ಗಣತಂತ್ರ ದಿನ ನೀವು ಕಾಣಬಯಸಿದ್ದು ಇಲ್ಲಿದೆ
ಭಾರತದ ಗಣರಾಜ್ಯೋತ್ಸವ ದಿನದಂದು ಪಥ ಸಂಚಲನ ನೋಡುವುದು ಕಣ್ಣಿಗೆ ಹಬ್ಬ. 64ನೇ ಗಣತಂತ್ರ ದಿನಕ್ಕೆ ನವದೆಹಲಿಯಲ್ಲಿ ಭರ್ಜರಿ ತಯಾರಿ ನಡೆದಿದೆ. ಈ ಬಾರಿ ಮುಖ್ಯ ಅತಿಥಿಗಳಾದ ಭೂತನ್ ರಾಜ ಜಿಗ್ಮೆ ಖೆಸರ್ ನಮ್ಗೆಲ್ ವಾಂಗ್ ಚುಕ್ ಹಾಗೂ ಅವರ ಪತ್ನಿ ದೆಹಲಿಗೆ ಶುಕ್ರವಾರ(ಜ.25) ಆಗಮಿಸಿದ್ದಾರೆ.
ಪರೇಡ್ ನೋಡಲು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿರುತ್ತಾರೆ. ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ಭೂ ಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ಅವರು ತಾಲೀಮು ನಿರತ ಪಥಸಂಚಲನ ತಂಡಗಳನ್ನು ಭೇಟಿ ಮಾಡಿ ಹುರುಪು ತುಂಬಿದ್ದಾರೆ.
ದೆಹಲಿ ಐಜಿಐ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ಸ್ಟೇಷನ್, ಬಸ್ ಡಿಪೋ ಗಳಲ್ಲಿ ಕಮಾಂಡೋ ಪಡೆ ಗಸ್ತು ತಿರುಗುತ್ತಿದ್ದಾರೆ.
ಈಶಾನ್ಯ ರಾಜ್ಯಗಳ ಬಂಡುಕೋರರು, ಉಗ್ರರ ಭೀತಿ, ನಕ್ಸಲರ ಬೆದರಿಕೆ ತಕ್ಕ ಉತ್ತರ ನೀಡಲು ದೆಹಲಿ ಪೊಲೀಸ್ ಸಜ್ಜಾಗಿದೆ. ಇಂಪಾಲದಲ್ಲಿ ಕೆಲ ಸಂಘಟನೆಗಳು ಗಣತಂತ್ರ ದಿನಾಚರಣೆಯನ್ನು ಬಹಿಷ್ಕರಿಸಿರುವ ವರದಿ ಬಂದಿದೆ.
ಎಲ್ಲಾ ಭದ್ರತೆ, ಆತಂಕದ ನಡುವೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕೊರೆಯುವ ಚಳಿಯಲ್ಲಿ ತಾಲೀಮು ನಡೆಸುತ್ತಿದ್ದಾರೆ. ಗಣತಂತ್ರದಿನದಂದು ಕಾಣ ಸಿಗುವ ಪಥ ಸಂಚಲನ, ಸ್ತಬ್ದ ಚಿತ್ರಗಳು, ಸಾಂಸ್ಕೃತಿಕ ನೃತ್ಯಗಳ ಚಿತ್ರ ದರ್ಶನ ನಿಮ್ಮ ಮುಂದಿದೆ. ಇನ್ನಷ್ಟು ಚಿತ್ರಗಳು ಗಣರಾಜ್ಯೋತ್ಸವ ಸಂಭ್ರಮದ ನಡುವೆ ನೋಡುವಿರಂತೆ....

