ ಮರಿಯಾ ಶರಪೋವಾ ಅವರು ಶರಣಾಗಿದ್ದಾರೆ. ಪಂದ್ಯದ ನಡುವೆ ಗಾಯಗೊಂಡು ಮಲಗಿಬಿಟ್ಟ ಶರಪೋವಾ ಕಂಡು ಅಭಿಮಾನಿಗಳು ದುಃಖಿಸಿದರು. ಸ್ವಿಸ್ ವೀರ ರೋಜರ್ ಫೆಡರರ್ ಅವರನ್ನು ಉಕ್ರೇನಿನ ಸರ್ಗೆ ಸ್ಟಖೊವಿಸ್ಕಿ ಅವರು ಅಮೋಘವಾಗಿ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಉಳಿದಂತೆ, ಉತ್ತರಾಖಂಡ್ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಆಂಧ್ರಪ್ರದೇಶದ ಜನಪ್ರತಿನಿಧಿಗಳ ಕಿತ್ತಾಟದ ದೃಶ್ಯ, ಕಾಶ್ಮೀರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಸುರಂಗದಲ್ಲಿ ಸುತ್ತಾಡಿದ್ದು, ಕಾಮಾಕ್ಯಾ ದೇಗುಲದಲ್ಲಿ ಭಕ್ತರ ಮೇಳ, ಎರಡು ತಲೆ ಆಮೆ, ಜಯಲಲಿತಾ ಅವರಿಂದ ವಿದ್ಯಾರ್ಥಿನಿಯರಿಗೆ ಗಿಫ್ಟ್ ಸೇರಿದಂತೆ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರಸುರಳಿಯಲ್ಲಿದೆ.ತಪ್ಪದೇ ನೋಡಿ

ಎರಡು ತಲೆ ನಾಗರವಲ್ಲ
ಥೆಲ್ಮಾ ಹಾಗೂ ಲೂಸಿ ಎಂದು ಕರೆಯಲ್ಪಡುವ ಒಂದೇ ದೇಹ ಎರಡು ತಲೆ ಇರುವ ಟೆಕ್ಸಾಸ್ ನ ಆಮೆ ಇದಾಗಿದೆ.

ವಿಂಬಲ್ಡನ್ ಚಿತ್ರಗಳು
ಪೋರ್ಚು ಗಲ್ ನ ಮಿಚೆಲ್ ಲಾರ್ಚರ್ ಡಿ ಬ್ರಿಟೋ ಅವರ ವಿರುದ್ಧ ರಷ್ಯಾದ ಮರಿಯಾ ಶರಪೋವಾ ಅವರು ಶರಣಾಗಿದ್ದಾರೆ. ಪಂದ್ಯದ ನಡುವೆ ಗಾಯಗೊಂಡು ಮಲಗಿಬಿಟ್ಟ ಶರಪೋವಾ

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಮೊದಲ ಸುತ್ತಿನಲ್ಲಿ ನಡಾಲ್ ನಿರ್ಗಮನ, ಎರಡನೇ ಸುತ್ತಿನಲ್ಲಿ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಅವರು ಉಕ್ರೇನಿನ ಎದುರಾಳಿ ಸ್ಟಖೊವಸ್ಕಿ ವಿರುದ್ಧ ಸೋತ ನಂತರ ಕೈ ಬೀಸಿದ್ದು ಹೀಗೆ

ವಿಂಬಲ್ಡನ್ ಟೆನಿಸ್
ಶರಪೋವಾ ಸೋಲಿಸಿದ ನಂತರ ಅಚ್ಚರಿಯ ಲುಕ್ ನೀಡಿದ ಪೋರ್ಚು ಗಲ್ ನ ಮಿಚೆಲ್ ಲಾರ್ಚರ್ ಡಿ ಬ್ರಿಟೋ

ದೈತ್ಯ ಸಂಹಾರಿ
ಪ್ರಶಸ್ತಿ ಗೆಲ್ಲುವ ಫೇವರೀಟ್ ಎನಿಸಿದ್ದ ರೋಜರ್ ಫೆಡರರ್ ಸೋಲಿಸಿದ ಉಕ್ರೇನಿನ ಸರ್ಗೆ ಸ್ಟಖೊವಸ್ಕಿ

ಇಂಗ್ಲೆಂಡ್ ಕನಸು
ಇಂಗ್ಲೆಂಡಿನ ಆಂಡೆ ಮರೆ ಅವರ ವಿಂಬಲ್ಡನ್ ಗೆಲ್ಲುವ ಕನಸು ಮತ್ತೆ ಚಿಗುರೊಡೆದಿದೆ

ಕಾಶ್ಮೀರದಲ್ಲಿ ಸೋನಿಯಾ
ಕಾಶ್ಮೀರದಲ್ಲಿ ಪಿರ್ ಪಂಜಲ್ ಪರ್ವತ ಶ್ರೇಣಿಯಲ್ಲಿ ಬನಿಹಾಲ್-ಖಾಜಿಗುಂಡ್ ನಡುವೆ ಬುಧವಾರ ಆರಂಭಗೊಂಡ ನೂತನ ರೈಲಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಶಾಲಾ ಮಕ್ಕಳೊಂದಿಗೆ ಪ್ರಯಾಣಿಸಿದರು.
18ಕಿ.ಮೀ. ಅಂತರದ ಈ ರೈಲ್ವೆ ಮಾರ್ಗ ಮಧ್ಯೆದಲ್ಲಿ 11ಕಿ.ಮೀ. ಸುರಂಗ ಮಾರ್ಗವನ್ನು ಒಳಗೊಂಡಿದೆ. ಪ್ರಯಾಣದ ಸಮಯದಲ್ಲಿ ಸಿಂಗ್ ಮತ್ತು ಸೋನಿಯಾ ಮಕ್ಕಳೊಂದಿಗೆ ಸಂವಾದ ನಡೆಸಿದರು. 8 ಕೋಚ್ ಹೊಂದಿರುವ ನೂತನ ರೈಲಿನಲ್ಲಿ ಶಾಲಾ ಮಕ್ಕಳು, ಗಣ್ಯರೊಂದಿಗೆ ತಮ್ಮ ಪ್ರಥಮ ರೈಲ್ವೆ ಸಂಚಾರದ ಅನುಭವ ಪಡೆದರು.
ಅಮ್ಮ ನೀಡಿದ ಕೊಡುಗೆ
ಇದು ಅಮ್ಮ ನೀಡಿದ ಕೊಡುಗೆ. ಸಿಎಂ ಜಯಲಲಿತಾ ಅವರೊಂದಿಗೆ ಫಲಾನುಭವಿ ವಿದ್ಯಾರ್ಥಿನಿಯರೊಂದಿಗೆ

ಕಾಮಾಕ್ಯ ಉತ್ಸವ
ಗುವಾಹಟಿ: ಕಾಮಾಕ್ಯ ದೇಗುಲ ಮತ್ತೆ ಭಕ್ತರಿಗೆ ತೆರೆದಿದೆ. ಅಂಬುಬಚಿ ಮೇಳದ ದೃಶ್ಯ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications