ಹಳ್ಳಹಿಡಿದ ಕೇಸು; ಯಾವುದೇ ಕ್ಷಣ ಶ್ರೀಶಾಂತ್ ಬಿಡುಗಡೆ

ಆದರೆ ಒಂದೇ ವಾರದಲ್ಲಿ ಆ ಕೇಸಿಗೆ ತೀವ್ರ ಹಿನ್ನಡೆಯುಂಟಾಗಿದೆ. ಅಷ್ಟೇ ಅಲ್ಲ MCOCAದಡಿ ಕೇಸು ದಾಖಲಿಸಿದ ಪೊಲೀಸರನ್ನು ದಕ್ಷಿಣ ದಿಲ್ಲಿಯ ಸಾಕೇತ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಗಳಾದ ಎಸ್ ಶ್ರೀಶಾಂತ್ ಮತ್ತು ಅಂಕಿತ್ ಚವಾಣ್ ಸೇರಿದಂತೆ 18 ಮಂದಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿಗಳಿಗೆ ಪಾಸ್ಪೋರ್ಟ್ ಒಪ್ಪಿಸಲು ಸೂಚಿಸಿರುವ ನ್ಯಾಯಾಲಯ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಜಾಮೀನು ದೊರೆತವರಲ್ಲಿ ಬುಕ್ಕಿ ಮತ್ತು ಶ್ರೀಶಾಂತ್ ಗೆಳೆಯ ಜಿಜು ಜನಾರ್ದನ್ ಕೂಡ ಸೇರಿದ್ದಾರೆ. ಸ್ಪಾಟ್ ಫಿಕ್ಸಿಂಗ್ನಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಆಟಗಾರರನ್ನು ಇತ್ತೀಚೆಗೆ ತಿಹಾರ್ ಜೈಲಿಗೆ ವರ್ಗಾಯಿಸಲಾಗಿತ್ತು.
ಶ್ರೀಶಾಂತ್ ಮತ್ತವನ ಗೆಳೆಯರು ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆಂದು ಅವರ ವಿರುದ್ಧ ಮೋಕಾ ಕಾಯಿದೆಯಡಿ ಕೇಸು ದಾಖಲಿಸಿರುವುದು ಸರ್ವತಾ ಸಾಧುವಲ್ಲ. ಅಸಲಿಗೆ ಮೋಕಾ ಜಾರಿಗೆ ಅವರ ವಿರುದ್ಧ ಬಲವಾದ ಸಾಕ್ಷ್ಯಗಳೇ ಇಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹಾಗಾಗಿ ಅವರನ್ನು ತಕ್ಷಣ ಬಿಟ್ಟುಕಳಿಸಿ ಎಂದು ಘನ ನ್ಯಾಯಾಲಯ ದಿಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡಿದೆ. ಇದರಿಂದ ಕಪಾಳಮೋಕ್ಷ ಕಳಂಕಿತ ಶ್ರೀಶಾಂತ್ ಆನಂದತುಂದಿಲಿತನಾಗಿರುವುದರಲ್ಲಿ ಅನುಮಾನವಿಲ್ಲ.
ಅಸಲಿಗೆ ಕೇಸಿನಲ್ಲಿ ಫಿಟ್ ಆಗಿದ್ದ ಆಟಗಾರರ ಮನಃಸ್ಥಿತಿ ಎಂತಹುದೋ ನೋಡಿ. ಶ್ರೀಶಾಂತ ಆರಂಭದಲ್ಲೇ ಪೊಲೀಸರೆದುರು ತನ್ನಿಂದ ತಪ್ಪಾಯ್ತು ಎಂದು ಅಲವತ್ತುಕೊಂಡು, ಅಳುಮುಂಜಿಯಾಗಿದ್ದ. ಇನ್ನು ಮತ್ತೂಬ್ಬ ಆಟಗಾರ ಅಜಿತ್ ಚಾಂಡಿಲ ತನ್ನ ಕಥೆ ಮುಗಿದೇ ಹೋಯ್ತು ಎಂದು ಕೊಂಡು ಅಸಲಿಗೆ ಜಾಮೀನಿಗೇ ಅರ್ಜಿ ಸಲ್ಲಿಸಿಲ್ಲ.
ಪರಿಸ್ಥಿತಿ ಹೀಗಿರುವಾಗ ಮಹಾಮಹಿಮ ವಕೀಲವೃಂದ ಆಟಗಾರರ ನೆರವಿಗೆ ಧಾವಿಸಿದೆ. ವಕೀಲಿಕೆಯ ತಮ್ಮ ಅಷ್ಟೂ ಕಲಿಕೆಯನ್ನು ಆಟಗಾರರ ರಕ್ಷಣೆಗೆ ಧಾರೆಯೆರೆದಿದೆ. ಅಸಲಿಗೆ ಪ್ರಕರಣವು ಕನಿಷ್ಠ 420 ಕೇಸು ದಾಖಲಿಸಲೂ ಅರ್ಹವಲ್ಲ ಎಂದು ಘರ್ಜಿಸಿದ್ದಾರೆ. ತತ್ಫಲವಾಗಿ Team Sreesanth ಮೋಕಾದ ಬೀಸೋ ದೊಣ್ಣೆಯಿಂದ ಬಚಾವಾಗಿದೆ.
ಅಸಲಿಗೆ ಕಳ್ಳಾಟದ ಧೂರ್ತರ ವಿರುದ್ಧ ಪೊಲೀಸರು ಮೋಕಾ ಕಾಯಿದೆಯನ್ನು ಜಾರಿಗೆ ಗೊಳಿಸಿರುವುದೇ ಹಾಸ್ಯಾಸ್ಪದವಾಗಿದೆ. ಅವರ ವಿರುದ್ಧ ಮೋಕಾ ಅನ್ವಯಗೊಳಿಸಿದಾಗಲೇ ಖಚಿತವಾಗಿತ್ತು - ಸರಿಯಾ ದಸಾಕ್ಷ್ಯಧಾರವಿಲ್ಲದೆ ಆಟಗಾರರನ್ನು ಕೇಸಿನಲ್ಲಿ ಫಿಟ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು,
ಮತ್ತು ಪೊಲೀಸರು ಮಾಡಿರುವ ಈ ಎಡವಟ್ಟಿನಿಂದಲೇ ಆಟಗಾರರು ಬಚಾವಾಗುತ್ತಾರೆ ಎಂಬುದು ವಿಧಿತವಾಗಿತ್ತು ಎಂದು ಹಿರಿಯ ಕಾನೂನು ತಜ್ಞರೊಬ್ಬರು ವಿಶ್ಲೇಷಿಸಿದ್ದಾರೆ. ಆದ್ದರಿಂದ ಸದ್ಯಕ್ಕೆ, Wish you speedy freedom Sreeshanth ಅನ್ನದೆ ವಿಧಿಯಿಲ್ಲ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications