ಜಾತ್ಯತೀತ ಜನತಾದಳಕ್ಕೆ ಪುಟ್ಟೇಗೌಡ ಗುಡ್ ಬೈ

Janata Dal (Secular) MLA
ಕೊಡಗು, ಫೆ. 18 : ಬಜೆಟ್ ಅಧಿವೇಶನ ಮುಗಿದಿದೆ. ಅಧಿವೇಶನದ ನಂತರ ಬಿಜೆಪಿ ಶಾಸಕರು ಕರ್ನಾಟಕ ಜತನಾ ಪಕ್ಷ (ಕೆಜೆಪಿ) ಸೇರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಆದರೆ ಸೋಮವಾರ ಜೆಡಿಎಸ್ ನ ಶ್ರವಣಬೆಳಗೊಳದ ಶಾಸಕ ಸಿ.ಎಸ್.ಪುಟ್ಟೇಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾಸಕರ ರಾಜೀನಾಮೆ ಪಡೆದು ಅದನ್ನು ಅಂಗೀಕರಿಸದ ಬೇಕಾದ ಸ್ವೀಕರ್ ಕೆ.ಜಿ.ಬೋಪಯ್ಯ ಕೊಡಗು ಜಿಲ್ಲಾ ಪ್ರವಾಸದಲ್ಲಿರುವುದರಿಂದ, ಅಲ್ಲಿಗೆ ತೆರಳಿದ ಪುಟ್ಟೇಗೌಡ ಕೊಡಗಿನ ಪೊನ್ನಂಪೇಟೆಯ ಸ್ಪೀಕರ್ ಅವರ ನಿವಾಸದ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಪಕ್ಷದೊಳಗಿನ ಆಂತರಿಕ ಭಿನ್ನಮತ, ಎಚ್.ಡಿ.ರೇವಣ್ಣ ಅವರ ಏಕಪಕ್ಷೀಯ ನಿಲುವುಗಳಿಂದ ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ವಿಧಾನಸಭಾ ಪ್ರತಿಪಕ್ಷದ ನಾಯಕ ಎ.ಚ್.ಡಿ.ರೇವಣ್ಣ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ.ಜೆಡಿಎಸ್ ತೊರೆದಿರುವ ಸಿ.ಎಸ್.ಪುಟ್ಟೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ತಯಾರಿ ಆರಂಭಿಸಿರುವಾಗಲೇ ಪಕ್ಷಾಂತರದ ಪರ್ವ ಆರಂಭವಾಗಿದೆ. ಸಿ.ಎಸ್.ಪುಟ್ಟೇಗೌಡರ ರಾಜೀನಾಮೆಯಿಂದಾಗಿ ಜೆಡಿಎಸ್ ನ ಒಂದು ವಿಕೆಟ್ ಪತನಗೊಂಡಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+