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮುಖ್ಯ ಅತಿಥಿಗಳಾದ ಭೂತನ್ ರಾಜ ಜಿಗ್ಮೆ ಖೆಸರ್ ನಮ್ಗೆಲ್ ವಾಂಗ್ ಚುಕ್ ಹಾಗೂ ಅವರ ಪತ್ನಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸ್ವಾಗತ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮುಖ್ಯ ಅತಿಥಿ ಭೂತನ್ ರಾಜ ಜಿಗ್ಮೆ ಖೆಸರ್ ನಮ್ಗೆಲ್ ವಾಂಗ್ ಚುಕ್ ಅವರಿಗೆ ಸೇನೆಯಿಂದ ಗೌರವ ವಂದನೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಬಾಂಬ್ ನಿಷ್ಕ್ರಿಯ ತಂಡದ ಸದಸ್ಯರಿಂದ ಬಾಂಬ್ ಹುಡುಕಾಟ, ಎಲ್ಲೆಡೆಗೆ ಭದ್ರತೆಗೆ ಒತ್ತು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ದೆಹಲಿಯಲ್ಲಿ ಸಂಗೀತ ತಂಡದಿಂದ ಪಥ ಸಂಚಲನ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಎಲ್ಲಿತ್ತೋ ಆ ಹದ್ದು, ಹದ್ದು ಮೀರಿ ಹಾರಿ ಬಂದಿದೆ.. ಯೋಧರ ಪಡೆ ಮುನ್ನುಗ್ಗಲು ಸಜ್ಜಾಗಿದೆ.

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ದೇಶ ಕಾಯುವ ಯೋಧರು, ರಾಷ್ಟ್ರಧ್ವಜ ಬಿಡಿಸುತ್ತಿದ್ದಾಗ ಕಂಡದ್ದು ಹೀಗೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಒಂಟೆ ಮೇಲೆ ಕುಳಿತ ಸರದಾರರ ನಡುವೆ ಕಾಣುತ್ತಿದೆ ಭವ್ಯ ಕಟ್ಟಡ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಚೆನ್ನೈನ ಶಾಲಾ ಮಕ್ಕಳಿಂದ ಗಣತಂತ್ರ ದಿನಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮದ ತಾಲೀಮು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮೋಟರ್ ಸೈಕಲ್ ಏರಿ ದಾಖಲೆ ಬರೆಯಲು ಸಿದ್ಧರಾದ ಭೂ ಸೇನೆ ಯೋಧರು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ನಾವು ಶಾಂತಿ ಬಯಸುವ ಜನ. ನಾವು ಭಾರತೀಯರು ಎನ್ನುತ್ತಿರುವ ಕಾಶ್ಮೀರಿ ಬಾಲೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮಾ ದುರ್ಗೆ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ಸಜ್ಜಾಗಿದ್ದಾಳೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಗಲ್ಲಿ ಗಲ್ಲಿಗಳಲ್ಲೂ ಪೊಲೀಸ್ ಪಡೆ ಕಾವಲು ಕಾಯುತ್ತಿದೆ ಎಚ್ಚರ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಶಾಲಾ ಮಕ್ಕಳಿಗೆ ಗಣತಂತ್ರ ದಿನದಂದು ಹಬ್ಬದ ಸಂಭ್ರಮ, ನೃತ್ಯ ತಾಲೀಮು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಸಾಂಪ್ರದಾಯಿಕ ನೃತ್ಯ ಭಂಗಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ಮಾತೆಗೆ ನಮನ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ತಿರಂಗದ ಬಣ್ಣದ ದಿರಿಸು ಧರಿಸಿ ಮೋಟರ್ ಸೈಕಲ್ ಹತ್ತಿ ಸಾಹಸ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಭಾರತ ಯುವಶಕ್ತಿಯ ಝಲಕ್.. ಎನ್ ಸಿಸಿ ತಂಡದಿಂದ ಪಥ ಸಂಚಲನ, ವಂದನೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಅಸಲಿಯೋ ನಕಲಿಯೋ ಬಾಲಿವುಡ್ ಸ್ಟಾರ್ ಗಳು ದೆಹಲಿ ಪಥಸಂಚಲನದಲ್ಲಿ ಕಾಣಸಿಗಲಿದ್ದಾರೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ದೇಶದ ಬಾವುಟ ಹಿಡಿದು ಮುನ್ನಡೆಯುತ್ತಿದ್ದಾರೆ.

