ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

By Mahesh
|
Google Oneindia Kannada News

ಬೆಂಗಳೂರು, ಮೇ.3: ಪಾಕಿಸ್ತಾನದಲ್ಲಿ ಸಹ ಕೈದಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್‌ನ ಭಿಕಿವಿಂಡ್ ಗ್ರಾಮದಲ್ಲಿ ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಂಜಾಬಿನ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಸರ್ಕಾರಿ ಗೌರವಗಳೊಂದಿಗೆ ಸರಬ್ಜಿತ್ ಸಿಂಗ್ ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಸರ್ಕಾರ ಸರಬ್ಜಿತ್ ಸಿಂಗ್ ಅವರ ಕುಟುಂಬಕ್ಕೆ ಪ್ರಧಾನಿ ಪುನರ್ವಸತಿ ನಿಧಿಯಿಂದ 25 ಲಕ್ಷ ರು. ಪರಿಹಾರ ಮೊತ್ತ ಪ್ರಧಾನಿ ಮನ್‌ಮೋಹನ್ ಸಿಂಗ್ ಘೋಷಿಸಿದ್ದರು. ಅಂತೆಯೇ ಪಂಜಾಬ್ ಸರ್ಕಾರ ಕೂಡ ಸರಬ್ಜಿತ್‌ರ ಕುಟುಂಬ ವರ್ಗಕ್ಕೆ 1 ಕೋಟಿ ರು. ನೀಡುವುದಾಗಿ ಘೋಷಿಸಿದೆ. ಪಾಕಿಸ್ತಾನದ ಜೈಲಿನಲ್ಲಿ ಸಹ ಕೈದಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ ಸರಬ್ಜಿತ್ ಸಿಂಗ್, ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಭಾರತೀಯ ಕೈದಿ ಸರಬ್ಜಿತ್ ಸಿಂಗ್‌ರ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಲಾಹೋರ್‌ನಿಂದ ಅಮೃತಸರಕ್ಕೆ ತರಲಾಗಿತ್ತು.

ಕರ್ನಾಟಕ ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರ ಕಾರ್ಯ ಶುಕ್ರವಾರ(ಮೇ.3) ಮುಕ್ತಾಯ ಕಂಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಂತರ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಚುನಾವಣಾ ಪ್ರಚಾರಕ್ಕೆ ಬಂದು ಬ್ರಾಹ್ಮಣ ಮಹಾಸಭಾ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದಾರೆ. ಕ್ರಿಕೆಟರ್ಸ್ ಮೋಜು, ಸರಬ್ಜಿತ್ ಕುಟುಂಬದ ಕಂಬನಿ ಜೊತೆಗೆ ಇನ್ನಷ್ಟು ಚಿತ್ರಗಳನ್ನು ಮುಂದೆ ನೋಡಿ..

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಹುಬ್ಬಳ್ಳಿ: ಕರ್ನಾಟಕ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಬಹಿರಂಗ ಪ್ರಚಾರದ ಅಂತ್ಯದಲ್ಲಿ ಹಿಂತಿರುಗಿ ನೋಡಿದ್ದು ಹೀಗೆ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚುನಾವಣಾ ಪ್ರಚಾರಕ್ಕೆ ಬಂದಿದ್ದ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಮುಂಬೈ ಪುಣೆ ನಡುವಿನ ಖಂಡಲಾ ಘಾಟ್ ನಲ್ಲಿ ಟ್ರಾಫಿಕ್ ಜಾಮ್ PTI Photo by Shashank Parade

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಭಿಖಿವಿಂಡ್ ಗ್ರಾಮದಲಿ ಸರಬ್ಜಿತ್ ಸಿಂಗ್ ಪಾರ್ಥೀವ ಶರೀರಕ್ಕೆ ಅವರ ಸೋದರಿ ದಲ್ಬೀರ್ ಕೌರ್ ಅವರು ಅಗ್ನಿಸ್ಪರ್ಶ ಅಮಡಿದರು.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಭಿಖಿವಿಂಡ್ ಗ್ರಾಮದಲಿ ಸರಬ್ಜಿತ್ ಸಿಂಗ್ ಪಾರ್ಥೀವ ಶರೀರಕ್ಕೆ ಅವರ ಸೋದರಿ ದಲ್ಬೀರ್ ಕೌರ್ ಅವರು ಅಗ್ನಿಸ್ಪರ್ಶ ಅಮಡಿದರು.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಗಾಯಕ ಹನ್ಸ್ ರಾಜ್ ಹನ್ಸ್ ಸೇರಿ ಹಲವಾರು ಗಣ್ಯರು ಸರಬ್ಜಿತ್ ಸಿಂಗ್ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಸರಬ್ಜಿತ್ ಸಿಂಗ್ ಅವರ ಅಂತ್ಯಸಂಸ್ಕಾರ ವಿಧಿವಿಧಾನವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿಕ್ಕಮಗಳೂರು:ಮತದಾನದ ಬಗ್ಗೆ ಜನ ಜಾಗೃತಿ ಮೂಡಿಸಲು ಮಾನವ ಸರಪಳಿ ರೂಪಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಸರಬ್ಜಿತ್ ಸಾವಿನ ವಿಷಯದಲ್ಲಿ ಯುಪಿಎ ಸರ್ಕಾರ ಹಾಗೂ ಪಾಕಿಸ್ತಾನ ನಡೆದುಕೊಂಡ ರೀತಿಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಪುಣೆ ವಾರಿಯರ್ಸ್ ವಿರುದ್ಧ ಆರ್ ಸಿಬಿ ಗೆಲುವಿನ ನಂತರ ಪುಣೆ ಆಟಗಾರರನ್ನು ತಬ್ಬಿಕೊಂಡ ಕ್ರಿಸ್ ಗೇಲ್

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಇಶ್ಕ್ ಜಾದೆ ಚಿತ್ರದ ಅಭಿನಯಕ್ಕಾಗಿ ವಿಶೇಷ ಪುರಸ್ಕಾರ ಪಡೆದ ನಟಿ ಪರಿಣಿತಿ ಛೋಪ್ರಾ ಕಣ್ ಬಿಟ್ಟಿದ್ದು ಹೀಗೆ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ನವದೆಹಲಿ: ಹೊಚ್ಚ ಹೊಸ ಕೈ ಗಡಿಯಾದ ಬ್ರ್ಯಾಂಡ್ ಬಿಡುಗಡೆಗೊಳಿಸಿದ ಇಂಗ್ಲೆಂಡ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ಕೆವಿನ್ ಪೀಟರ್ಸನ್

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ಚಿತ್ರ ಸುದ್ದಿ: ಸರಬ್ಜಿತ್ ಗೆ ಕಂಬನಿ, ಎಲೆಕ್ಷನ್ ಪ್ರಚಾರ

ತಿರುವನಂತಪುರ: ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಕೋವಲಂ ಸಮುದ್ರದಲ್ಲಿ 'ಸರ್ಫಿಂಗ್'

English summary
Todays News stories in Pics May 3, 2013: Varanasi: School students paying homage to late Sarabjit Singh, who died in a Pakistan hospital last night after a brutal attack in Kot Lakhpat jail, in Varanasi and many more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X