ಮತ್ತೆ ವಿಮಾನ ಹಾರಿಸಲು ಸಿದ್ಧವಾದ ಕ್ಯಾ ಗೋಪಿನಾಥ್

2007ರಲ್ಲಿ ತಮ್ಮ Air Deccan ಕೂಸನ್ನು ಅನಿವಾರ್ಯ ಕಾರಣಗಳಿಂದಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಕೊಟ್ಟು ಕೈತೊಳೆದುಕೊಂಡಿದ್ದ ಕ್ಯಾಪ್ಟನ್ ಗೋಪಿ, ಈ ಬಾರಿ ಮತ್ತೆ ಭಾರತದ ಆಗಸದ ಮೇಲೆ ಸ್ವಚ್ಚಂದವಾಗಿ ತಮ್ಮ ವಿಮಾನಗಳನ್ನು ಹಾರಿಸಲು ಸಿದ್ಧವಾಗಿದ್ದಾರೆ.
'ದೇಶೀಯ ವಿಮಾನಗಳನ್ನು ಹಾರಿಸಲು ವಿಮಾನ ಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ DGCA ಸಹ ಹಸಿರು ನಿಶಾನೆ ತೋರಬೇಕಾಗಿದೆ. ಅಲ್ಲಿಂದ ಓಕೆ ಸಿಗುತ್ತಿದ್ದಂತೆ ಯಾವುದೇ ಕ್ಷಣ ನಮ್ಮ ಕಡಿಮೆ ಬಜೆಟಿನ ವಿಮಾನಗಳು ದೇಶದ ಜನತೆಯ ಸೇವೆಗೆ ಲಭ್ಯವಾಗಲಿವೆ' ಎಂದು ಕ್ಯಾಪ್ಟನ್ ಗೋಪಿ ತಿಳಿಸಿದ್ದಾರೆ.
'ದೇಶೀಯ ವಿಮಾನಯಾನದಲ್ಲಿ ವಿದೇಶೀ ಕಂಪನಿಗಳೂ ಶೇ. 49ರಷ್ಟು ಹೂಡಿಕೆ ಮಾಡಬಹುದು ಎಂಬ ಹೊಸ ನೀತಿಯನ್ನು ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದಾಗ ನನ್ನಲ್ಲಿ ಮತ್ತೆ ಹೊಸ ಆಸೆ ಚಿಗುರಿತು. ಮತ್ತೆ ನನ್ನ 'ಹುಚ್ಚು ಕುದುರೆಗೆ' ಹುರುಳಿ ಹಾಕಿದೆ. ಅದೀಗ ಕೆನೆಯುತ್ತಿದ್ದು, ಯಾವುದೇ ಕ್ಷಣ ಆಗಸದತ್ತ ನೆಗೆಯಬಹುದಾಗಿದೆ' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಂದರೆ ಈ ಬಾರಿ ವಿದೇಶೀ ವಿಮಾನಯಾನ ಸಂಸ್ಥೆ ಸಹಯೋಗದಲ್ಲಿ ಕ್ಯಾಪ್ಟನ್ ಗೋಪಿ ವಿಮಾನಗಳು ಭಾರತದಲ್ಲಿ ಹಾರಲಿವೆ. ಆದರೆ ತಮ್ಮ ಯೋಜನೆಗಳ ಬಗ್ಗೆ ಈ ಹಂತದಲ್ಲಿ ನಿಖರ ಮಾಹಿತಿ ನೀಡಲು ನಿರಾಕರಿಸಿದ ಕ್ಯಾಪ್ಟನ್ ಗೋಪಿ ಸದ್ಯದಲ್ಲೇ ಎಲ್ಲ ಮಾಹಿತಿ ಒದಗಿಸುವುದಾಗಿ ಹೇಳಿದ್ದಾರೆ.
ಜತೆಗೆ ಈ ಹಿಂದೆ 2007ರಲ್ಲಿ ವಿಜಯ್ ಮಲ್ಯಗೆ Air Deccan ಅನ್ನು ಮಾರಿದಾಗ ವ್ಯಾಪಾರ ನೀತಿಯಂತೆ 5 ವರ್ಷ ಕಾಲ ತಾವು ಮತ್ತೆ ವಿಮಾನ ಹಾರಾಟಕ್ಕೆ ಮುಂದಾಗುವುದಿಲ್ಲ ಎಂಬ ಒಡಂಬಡಿಕೆಗೆ ಒಪ್ಪಿದ್ದರು. ಅದು ಇದೇ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.
ಆದರೆ ವಿಮಾನ ಯಾನ ಉದ್ಯಮ ಸಂಕಷ್ಟದಲ್ಲಿದೆ. ಇದರಿಂದ ಆಗಸದಲ್ಲಿ ಕಾರ್ಮೋಡಗಳು ಮೂಡಿವೆ. Air Deccanನಲ್ಲಿ ಕೈಸುಟ್ಟುಕೊಂಡಿದ್ದ ಕ್ಯಾಪ್ಟನ್ ಗೋಪಿ ಈ ಬಾರಿ ಯಶಸ್ವಿಯಾಗುವರೇ? ವಿದೇಶಿ ಕಂಪನಿ ಅವರ ಕನಸಿಗೆ ನೀರೆರೆಯುವುದೇ, ಕಾಲವೇ ಉತ್ತರಿಸಬೇಕು. (ಕೃಪೆ: ಬೆಂಗಳೂರು ಮಿರರ್)
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications