ಬೆಂಗಳೂರು: ಇನ್ಮುಂದೆ ರಾತ್ರಿ ವೇಳೆ ಕುದುರೆ ರೇಸ್!
ಬೆಂಗಳೂರು, ಫೆ. 16: ಇತ್ತಿತ್ಲಾಗೆ ಬಿಡಿ ಬಹಳಷ್ಟು ಕ್ರೀಡೆಗಳು ರಾತ್ರಿ ಕ್ರೀಡೆಗಳಾಗಿ ಮಾರ್ಪಟ್ಟಿವೆ. ಅದಕ್ಕೆ ತಾಜಾ ಸೇರ್ಪಡೆಯೆಂದರೆ ಕುದುರೆ ರೇಸ್. ಬೇರೆ ದೇಶಗಳಲ್ಲಿ ಕುದುರೆ ರೇಸ್ ರಾತ್ರಿ ವೇಳೆ ನಡೆಯುತ್ತಿದೆಯಾದರೂ ಭಾರತಕ್ಕಿನ್ನೂ ಅದು ಹೊಸದು. ಹಾಗೆಂದೇ, ಬೆಂಗಳೂರಿನಲ್ಲಿ (BTC) ಇನ್ನು ಮುಂದೆ ರಾತ್ರಿ ವೇಳೆಯೂ ಕುದುರೆ ಜೂಜು ನಡೆಸಲು ಸಿದ್ಧತೆಗಳು ನಡೆಯುತ್ತಿವೆ.
ಬೆಂಗಳೂರಿನಲ್ಲಿ ಕುದುರೆ ರೇಸ್ ಹೆಚ್ಚು ಜನಪ್ರಿಯವೋ ಅಥವಾ ರೇಸ್ ಕೋರ್ಸ್ ರಸ್ತೆ ಹೆಚ್ಚು ಜನಪ್ರಿಯವೋ ಅಂದರೆ ಜನ ರೇಸ್ ಕೋರ್ಸ್ ರಸ್ತೆಗೆ ಮಣೆ ಹಾಕುತ್ತಾರೆ. ಇನ್ನು ಕುದುರೆ ರೇಸ್ ಜನಸಾಮಾನ್ಯರಿಗೆ ಹುಳಿ ದ್ರಾಕ್ಷಿಯೇ ಸರಿ. ಕೆಲವರಿದ್ದಾರೆ ಬಿಡಿ ರೇಸಿನ ಚಟಕ್ಕೆ ಬಿದ್ದು ದುಡ್ಡು ಕಳೆದುಕೊಂಡು ಅದೇ ರಸ್ತೆಯಲ್ಲಿ ಅಮ್ಮಾ-ತಾಯಿ ಆಗಿರುವ ನಿದರ್ಶನಗಳೂ ಇವೆ.

ಮುಂದಿನ ಚಳಿಗಾಲದ ಡರ್ಬಿ ವೇಳೆಗೆ flood-lit ರೇಸಿಂಗ್ ನಡೆಸುತ್ತೇವೆ. ವಿಶ್ವದಾದ್ಯಂತ ರಾತ್ರಿ ವೇಳೆ ನಡೆಯುವ ಕುದುರೆ ರೇಸ್ ಭಾರಿ ಜನಪ್ರಿಯವಾಗುತ್ತಿದೆ. ಬಿಟಿಸಿಯಲ್ಲೂ ಮೊದಲ ಬಾರಿಗೆ ಇದಕ್ಕೆ ಅವಕಾಶ ಕಲ್ಪಿಸುವುದಾಗಿ 20ಕ್ಕೂ ಹೆಚ್ಚು ಕುದುರೆಗಳ ಒಡೆಯ ದಯಾನಂದ ಪೈ ಹೇಳಿದ್ದಾರೆ.
'ಕುದುರೆ ರೇಸಿಂಗ್ ಭೂಪಟದಲ್ಲಿ BTCಗೆ ಅಗ್ರಮಾನ್ಯ ಸ್ಥಾನ ಕಲ್ಪಿಸುವುದು ನನ್ನ ಆಶಯವಾಗಿದೆ. ಅದರಲ್ಲಿ ಈ ರಾತ್ರಿ ರೇಸ್ ಸಹ ಒಂದು. ಇದು ಇಂದಿನ ಬೆಂಗಳೂರಿಗೆ ಹೇಳಿ ಮಾಡಿಸಿದಂತಿರುತ್ತದೆ, ಜನ ಖಂಡಿತಾ ಇದನ್ನು ಇಷ್ಟಪಡುತ್ತಾರೆ. ಇನ್ನು, BTC ಈಗಿರುವ ಸ್ಥಳದಿಂದ ಸ್ಥಳಾಂತರವಾದ ಮೇಲೆ ಅದನ್ನು ಮತ್ತಷ್ಟು ಆಧುನಿಕವಾಗಿ ಅಭಿವೃದ್ಧಿಗೊಳಿಸಲು ಹೆಚ್ಚು ಅವಕಾಶವಿರುತ್ತದೆ' ಎನ್ನುತ್ತಾರೆ ದಯಾನಂದ ಪೈ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications