ಉಗ್ರರ ದಾಳಿಗೆ ನಂಗಾ ಪರ್ವತ ಟ್ರೆಕ್ಕರ್ಸ್ ಬಲಿ
ಪಾಕಿಸ್ತಾನ, ಜೂ.23: ಉತ್ತರ ಪಾಕಿಸ್ತಾನದ ಸುಂದರ ನಂಗಾ ಪರ್ವತರೋಹಣಕ್ಕಾಗಿ ವಿವಿಧ ದೇಶಗಳಿಂದ ಬಂದಿದ್ದ ಚಾರಣ ಪ್ರಿಯರನ್ನು ಸಶಸ್ತ್ರಧಾರಿಗಳು ಅಮಾನುಷವಾಗಿ ಕೊಂದಿರುವ ಘಟನೆ ನಡೆದಿದೆ.
ಚೀನಾ, ಉಕ್ರೇನ್ ಹಾಗೂ ರಷ್ಯಾ ಮೂಲದ ಸುಮಾರು 10 ಜನರ ಟ್ರೆಕ್ಕಿಂಗ್ ತಂಡದ ಸದಸ್ಯರು ಉತ್ತರ ಪಾಕಿಸ್ತಾನದ ಹೋಟೆಲ್ ವೊಂದರಲ್ಲಿ ತಂಗಿದ್ದರು. ಉಗ್ರರು ಹಠಾತ್ ದಾಳಿ ನಡೆಸಿ ಎಲ್ಲರನ್ನೂ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ವಿಶ್ವದ 9ನೇ ಅತಿ ಎತ್ತರದ ಪರ್ವತವಾದ ನಂಗಾ ಪರ್ವತದ ಬೇಸ್ ಕ್ಯಾಂಪ್ ಬಳಿ ಇರುವ ಗಿಲ್ ಜಿತ್ ಬಾಲ್ತಿಸ್ತಾನದ ಹೋಟೆಲ್ ನಲ್ಲಿ ಪರ್ವತಾರೋಹಣಕ್ಕೆ ಹೊರಟ್ಟಿದ್ದ ಉತ್ಸಾಹಿಗಳು ಬೀಡುಬಿಟ್ಟಿದ್ದರು. ಕಳೆದ ರಾತ್ರಿ ಅನಾಮಿಕ ಸಶಸ್ತ್ರಧಾರಿಗಳ ಗುಂಪೊಂದು ದಾಳಿ ನಡೆಸಿ ಹಠಾತ್ ಆಗಿ ಗುಂಡಿನ ಸುರಿಮಳೆಗೈದಿದ್ದಾರೆ.
ಉತ್ತರ ಪಾಕಿಸ್ತಾನದ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಲಿ ಶೇರ್ ಅವರು ಸುದ್ದಿಗಾರರಿಗೆ ವಿವರ ನೀಡುತ್ತಾ, ಹೋಟೆಲ್ ನಲ್ಲಿದ್ದ 10 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ. ಎಲ್ಲರೂ ನಂಗಾ ಪರ್ವತ್ ಹತ್ತಲು ಬಂದಿದ್ದರು. ಗುಂಡು ಹಾರಿಸಿದ ತಂಡದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇದು ಉಗ್ರರ ಕೃತ್ಯ ಇರಬಹುದು ಎಂದಿದ್ದಾರೆ.
5 ಜನ ಉಕ್ರೇನ್ ದೇಶದವರು, 3 ಚೀನಿಯವರು, ಒಬ್ಬ ರಷ್ಯನ್ ಹಾಗೂ ಪಾಕಿಸ್ತಾನಿ ಗೈಡ್ ಎಲ್ಲರೂ ದುರಂತ ಸಾವನ್ನಪ್ಪಿದ್ದಾರೆ. ಗಿಲ್ ಗಿತ್ ಬಾಲ್ತಿಸ್ತಾನ್ಪ್ರದೇಶದಲ್ಲಿ ಈ ಹಿಂದೆ ಕೂಡಾ ಪರ್ವತಾರೋಹಣಕ್ಕೆ ಅನೇಕ ತಂಡಗಳು ಬಂದು ಹೋಗಿವೆ. ಆದರೆ, ಯಾವುದೇ ತೊಂದರೆಯಾಗಿರಲಿಲ್ಲ. ವಿದೇಶಿ ಪ್ರವಾಸಿಗರ ಸುರಕ್ಷತೆ ಹಾಗೂ ಪಾಕಿಸ್ತಾನದಲ್ಲಿ ಟ್ರೆಕ್ಕಿಂಗ್ ಮಾಡಬಯಸುವ ಸಾಹಸಿಗಳಿಗೆ ಈ ಘಟನೆ ಎಚ್ಚರಿಕೆ ಗಂಟೆಯಾಗಿದೆ.
ನಂಗಾ ಪರ್ಬತ್ : ಬೆತ್ತಲೆ ಪರ್ವತ(naked mountain) ವಿಶ್ವದ ಅತಿ ಎತ್ತರದ 9ನೇ ಪರ್ವತವಾಗಿದೆ. ಹಿಮಾಲಯ ಪರ್ವತಶ್ರೇಣಿಯ ಪಶ್ಚಿಮ ತುದಿಯಲ್ಲಿ ನಂಗಾ ಪರ್ವತವನ್ನು ಕಾಣಬಹುದು. ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಬಾಲ್ತಿಸ್ತಾನ್, ಗಿಲ್ಜಿತ್ ಬಾಲ್ತಿಸ್ಥಾನ್ ಪ್ರದೇಶದಲ್ಲಿ ಈ ಪರ್ವತವಿದೆ.
ಬೇಸ್ ಕ್ಯಾಂಪ್ ಸಮುದ್ರ ಮಟ್ಟದಿಂದ 4000 ಮೀ(ಸುಮಾರು 13 ಸಾವಿರ ಅಡಿ) ಎತ್ತರದಲ್ಲಿದೆ. ನಂಗಾ ಪರ್ವತ ಸಮ್ಮಿಟ್ ಎತ್ತರ ಸಮುದ್ರ ಮಟ್ಟದಿಂದ 8,126 ಮೀ(26,660 ಅಡಿ) ಇದೆ. 'ಕಿಲ್ಲರ್ ಮೌಂಟನ್' ಎಂದೇ ಕರೆಯಲ್ಪಡುವ ಕಾರಕೊರಮ್ ವ್ಯಾಲಿಯ ನಂಗಾ ಪರ್ವತ ಹತ್ತುವುದು ಟ್ರೆಕರ್ಸ್ ಗಳಿಗೆ ಹಬ್ಬ ಹಾಗೂ ದೊಡ್ಡ ಸವಾಲಾಗಿದೆ. ಸಿಂಧು ನದಿ ಕಣಿವೆಯ ದಕ್ಷಿಣ ಭಾಗದ ಸುಂದರ ಪಾರ್ಶ್ವನೋಟ ಕಾಣಬೇಕಾದರೆ ನಂಗಾ ಪರ್ವತ ಹತ್ತಿ ಇಣುಕಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ













Click it and Unblock the Notifications