ಅಲ್ಪಸಂಖ್ಯಾತ ವಿವಿಗೆ ಟಿಪ್ಪು ಹೆಸರು ಬೇಡ: ಪೇಜಾವರ ಶ್ರೀ

ಟಿಪ್ಪು ವಿವಾದದ ಬಗ್ಗೆ ಅನೇಕರು ಅಪೇಕ್ಷೆ ಪಟ್ಟಂತೆ ತಮ್ಮಅಭಿಪ್ರಾಯವನ್ನು ತಿಳಿಸಿದ ಪೇಜಾವರ ಶ್ರೀಗಳು, ಮುಸ್ಲಿಂ ಸಮಾಜದಲ್ಲಿ ಪರಮತ ಸಹಿಷ್ಣುಗಳಾಗಿರುವ, ಹಿಂದೂ ಮತ್ತು ಮುಸ್ಲಿಂ ಎರಡೂ ಸಮಾಜದ ಅಭಿಮಾನಪಾತ್ರರಾಗಿರುವ ಇಂತಹ ಅನೇಕ ಐತಿಹಾಸಿಕ ವ್ಯಕ್ತಿಗಳಿದ್ದಾರೆ. ಆದರೆ ಟಿಪ್ಪು ಸುಲ್ತಾನರ ಬಗ್ಗೆ ತೀವ್ರ ವಿವಾದವಿದೆ. ಟಿಪ್ಪು ಹೆಸರಿನ ಬದಲು ಮೇಲಿನ ಸಾತ್ವಿಕ ವ್ಯಕ್ತಿಗಳ ಹೆಸರನ್ನಿಡಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ಡಾ. ಚಿದಾನಂದಮೂರ್ತಿ ಅವರುಟಿಪ್ಪು ಮಾಡಿದ ಘೋರ ಕೃತ್ಯಗಳ ಬಗ್ಗೆ ಅನೇಕ ಸ್ಪಷ್ಟ ದಾಖಲೆಗಳನ್ನು ತೋರಿಸಿದ್ದಾರೆ. (ಟಿಪ್ಪುವಿನ ಖಡ್ಗದಲ್ಲಿ ಕೆತ್ತಿದ ವಾಕ್ಯಗಳು, ಟಿಪ್ಪು ಅವರ ವಂಶಜರೇ ಹೇಳಿದ ಮಾತುಗಳು ಮುಂತಾದ ಅನೇಕ ಸ್ಪಷ್ಟ ಪುರಾವೆಗಳನ್ನು ತೋರಿಸಿದ್ದಾರೆ.) ಅವುಗಳಿಗೆ ಸರಿಯಾದ ಉತ್ತರ ನೀಡದೇ ಬರೇ ಚಿದಾನಂದಮೂರ್ತಿ ಹಾಗೂ ಭೈರಪ್ಪ ಅವರ ಹೇಳಿಕೆಗಳನ್ನು ಉಗ್ರ ಶಬ್ದಗಳಿಂದ ನಿರಾಕರಿಸಿದರೆ ಯಾರಿಗೂ ಸಮಾಧಾನವಾಗುವುದಿಲ್ಲ ಎಂದರು.
ಅಂತಹ ಸರಿಯಾದ ಉತ್ತರವನ್ನು ಟಿಪ್ಪು ಬೆಂಬಲಿಗರು ಯಾರೂ ಈವರೆಗೆ ನೀಡಿಲ್ಲ ಎಂದವರು ಹೇಳಿದ್ದಾರೆ. ಅಲ್ಲದೇ, ತಮಗೆ ದೇಶದಲ್ಲಿರುವ ಮುಸ್ಲಿಂ ನಾಯಕರ ಮತ್ತು ಮುಸ್ಲಿಂ ಸಮಾಜದ ಬಗ್ಗೆ ವಿಶ್ವಾಸ-ಅಭಿಮಾನವಿದೆ. ತಾವು ಮುಸ್ಲಿಂ ಸಮಾಜದ ಅನೇಕಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿಯೂ, ಅವರೆಲ್ಲರೂ ಅತ್ಯಂತ ಪ್ರೀತಿ ಅಭಿಮಾನಗಳಿಂದ ತಮ್ಮನ್ನು ಸ್ವಾಗತಿಸಿದ್ದಾಗಿಯೂ ತಿಳಿಸಿರುವ ಪೇಜಾವರ ಶ್ರೀಗಳು, ಮುಸ್ಲಿಂ ಸಮಾಜದಕೆಲವೇ ಮಂದಿ ಉಗ್ರವಾದಿಗಳು ಮತ್ತು ಭಯೋತ್ಪಾದಕರ ಬಗ್ಗೆ ತಮಗೆ ತೀವ್ರ ಅಸಮಾಧಾನವಿದೆ ಎಂದು ಹೇಳಿದರು.
ದೇವರಲ್ಲಿಯೂ ರಾಷ್ಟ್ರದಲ್ಲಿಯೂ ಭಕ್ತಿಯುಳ್ಳ ಬಹುಸಂಖ್ಯಾಕ ಮುಸ್ಲಿಂ ಸಮಾಜವನ್ನು ತಾವು ಪ್ರೀತಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಮುಸ್ಲಿಂ ಸಮಾಜದ ಬಗ್ಗೆ ತಮಗೆ ಯಾವುದೇ ವಿರೋಧ
ಭಾವನೆಯಿಲ್ಲ ಎಂದರು.
ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ ಒಂದು ಧರ್ಮದವರಿಗೆ ವಿಶೇಷ ಪ್ರಾಶಸ್ತ್ಯವುಳ್ಳ ಶ್ವವಿದ್ಯಾಲಯವನ್ನು ನಿರ್ಮಿಸುವುದರಲ್ಲಿ ಔಚಿತ್ಯವಿಲ್ಲ. ನಮ್ಮ ರಾಷ್ಟ್ರದ ಬಹುಸಂಖ್ಯಾಕರನ್ನೂ ಅಲ್ಪಸಂಖ್ಯಾಕರನ್ನೂ ಸಮಾನವಾಗಿ ನೋಡಬೇಕು. ಅವರಲ್ಲಿ ಯಾವುದೇ ಒಂದು ತಾರತಮ್ಯ, ಅಂತರ ನೀಡಬಾರದು ಎಂಬುದು ತಮ್ಮ ಸ್ಪಷ್ಟ ಅಭಿಪ್ರಾಯ ಎಂದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications