Q3: ವಿಪ್ರೋ 1729 ಕೋಟಿ ರು ಲಾಭ

ಜನವರಿ- ಮಾರ್ಚ್ ತ್ರೈಮಾಸಿಕ 2013ರಲ್ಲಿ ಒಟ್ಟಾರೆ ನಿವ್ವಳ ಆದಾಯದಲ್ಲಿ ಶೇ 13 ರಷ್ಟು ಏರಿಕೆ ಕಂಡಿದ್ದು 9,613.1 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,506.1 ಕೋಟಿ ರು ಗಳಿಸಿತ್ತು ಎಂದು ಬಿಎಸ್ ಇ ಗೆ ಸಂಸ್ಥೆ ಮಾಹಿತಿ ನೀಡಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕೊನೆಯಲಿ ಸಂಸ್ಥೆ ನಿವ್ವಳ ಲಾಭ ಶೇ 19.07 ರಂತೆ 6,635.9 ಕೋಟಿ ಗಳಿಕೆಯಾಗಿದೆ. 2011-12ರಲ್ಲಿ 5,573 ಕೋಟಿ ರು ಗಳಿಕೆಯಾಗಿತ್ತು.
ವಿಪ್ರೋ ಐಟಿ ವಿಭಾಗದಲ್ಲಿ ಮಾರ್ಚ್ 31, 2013ಕ್ಕೆ ಅನ್ವಯವಾಗುವಂತೆ 1,45,812 ಉದ್ಯೋಗಿಗಳಿದ್ದಾರೆ. 2,907 ಹೆಚ್ಚಿನ ಮಂದಿಯನ್ನು ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸುಮಾರು 52 ಹೊಸ ಗ್ರಾಹಕರನ್ನು ಹೊಂದಲಾಗಿದೆ.
ಡಾಲರ್ ಎಣಿಕೆಯಲ್ಲಿ ವಿಪ್ರೋ ಸಂಸ್ಥೆ ಆದಾಯ 7.95 ಬಿಲಿಯನ್ ಡಾಲರ್ ಬಂದಿದೆ. ನಿವ್ವಳ ಲಾಭ 1.22 ಬಿಲಿಯನ್ ಡಾಲರ್ ನಷ್ಟಿದೆ. ಐಟಿ ಸರ್ವಿಸಸ್ ಆದಾಯ 6.21 ಬಿಲಿಯನ್ ಡಾಲರ್ ಆಗಿದೆ.
ಆದರೆ, ಇನ್ಫೋಸಿಸ್ ಸಂಸ್ಥೆ ಮಾದರಿಯಲ್ಲಿ ಹೊಸ ಆರ್ಥಿಕ ವರ್ಷಕ್ಕೆ ಯಾವುದೇ ಸೂಕ್ತ ಮಾರ್ಗದರ್ಶನ ಒದಗಿಸಲು ವಿಪ್ರೋ ಸಂಸ್ಥೆ ವಿಫಲವಾಗಿರುವುದು ಷೇರುದಾರರಿಗೆ ನಿರಾಶೆ ಮೂಡಿಸಿದೆ.
#Wipro wins the 2012 #NASSCOM Corporate Awards for Excellence in Diversity &Inclusion. #WiproQ4 bit.ly/15qkQgw
— Wipro (@Wipro) April 19, 2013
ಇದೇ ಖುಷಿಯಲ್ಲಿ ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ವಿಪ್ರೋ, ತನ್ನ ಷೇರುದಾರರಿಗೆ ಪ್ರತಿ ಈಕ್ವಿಟಿ ಷೇರುಗಳಿಗೆ 5 ರು ಪ್ರತಿ ಷೇರಿನಂತೆ ಡಿವೆಂಡೆಡ್ ಘೋಷಿಸಿದೆ.
ವಿಪ್ರೋ ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ನಿರೀಕ್ಷೆಗೂ ಮೀರಿ ಭರ್ಜರಿ ಇಳುವರಿ ಕಂಡಿತ್ತು. ಜ.18, 2013 ಪ್ರಕಟವಾದ ತ್ರೈಮಾಸಿಕ ವರದಿಯಲ್ಲಿ QoQ ನಂತೆ ನಿವ್ವಳ ಲಾಭದಲ್ಲಿ ಶೇ 6.5ರಷ್ಟು ಏರಿಕೆ ಕಂಡು 1,7616 ಕೋಟಿ ರು ಗಳಿಸಿತ್ತು.
ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಗ್ರಾಹಕರು ಹಾಗೂ ಉದ್ಯೋಗಿಗಳ ನಡುವೆ ನಿರಂತರ ಸಂಪರ್ಕ ಈ ಸಾಧನೆಗೆ ಪೂರಕವಾಗಿದೆ. ಕ್ಲೌಡ್, ಮೊಬಿಲಿಟಿ, ಅನಾಲಿಟಿಕ್ಸ್ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮುಂದುವರೆಯಲಿದೆ ಎಂದು ವಿಪ್ರೋ ಸಂಸ್ಥೆಯ ಸಿಎಫ್ ಒ ಸುರೇಶ್ ಸೇನಾಪತಿ ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications