ಬೆಂಗಳೂರಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲ
ಬೆಂಗಳೂರು, ಏ.7: ನಗರದಲ್ಲಿ ಕುಡಿಯುವ ನೀರಿನ ಅಭಾವದ ಬಗ್ಗೆ ಯಾವ ರಾಜಕೀಯ ಪಕ್ಷವೂ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಈ ನಡುವೆ ಸರ್ಕಾರೇತರ ಸಂಸ್ಥೆ ಜನಾಗ್ರಹ ಹೊರ ಹಾಕಿರುವ ಸಮೀಕ್ಷೆ ಆತಂಕ ಹುಟ್ಟಿಸಿದೆ.
ಬೆಂಗಳೂರಿನ ಹಲವು ಭಾಗಕ್ಕೆ ಕಾವೇರಿ ನೀರು ಸಿಗುತ್ತಿಲ್ಲ ಎಂಬ ಕೊರಗಿದೆ. ಬೇಸಿಗೆಯಲ್ಲಂತೂ ಕುಡಿಯಲು ನೀರು ಸಿಗುವುದೇ ಇಲ್ಲ ಎಂಬ ಮಾಹಿತಿ ಇದೆ. ಇದರ ಜೊತೆಗೆ ಈಗ ಕುಡಿಯುತ್ತಿರುವ ನೀರು ಕುಡಿಯಲು ಯೋಗ್ಯ(portable water)ವಾಗಿಲ್ಲ ಎಂದು ಮಾಹಿತಿ ಹೊರ ಬಿದ್ದರೆ ಜನರ ಪರಿಸ್ಥಿತಿ ಏನಾಗಬೇಡ.
ಜನಾಗ್ರಹ ವರದಿ ಪ್ರಕಾರ ಶೇ 28 ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರು ಬೆಂಗಳೂರಿಗರಿಗೆ ಲಭ್ಯವಾಗುತ್ತಿದೆ. ನಗರದ 198ಕ್ಕೂ ಅಧಿಕ ವಾರ್ಡ್ ಗಳಲ್ಲಿ ಜನವರಿ ತಿಂಗಳಿನಿಂದ ಇಲ್ಲಿವರೆಗೂ ನಡೆಸಿದ ಸಮೀಕ್ಷೆ ಪ್ರಕಾರ ಈ ಮಾಹಿತಿ ಹೊರ ಬಿದ್ದಿದೆ.
ನೀರು ಪೂರೈಕೆ ವಿಧಾನ, ಒಳ ಚರಂಡಿ ವ್ಯವಸ್ಥೆ, ಜಲ ಶೇಖರಣೆ ಪರಿಸರ ಮುಂತಾದ ಅಂಶಗಳನ್ನು ಗುರುತಿಸಿ ವರದಿ ತಯಾರಿಸಲಾಗಿದೆ. ನೀರಿನ ಶುದ್ಧತೆಯ ಪರೀಕ್ಷೆ ಕೂಡಾ ನಡೆಸಲಾಗಿದೆ.

ಅನೇಕಾನೇಕ ಮನೆಗಳಿಂದ, ಗಲ್ಲಿಗಲ್ಲಿಗಳ ನಲ್ಲಿಗಳಿಂದ ಸಂಗ್ರಹಿಸಲಾದ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದ ಮೇಲೆ ಹೊರ ಬಿದ್ದ ಫಲಿತಾಂಶದ ಪ್ರಕಾರ ಶೇ 72 ರಷ್ಟು ನೀರಿನ ಸ್ಯಾಂಪಲ್ ಕಲುಷಿತವಾಗಿದ್ದು, ಹತ್ತು ಹಲವು ಬ್ಯಾಕ್ಟೀರಿಯಾಗಳ ಆವಾಸ ಸ್ಥಾನವಾಗಿದೆ.
ನೀರು ಶುದ್ಧವಾಗಿಲ್ಲ ಎನಿಸಿದರೆ ಕುದಿಸಿ ಆರಿಸಿ ನೀರನ್ನು ಕುಡಿಯಿರಿ ಎಂದು ಆರೋಗ್ಯ ಇಲಾಖೆ ಪ್ರಕಟಣೆಯನ್ನು ಇಲ್ಲಿ ಹೊರಡಿಸಬಹುದು. ಆದರೆ, ಮೇಲ್ಮಧ್ಯಮ ವರ್ಗದ ಜನರ ಮನೆಗಳಲ್ಲಿ ಸಿಕ್ಕಿರುವ ಶೇ 69.83 ರಷ್ಟು ಪ್ರಮಾಣದ ನೀರಿನ ಸ್ಯಾಂಪಲ್ ಕೂಡಾ ಅಶುದ್ಧವಾಗಿದೆ ಎಂದು ವರದಿ ಹೇಳಿದೆ.
ಇನ್ನು ಬಡ ಹಾಗೂ ಕೆಳವರ್ಗದ ಆರ್ಥಿಕವಾಗಿ ಹಿಂದುಳಿತ ಜನರ ಮನೆಗಳಲ್ಲಿ ಸಿಕ್ಕಿರುವ ನೀರಿನ ಸ್ಯಾಂಪಲ್ ಶೇ 75.87 ಪ್ರಮಾಣ ಕುಡಿಯಲು ಯೋಗ್ಯವಾಗಿಲ್ಲ.198 ವಾರ್ಡ್ ಗಳಲ್ಲಿ 15 ವಾರ್ಡ್ ಗಳ ನೀರು ಬಾಯಿಗಿಟ್ಟರೆ ಆರೋಗ್ಯ ಕೆಡುವುದು ಗ್ಯಾರಂಟಿ. 2 ವಾರ್ಡ್ ಗಳು ಮಾತ್ರ ಡಿಸ್ಟಿಂಕ್ಷನ್ ಪಡೆದು ಪಾಸ್ ಆಗಿದೆಯಂತೆ.
ನಾಗರಿಕ ಸೌಕರ್ಯ ತಜ್ಞ ವಿ ರವಿಚಂದ್ರನ್ ಪ್ರಕಾರ 'ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ಹರಡಬಹುದಾದ ರೋಗಗಳು ಅಧಿಕವಾಗಿರುತ್ತದೆ ಎಂಬುದು ಕಾಮನ್ ಸೆನ್ಸ್. ಶಾಲಾ ಪಠ್ಯಗಳಲ್ಲಿ ಎಲ್ಲರೂ ಓದಿರುತ್ತಾರೆ.
ಆದರೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಬಹುತೇಕ ವಾರ್ಡ್ ಗಳಲ್ಲಿನ ಕುಡಿಯುವ ನೀರು ಯೋಗ್ಯವಾಗಿಲ್ಲ ಎಂಬ ಅಂಶ ಆತಂಕಕಾರಿಯಾಗಿದೆ. ನೀರು ಹೇಗೆ ಕಲುಷಿತವಾಗುತ್ತಿದೆ. ಏಕೆ ಕಲುಷಿತವಾಗುತ್ತಿದೆ ಎಂಬುದರ ಬಗ್ಗೆ ತಕ್ಷಣವೇ ಗಮನಹರಿಸಬೇಕು. ಜಲಮಂಡಳಿ ಇಂಜಿನಿಯರ್ ಗಳನ್ನು ಶಿಕ್ಷಿಸಬೇಕು ಎಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications