ಸ್ಫೋಟ: ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲೇ ಸಿಇಟಿ
ಬೆಂಗಳೂರು, ಏ.26: ಮಲ್ಲೇಶ್ವರಂನ ಬಿಜೆಪಿ ಕಚೇರಿ ಸಮೀಪ ಇತ್ತೀಚೆಗೆ ಸಂಭವಿಸಿದ ಬಾಂಬ್ ಸ್ಫೋಟಗೊಂಡು ಆಸ್ಪತ್ರೆ ಸೇರಿದ್ದ ಇಬ್ಬರು ಪಿಯು ವಿದ್ಯಾರ್ಥಿನಿಯರಿಗೆ ಶುಕ್ರವಾರ ಸಿಹಿ ಸುದ್ದಿ ಸಿಕ್ಕಿದೆ.
ಏ.17 ರಂದು ಸಿಇಟಿ ಕೋಚಿಂಗ್ ಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಾದ ರಕ್ಷಿತಾ ಹಾಗೂ ಲೀಶಾ ಅವರು ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇದರೊಂದಿಗೆ ಸಿಇಟಿ ಬರೆಯುವ ಅಸೆಯೂ ಕಮರಿ ಹೋಗಿತ್ತು.
ಆದರೆ,
ಇದೀಗ
ನಗರದ
ಎಂಎಸ್
ರಾಮಯ್ಯ
ಆಸ್ಪತ್ರೆಯಲ್ಲಿ
ಇಬ್ಬರು
ಚಿಕಿತ್ಸೆ
ಪಡೆಯುತ್ತಿದ್ದು,
ಆರೋಗ್ಯದಲ್ಲಿ
ಚೇತರಿಕೆ
ಕಂಡು
ಬಂದಿದೆ.
ಜೊತೆಗೆ
ಇಬ್ಬರಿಗೂ
ಆಸ್ಪತ್ರೆಯಲ್ಲೇ
ಸಾಮಾನ್ಯ
ಪ್ರವೇಶ
ಪರೀಕ್ಷೆ(ಸಿಇಟಿ)
ನಡೆಸಲು
ಕರ್ನಾಟಕ
ಪರೀಕ್ಷಾ
ಪ್ರಾಧಿಕಾರ(KEA)
ಒಪ್ಪಿಗೆ
ಸೂಚಿಸಿದೆ.
ಲೀಶಾ ಎನ್ ಎಸ್ ಹಾಗೂ ರಕ್ಷಿತಾ ಸುಜೈ(18) ಎಂಬ ವಿದ್ಯಾರ್ಥಿಗಳ ಪೋಷಕರು ಹಾಗೂ ಎಂಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆ ಆಡಳಿತ ಮಂಡಳಿ ಮಾಡಿಕೊಂಡ ಮನವಿಯನ್ನು ಕೆಇಎ ಪುರಸ್ಕರಿಸಿದೆ.
ಎಂಎಸ್ ರಾಮಯ್ಯ ಆಸ್ಪತ್ರೆಗೆ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅವರು ವರದಿ ನೀಡಿದ ಮೇಲೆ ಅನುಮತಿ ಪತ್ರ ನೀಡಲಾಗುತ್ತದೆ ಎಂದು ಕೆಇಎ ಅಧಿಕಾರಿ ಡಾ ಎಸ್ ಪಿ ಕುಲಕರ್ಣಿ ಅವರು ಒನ್ ಇಂಡಿಯಾ ತಂಡಕ್ಕೆ ಹೇಳಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯಕ್ಕೆ ಹಾನಿಯಾಗದಂತೆ ಪ್ರತಿ ನಿತ್ಯ ಸಿಇಟಿಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಕೆಇಎ ಅಧಿಕಾರಿಗಳ ಭರವಸೆ ಶುಭ ಸೂಚಕವಾಗಿದೆ.
ಇಬ್ಬರು ವಿದ್ಯಾರ್ಥಿನಿಯರ ಪೈಕಿ 17 ವರ್ಷದ ಲೀಜಾ ಅವರ ಮುರಿದ ಕಾಲಿಗೆ ಮುಂದಿನ ಗುರುವಾರ ಸರ್ಜರಿ ಮಾಡಲಾಗುವುದು. ಇಬ್ಬರನ್ನು ಮುಂದಿನ ಎರಡು ವಾರಗಳಲ್ಲಿ ಆಸ್ಪತ್ರೆಯಿಂದ ಡಿಸಾರ್ಜ್ ಮಾಡಲಾಗುತ್ತೆ ಎಂದು ಎಂಎಸ್ ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ಡಾ. ನರೇಶ್ ಶೆಟ್ಟಿ ತಿಳಿಸಿದರು.
ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ಪದವಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 2013ರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮೇ 1, 2 ಮತ್ತು 3ರಂದು ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಸಂಪೂರ್ಣ ವೇಳಾಪಟ್ಟಿ ನೋಡಿ