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ದೆಹಲಿಯಲ್ಲಿ ಕೊರೆಯುವ ಚಳಿಯಲ್ಲೂ ತಾಲೀಮು ನಿರತರಾಗಿರುವ ಸ್ತಬ್ದ ಚಿತ್ರ ನರ್ತಕಿಯರು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಸಾಂಪ್ರದಾಯಿಕ ನೃತ್ಯ ಶೈಲಿಯಲ್ಲಿ ಕುಣಿತ, ನೆಗೆತ, ಹಾರಾಟ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ದೇಶದ ಹೆಮ್ಮೆಯ ಪೊಲೀಸ್ ಪಡೆ ಪಥ ಸಂಚಲನದಲ್ಲಿ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಸಾಹಸಮಯ ನೆಗೆತ, ಜಿಗಿತದಲ್ಲಿ ತೊಡಗಿರುವವರು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಬಿಗಿ ಭದ್ರತೆ ನಡುವೆ ತಾಲೀಮು ನಡೆಸುತ್ತಿರುವ ಶಾಲಾ ವಿದ್ಯಾರ್ಥಿನಿಯರು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮ್ಯೂಸಿಕ್ ಬ್ಯಾಂಡ್ ಹುಡುಗಿಯರ ಜೊತೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಕುಶಲೋಪರಿ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮಂಜು ಮುಸುಕಿದ ವಾತಾವರಣದಲ್ಲೂ ತಾಲೀಮು.. ದೂರದಿಂದ ನೋಡುತ್ತಾ ಸಾಗುತ್ತಿರುವ ಸಾರ್ವಜನಿಕರು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಆ ಕಡೆ ಹೋಗೋಕೆ ಬಿಡಲ್ಲ..ರಸ್ತೆ ಬಂದ್ ಅಗಿದೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮಂಜು ಮುಸುಕಿದ ವಾತಾವರಣದಲ್ಲೂ ತಾಲೀಮು..

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಯೋಧರ ಪಥ ಸಂಚಲನ ಕಣ್ಣಿಗೆ ಹಬ್ಬ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮಂಜು ಮುಸುಕಿದ ವಾತಾವರಣದಲ್ಲೂ ಪಥ ಸಂಚಲನ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಪಥ ಸಂಚಲನದ ಇನ್ನೊಂದು ಝಲಕ್

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ವಾಹ್ ! ಏನು ಮೀಸೆ, ಏನು ರೈಫಲ್ ಒಂಟೆ ಸವಾರರು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಇದು ಯಾವ ರೀತಿ ಸಾಹಸ? ಪಲ್ಟಿ ಹೊಡೆಯೋದು ಹೀಗೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಎಲ್ಲರನ್ನು ಕಾಯುತ್ತಿರುವ ಕಮಾಂಡೊ ಪಡೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಮೋಟರ್ ಸೈಕಲ್ ಸಾಹಸಕ್ಕೆ ಮಕ್ಕಳ ಚಪ್ಪಾಳೆ ಸ್ವಾಗತ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ವಿದ್ಯಾರ್ಥಿನಿಯರಿಂದ ಜಿಮ್ನಾಜಿಸಂ ಕಸರತ್ತು

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಆಕರ್ಷಕ ಪಥ ಸಂಚಲನದ ಭಂಗಿ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಪಥ ಸಂಚಲನದ ದೃಶ್ಯಾವಳಿ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೂ ಗಣತಂತ್ರ ದಿನ ವೇದಿಕೆ ಒದಗಿಸಲಿದೆ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಆಕರ್ಷಕ ಸ್ತಬ್ದ ಚಿತ್ರ ಸಂಗೀತ ನೃತ್ಯ ಸಂಯೋಜನೆ ಜೊತೆಗೆ ಗಾಯನ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಜನರ ಕಾಯುವ ಟೋಪಿಗಳ ನೋಟ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ಈಶಾನ್ಯ ರಾಜ್ಯದ ಬುಡಕಟ್ಟು ಜನಾಂಗದ ಪರಿಚಯ ನೀಡುವ ಸ್ತಬ್ದ ಚಿತ್ರ

ಗಣರಾಜ್ಯೋತ್ಸವದ ತಾಲೀಮು ದೃಶ್ಯಗಳು
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಸ್ತಬ್ದ ಚಿತ್ರ
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications