ಹೆಬ್ಬಾಳ ರಸ್ತೆ ಗುಂಡಿಗೆ ಯುವ ಟೆಕ್ಕಿ ದಾರುಣ ಬಲಿ

road-accident-pothole-kills-techie-neelakantan-hebbal
ಬೆಂಗಳೂರು, ಜೂನ್ 17: ಗುಂಡಿಗಳಿಂದ ತುಂಬಿದ್ದ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿರುವಾಗ ಗುಂಡಿಗೆ ಬೀಳುವುದನ್ನು ತಪ್ಪಿಸುವ ಹರಸಾಹಸದಲ್ಲಿ ಟ್ರಕ್ ಕೆಳಗೆ ಬಿದ್ದು ರಾಜಧಾನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ದಾರುಣ ಸಾವಿಗೀಡಾಗಿದ್ದಾರೆ.

Electronic Cityಯಲ್ಲಿರುವ Tech Star ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ 27 ವರ್ಷದ ನೀಲಕಂಠನ್ ಮೃತ ದುರ್ದೈವಿ. ಇವರು ಮುಂದಿನ ತಿಂಗಳಿಂದ ಕಂಪನಿಯ ಪರವಾಗಿ ಮಲೇಷ್ಯಾದಲ್ಲಿ ಕೆಲಸ ನಿರ್ವಹಿಸಬೇಕಿತ್ತು. ಆದರೆ ಅಷ್ಟೊರೊಳಗೆ ಯಮರಾಯ ಅವರನ್ನು ಅಕಾಲಿಕವಾಗಿ ಕರೆದೊಯ್ದಿದ್ದಾರೆ.

ಮಲೇಷ್ಯಾಗೆ ಹೋಗಬೇಕೆಂದು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ತೆರಳಿ ಅಲ್ಲೊಂದೊಷ್ಟು ಏರ್ಪಾಟುಗಳನ್ನು ಮಾಡಿಕೊಂಡು ವಾಪಸಾಗುತ್ತಿದ್ದಾಗ ನೀಲಕಂಠನ್ ಅವರು ಹೆಬ್ಬಾಳ ವ್ಯಾಪ್ತಿಯ ದೊಡ್ಡ ಬೊಮ್ಮಸಂದ್ರದಲ್ಲಿ ಶನಿವಾರ ಸಂಜೆ ಅಸುನೀಗಿದ್ದಾರೆ.

ಹೀರೋ ಹೊಂಡಾದಲ್ಲಿ ಕಸಿನ್ ಮನೆಗೆಂದು ಹೊರಟಿದ್ದ ನೀಲಕಂಠನ್ ಕೃಷ್ಣ ದೇವಸ್ಥಾನವಿರುವ ಗುಂಡಿಗಳ ರಸ್ತೆಯಲ್ಲಿ ಕ್ಯಾಂಟರ್ ಟ್ರಕ್ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾಗುತ್ತಿದ್ದಂತೆ ಟ್ರಕ್ ಡ್ರೈವರ್ ಪರಾರಿಯಾಗಿದ್ದಾನೆ.

ನೀಲಕಂಠನ್ ಮೂಲತಃ ತಮಿಳುನಾಡಿನ ರಾಣಿಪೇಟೆಯವರು. ಅವಿವಾಹಿತ ನೀಲಕಂಠನ್, ಇನ್ನೇನು ತಮ್ಮ ಕಸಿನ್ ಮನೆ ಅನತಿ ದೂರದಲ್ಲಿದೆ ಎನ್ನುವಾಗ ಸಾವಿಗೆ ತುತ್ತಾಗಿದ್ದಾರೆ. ಮೃತರ ದೇಹವನ್ನು ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದ್ದು, ಕುಂಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ಹೆಬ್ಬಾಳ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+