ಕೇರಳ ಕುಟುಂಬಕ್ಕೆ ದಕ್ಕುತ್ತಾ 5000 ಕೋಟಿ ರೂ?

ಇದು ಒಂದು ಮುಸ್ಲಿಂ ಕುಟುಂಬಕ್ಕೆ ಸೇರಿದ್ದಾಗಿದ್ದು. ಮೊತ್ತವೂ ಅಗಾಧವಾಗಿದೆ. ಇದು ಕಣ್ಣೂರು ಜಿಲ್ಲೆಯಲ್ಲಿನ ಕೇಯಿ ಎಂಬ ಕುಟುಂಬಕ್ಕೆ ಸೇರಿದ್ದಾಗಿದೆ. ಆದರೆ ಇದು ಸದ್ಯಕ್ಕೆ ಸೌದಿ ಅರೇಬಿಯಾ ಸಂಸ್ಥಾನದ ಖಜಾನೆಗೆ ಸೇರಿದೆ. ಇದನ್ನು ಸದರಿ ಕುಟುಂಬದವರಿಗೆ ಬಿಡಿಸಿಕೊಡುವಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮೊರೆಯಿಟ್ಟಿದೆ.
ಇಷ್ಟೊಂದು ಭಾರಿ ಮೊತ್ತವು 1950 ನೇ ಇಸ್ವಿಯಿಂದಲೂ ಅಂದರೆ ಆರು ದಶಕಗಳಿಂದ ಸೌದಿ ಖಜಾನೆಯಲ್ಲಿ ಕೊಳೆಯುತ್ತಿದೆ. 1950ರ ದಶಕದಲ್ಲಿ ಇದರ ಒಟ್ಟು ಮೊತ್ತ 1.4 ದಶಲಕ್ಷ ಸೌದಿ ರಿಯಾಲ್. ಒಂದು ರಿಯಾಲ್ ಮೌಲ್ಯ ಈಗ ಸುಮಾರು 15 ರೂ. ಆಷ್ಟಿದೆ.
ಗಮನಾರ್ಹವೆಂದರೆ ಕಳೆದ 10 ವರ್ಷಗಳಿಂದ ಕೇಯಿ ಕುಟುಂಬದವರು ಈ ಹಣವನ್ನು ವಾಪಸ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅಲ್ಪಸಂಖ್ಯಾತ ಸಚಿವಾಲಯದ ನಿರ್ದೇಶಕ ಪಿ. ನಾಸೀರ್ ಹೇಳಿದ್ದಾರೆ. ತತ್ಫಲವಾಗಿ, ಕೇರಳ ಸರಕಾರ ಈ ಸಂಪತ್ತು ವರ್ಗಾವಣೆ ಪ್ರಕ್ರಿಯೆನ್ನು ಯಶಸ್ವಿಗೊಳಿಸಲು ವಿಶೇಷಾಧಿಕಾರಿಯನ್ನು ನೇಮಿಸಿದೆ.
ನಾಸೀರ್ ಹೇಳುವಂತೆ ಈ ಸಂಪತ್ತಿನ ಕಥಾನಕ ಹೀಗೆ ಸಾಗುತ್ತದೆ:
136 ವರ್ಷಗಳ ಹಿಂದೆ ಕೇಯಿ ಕುಟುಂಬದವರೊಬ್ಬರು ಮೆಕ್ಕಾ ಬಳಿ ಭೂಮಿಯನ್ನು ಖರೀದಿಸಿದರು. ಅಲ್ಲಿ ಹಜ್ ಯಾತ್ರಿಗಳಿಗಾಗಿ ತಂಗುದಾಣ ನಿರ್ಮಿಸಿದ್ದರು. 1950ರಲ್ಲಿ ಮೆಕ್ಕಾ ಸುತ್ತಮುತ್ತ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸ್ಥಳೀಯ ಆಡಳಿತವು ಈ ಜಾಗವನ್ನು ತನ್ನ ಕಬ್ಜಾಗೆ ತೆಗೆದುಕೊಂಡಿತು.
ಇದಕ್ಕೆ ಪರಿಹಾರಾರ್ಥವಾಗಿ 1.4 ದಶಲಕ್ಷ ಸೌದಿ ರಿಯಾಲ್ ಮೊತ್ತವನ್ನು ನೀಡುವುದಾಗಿ ಅಂದಿನ ಸರಕಾರ ಘೋಷಿಸಿತ್ತು. ಆದರೆ ಸೂಕ್ತ ದಾಖಲೆಗಳ ಅಲಭ್ಯತೆಯಿಂದಾಗಿ ಕೇಯಿ ಕುಟುಂಬದವರಾರೂ ಈ ಪರಿಹಾರ ಮೊತ್ತ ತಮಗೆ ಸೇರಬೇಕು ಎಂದು ಕೇಳಲಾಗಲಿಲ್ಲ.
ವಕ್ಫ್ ಕಾನೂನು ಪ್ರಕಾರ ಅಲ್ಲಾಗೆ ಸಮರ್ಪಿಸಿದ ಯಾವುದೇ ಆಸ್ತಿಯನ್ನು ಆ ಸಂಪತ್ತಿನ ಒಡೆಯನಾಗಲಿ ಅಥವಾ ಆತನ ವಾರಸುದಾರನಾಗಲಿ ಮಾತ್ರವೇ ಪಡೆಯತಕ್ಕದ್ದು. ಬೇರೆ ಯಾರಿಗೂ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಹಾಗಾಗಿ ಕೇಯಿ ಕುಟುಂಬ ಈ ಪರಿಹಾರ ಮೊತ್ತದ ವಾರಸುದಾರರಾಗಿದ್ದು, ಅದನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ನಾಸೀರ್ ತಿಳಿಸಿದ್ದಾರೆ.
ಈಗಿನ ಅಂದಾಜು ಪ್ರಕಾರ ಅಂದಿನ ಪರಿಹಾರದ ಮೊತ್ತ ಈಗ 5,000 ಕೋಟಿ ರೂ. ಗೆ ತಲುಪಿದೆ. ಸೌದಿ ಕಾನೂನು ಪ್ರಕಾರ ಈ ಮೊತ್ತವನ್ನು ಸೌದಿಯಿಂದ ಹೊರಕ್ಕೆ ತರುವಂತಿಲ್ಲ. ಒಂದು ವೇಳೆ ಕೇಯಿ ಕುಟುಂಸಬ್ಥರಿಗೆ ಇದು ಪ್ರಾಪ್ತಿಯಾದರೂ ಅಷ್ಟನ್ನೂ ಅಲ್ಲೇ ಬಳಕೆ ಮಾಡಬೇಕು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications