ಭಾರತದ ಭೂ ಸೇನೆಗೆ ಅರುವತ್ತೈದರ ಚಿರ ಯೌವನ
ನವದೆಹಲಿ, ಜ.15: ಭಾರತೀಯ ಭೂ ಸೇನೆಗೆ ಮಂಗಳವಾರ(ಜ.15) ರಂದು ಹುಟ್ಟು ಹಬ್ಬದ ಸಂಭ್ರಮ. ಈ ದಿನದಂದು ಹುತಾತ್ಮರ ವೀರಗಾಥೆಯನ್ನು ವಿಶೇಷವಾಗಿ ಸ್ಮರಿಸಲಾಗುತ್ತದೆ.
ನಮ್ಮ ಯೋಧರ ನಿಸ್ವಾರ್ಥ ಸೇವೆ ಹಾಗೂ ದೇಶದ ರಕ್ಷಣೆಗಾಗಿ ಪಣತೊಟ್ಟು ಹೋರಾಡುವ ಮನೋಭವ ಇನ್ನಷ್ಟು ವೃದ್ಧಿಸಲಿ. ಭಾರತದಲ್ಲಿ ಆಂತರಿಕ ಹಾಗೂ ಹೊರಗಿನ ಶಕ್ತಿಗಳಿಂದ ಬರುವ ಅಡೆ ತೊಡೆಗಳನ್ನು ತೊಡೆದು ಹಾಕಲು ನಮ್ಮ ಯೋಧರು ಸಮರ್ಥರಿದ್ದಾರೆ. ವಿಶ್ವದಲ್ಲಿ ಅಗ್ರಗಣ್ಯ ಸೇನೆಯನ್ನು ಹೊಂದಿದ ಹೆಮ್ಮೆ ಎಲ್ಲಾ ನಾಗರೀಕರಿಗೂ ಇರಬೇಕು ಎಂದು ಭೂ ಸೇನಾ ಮುಖ್ಯಸ್ಥ ಬೈಕ್ ರಾಮ್ ಸಿಂಗ್ ಹೇಳಿದ್ದಾರೆ.

ಯೋಧರು ನವದೆಹಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಗೆ ನಮಿಸಿ, ವಿಶೇಷ ಪ್ರದರ್ಶನಗಳನ್ನು ನೀಡುತ್ತಾರೆ. ದೆಹಲಿ ಕಂಟೋನ್ಮೆಂಟ್ ನಲ್ಲಿ ನಡೆಯುವ ಸಮಾರಂಭದಲ್ಲಿ ಭೂ ಸೇನೆ ಯೋಧರ ಪಥಸಂಚಲನ, ಆಧುನಿಕ ಶಸ್ತ್ರಾಸ್ತ್ರಗಳ ಸ್ಥೂಲ ಪರಿಚಯ, ಭೂ ಸೇನೆಯ ಸಾಧನೆ, ಅಗಲಿದ ಯೋಧರ ಸ್ಮರಣೆ ಮುಂತಾದ ಕಾರ್ಯಕ್ರಮವಿರುತ್ತದೆ.
ಆರ್ಮಿ ಡೇ: ಪ್ರತಿ ವರ್ಷ ಜನವರಿ 15 ರಂದು ಭೂ ಸೇನಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಕೊಡಗಿನ ಹೆಮ್ಮೆಯ ಪುತ್ರ ಲೆಫ್ಟಿನೆಂಟ್ ಜನರಲ್(ನಂತರ ಫೀಲ್ಡ್ ಮಾರ್ಷಲ್) ಕೆಎಂ ಕಾರ್ಯಪ್ಪ ಅವರು ಭೂ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿದ ದಿನ ಇದಾಗಿದೆ.
ಫ್ಲಾಗ್ ಡೇ ವಿಫಲ ಸಂಧಾನ: ಇಬ್ಬರು ಭಾರತೀಯ ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಮತ್ತು ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತು. ಭಾರತದ ಆರೋಪವನ್ನು ಪಾಕ್ ತಿರಸ್ಕರಿಸಿದ್ದರಿಂದ ಸಭೆ ವಿಫಲಗೊಂಡಿದೆ.
ಪಾಕ್ ಸೇನೆ ಕದ್ದೊಯ್ದಿರುವ ಲ್ಯಾನ್ಸ್ ನಾಯಕ್ ಹೇಮರಾಜ್ ಸಿಂಗ್ ಅವರ ರುಂಡವನ್ನು ತಮ್ಮ ಕುಟುಂಬದ ವಶಕ್ಕೆ ಒಪ್ಪಿಸುವಂತೆ ಕೋರಿ ಯೋಧನ ಕುಟುಂಬ ಉತ್ತರ ಪ್ರದೇಶದ ಮಥುರಾದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಕೊನೆಗೂ ಅಂತ್ಯಗೊಂಡಿದೆ.
'ರಾಜತಾಂತ್ರಿಕ ಮಾರ್ಗಗಳ ಮೂಲಕ ರುಂಡವನ್ನು ಮರಳಿ ತರಲಾಗುವುದು ಎಂದು ಸೇನಾ ಮುಖ್ಯಸ್ಥ ಸಿಂಗ್ ಆಶ್ವಾಸನೆ ನೀಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮೃತ ಯೋಧನ ಕುಟುಂಬಕ್ಕೆ 20 ಲಕ್ಷ ರೂಪಾಯಿ ಹಾಗೂ ಕಿಸಾನ್ ನಿಧಿ ಯಿಂದ ಐದು ಲಕ್ಷ ರೂಪಾಯಿ ಘೋಷಿಸಿದ್ದಾರೆ.
ಭಾರತೀಯ ಯೋಧರ ಶಿರಚ್ಛೇದನ 'ಕ್ಷಮೆಗೆ ಅನರ್ಹ' ಮತ್ತು 'ಒಪ್ಪಲು ಅಸಾಧ್ಯವಾದ ಬೀಭತ್ಸ ಕೃತ್ಯ' ಎಂದು ಸೇನಾ ಮುಖ್ಯಸ್ಥ ಬೈಕ್ ರಾಮ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಇದು ಪಾಕ್ ಸೇನೆಯ ಪೂರ್ವ ನಿಯೋಜಿತ ಮತ್ತು ನಿರ್ದೇಶಿತವಾದ ವ್ಯವಸ್ಥಿತ ಸಂಚು. ಲಷ್ಕರ್ ಇ ಯೋಯ್ಬಾ ಸಂಘಟನೆಯ ನೆರವು ಪಡೆದಿರುವ ಸಾಧ್ಯತೆಯೂ ಇದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರದಿಂದ ಶುಕ್ರವಾರದವರೆಗೆ ಗಡಿಯಾಚೆ ನಡೆಯುವ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ವಾರದಲ್ಲಿ ಸೋಮವಾರ ಮಾತ್ರ ಗಡಿಯಾಚೆ ಪ್ರಯಾಣಿಕರಿಗೆ ತೆರಳಲು ಅವಕಾಶವಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications