ಮತ್ತೆ ವಿಮಾನ ಹಾರಿಸಲು ಸಿದ್ಧವಾದ ಕ್ಯಾ ಗೋಪಿನಾಥ್

2007ರಲ್ಲಿ ತಮ್ಮ Air Deccan ಕೂಸನ್ನು ಅನಿವಾರ್ಯ ಕಾರಣಗಳಿಂದಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಕೊಟ್ಟು ಕೈತೊಳೆದುಕೊಂಡಿದ್ದ ಕ್ಯಾಪ್ಟನ್ ಗೋಪಿ, ಈ ಬಾರಿ ಮತ್ತೆ ಭಾರತದ ಆಗಸದ ಮೇಲೆ ಸ್ವಚ್ಚಂದವಾಗಿ ತಮ್ಮ ವಿಮಾನಗಳನ್ನು ಹಾರಿಸಲು ಸಿದ್ಧವಾಗಿದ್ದಾರೆ.
'ದೇಶೀಯ ವಿಮಾನಗಳನ್ನು ಹಾರಿಸಲು ವಿಮಾನ ಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ DGCA ಸಹ ಹಸಿರು ನಿಶಾನೆ ತೋರಬೇಕಾಗಿದೆ. ಅಲ್ಲಿಂದ ಓಕೆ ಸಿಗುತ್ತಿದ್ದಂತೆ ಯಾವುದೇ ಕ್ಷಣ ನಮ್ಮ ಕಡಿಮೆ ಬಜೆಟಿನ ವಿಮಾನಗಳು ದೇಶದ ಜನತೆಯ ಸೇವೆಗೆ ಲಭ್ಯವಾಗಲಿವೆ' ಎಂದು ಕ್ಯಾಪ್ಟನ್ ಗೋಪಿ ತಿಳಿಸಿದ್ದಾರೆ.
'ದೇಶೀಯ ವಿಮಾನಯಾನದಲ್ಲಿ ವಿದೇಶೀ ಕಂಪನಿಗಳೂ ಶೇ. 49ರಷ್ಟು ಹೂಡಿಕೆ ಮಾಡಬಹುದು ಎಂಬ ಹೊಸ ನೀತಿಯನ್ನು ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದಾಗ ನನ್ನಲ್ಲಿ ಮತ್ತೆ ಹೊಸ ಆಸೆ ಚಿಗುರಿತು. ಮತ್ತೆ ನನ್ನ 'ಹುಚ್ಚು ಕುದುರೆಗೆ' ಹುರುಳಿ ಹಾಕಿದೆ. ಅದೀಗ ಕೆನೆಯುತ್ತಿದ್ದು, ಯಾವುದೇ ಕ್ಷಣ ಆಗಸದತ್ತ ನೆಗೆಯಬಹುದಾಗಿದೆ' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಂದರೆ ಈ ಬಾರಿ ವಿದೇಶೀ ವಿಮಾನಯಾನ ಸಂಸ್ಥೆ ಸಹಯೋಗದಲ್ಲಿ ಕ್ಯಾಪ್ಟನ್ ಗೋಪಿ ವಿಮಾನಗಳು ಭಾರತದಲ್ಲಿ ಹಾರಲಿವೆ. ಆದರೆ ತಮ್ಮ ಯೋಜನೆಗಳ ಬಗ್ಗೆ ಈ ಹಂತದಲ್ಲಿ ನಿಖರ ಮಾಹಿತಿ ನೀಡಲು ನಿರಾಕರಿಸಿದ ಕ್ಯಾಪ್ಟನ್ ಗೋಪಿ ಸದ್ಯದಲ್ಲೇ ಎಲ್ಲ ಮಾಹಿತಿ ಒದಗಿಸುವುದಾಗಿ ಹೇಳಿದ್ದಾರೆ.
ಜತೆಗೆ ಈ ಹಿಂದೆ 2007ರಲ್ಲಿ ವಿಜಯ್ ಮಲ್ಯಗೆ Air Deccan ಅನ್ನು ಮಾರಿದಾಗ ವ್ಯಾಪಾರ ನೀತಿಯಂತೆ 5 ವರ್ಷ ಕಾಲ ತಾವು ಮತ್ತೆ ವಿಮಾನ ಹಾರಾಟಕ್ಕೆ ಮುಂದಾಗುವುದಿಲ್ಲ ಎಂಬ ಒಡಂಬಡಿಕೆಗೆ ಒಪ್ಪಿದ್ದರು. ಅದು ಇದೇ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.
ಆದರೆ ವಿಮಾನ ಯಾನ ಉದ್ಯಮ ಸಂಕಷ್ಟದಲ್ಲಿದೆ. ಇದರಿಂದ ಆಗಸದಲ್ಲಿ ಕಾರ್ಮೋಡಗಳು ಮೂಡಿವೆ. Air Deccanನಲ್ಲಿ ಕೈಸುಟ್ಟುಕೊಂಡಿದ್ದ ಕ್ಯಾಪ್ಟನ್ ಗೋಪಿ ಈ ಬಾರಿ ಯಶಸ್ವಿಯಾಗುವರೇ? ವಿದೇಶಿ ಕಂಪನಿ ಅವರ ಕನಸಿಗೆ ನೀರೆರೆಯುವುದೇ, ಕಾಲವೇ ಉತ್ತರಿಸಬೇಕು. (ಕೃಪೆ: ಬೆಂಗಳೂರು ಮಿರರ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications