ವಿಪ್ರೋ ಪ್ರೇಮ್ಜಿಗೆ 12300 ಕೋಟಿ ಸಲಾಂ ಹೇಳೋಣ!
ಬೆಂಗಳೂರು, ಫೆ.23: ಯಾರ ಕೈಗುಣ ಹೇಗೋ ಬಲ್ಲವರಾರು? ವಿಪ್ರೋ ಸಾಫ್ಟ್ವೇರ್ ಕಂಪನಿ ಅಧ್ಯಕ್ಷ ಅಚ್ಚ ಕನ್ನಡಿಗ ಅಜೀಂ ಪ್ರೇಮ್ ಜಿ ಅವರು 12,300 ಕೋಟಿ ರೂ. ದಾನ ನೀಡಿದ್ದಾರೆ. ಇದರಿಂದ ಇನ್ನೂ ನೂರಾರು ಪ್ರೇಮ್ ಜಿಗಳು ಹುಟ್ಟಿಕೊಂಡು, ಸಮಾಜಕ್ಕೆ ನೀರೆರೆಯುವಂತಾಗಲಿ. ಏಕೆಂದರೆ, ಕೆರೆಯ ನೀರನು ಕೆರೆಗೆ ಚಲ್ಲಿರೋ ಎಂದಿದ್ದಾರೆ ದಾಸರು.
ಹೃದಯ ಶ್ರೀಮಂತ ಅಜೀಂ ಪ್ರೇಮ್ ಜಿ ಅವರು ಈಗ ಭಾರತದಲ್ಲಿ ಅತಿದೊಡ್ಡ ದಾನಿ ಎನಿಸಿಕೊಂಡಿದ್ದಾರೆ. ಪ್ರೇಮ್ ಜಿ ಅವರು ತಮ್ಮ ಪಾಲಿಗೆ ಸೇರಿರುವ ವಿಪ್ರೋ ಸಮೂಹದ 12,300 ಕೋಟಿ ರೂ. ಮೌಲ್ಯದ ಶೇ. 12ರಷ್ಟು ಷೇರುಗಳನ್ನು ತಮ್ಮದೇ ದತ್ತಿ ಸಂಸ್ಥೆಗೆ ವರ್ಗಾಯಿಸಿದ್ದಾರೆ.

'ಸುಸ್ಥಿರ ಸಮಾಜ ನಿರ್ಮಾಣ' ಆಶಯದೊಂದಿಗೆ 'ಅಜೀಂ ಪ್ರೇಮ್ ಜಿ ಪ್ರತಿಷ್ಠಾನ' ಮೂಲಕ ಈ ದತ್ತಿ ನಿಧಿಯನ್ನು ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಈ ಷೇರುಗಳ ವರ್ಗಾವಣೆ ಮೂಲಕ, ವಿಪ್ರೋದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಷನ್ ಹೊಂದಿರುವ ಒಟ್ಟಾರೆ ಷೇರು ಪಾಲು ಶೇ 19.93ಕ್ಕೇರಿದೆ. ಮೂರು ವರ್ಷಗಳ ಹಿಂದೆ ಈ ದತ್ತಿ ಸಂಸ್ಥೆಗೆ ವಿಪ್ರೋ ಸಮೂಹದ ಶೇ 8.7ರಷ್ಟು ಷೇರುಗಳನ್ನು ವರ್ಗಾಯಿಸಲಾಗಿತ್ತು.
ಪ್ರತಿಷ್ಠಾನವು ಪ್ರಮುಖವಾಗಿ ಕರ್ನಾಟಕ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಪುದುಚೇರಿ, ರಾಜಸ್ತಾನ, ಬಿಹಾರ, ಛತ್ತೀಸ್ ಗಡ ಮತ್ತು ಉತ್ತರಾ ಖಂಡನಲ್ಲಿ ಅಲ್ಲಿನ ಸರ್ಕಾರಗಳ ಪಾಲುದಾರಿಕೆಯಲ್ಲಿ ಗ್ರಾಮೀಣ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಿದೆ. ಈ ಪ್ರತಿಷ್ಠಾನದಡಿ ಬೆಂಗಳೂರಿನಲ್ಲಿ ಅತ್ಯುತ್ತಮ ಗುಣಮಟ್ಟದ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವೂ ಕಾರ್ಯನಿರ್ವಹಿಸುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications