ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರಿ ವೇಳೆ ಓಡಾಡೋದ್ ನಿಲ್ಲಿಸಿದರೆ ರೇಪ್ ಆಗೊಲ್ಲ!

By Srinath
|
Google Oneindia Kannada News

delhi-molest-jagadguru-mathe-mahadevi-statement-dharwad
ಧಾರವಾಡ, ಜ.8: ಆಸಾರಾಮ್ ಬಾಪು ಆಯ್ತು, ಮೋಹನ್ ಭಾಗವತ್ ಆಯ್ತು ಈಗ ಮಾತೆ ಮಹಾದೇವಿ ಸರದಿ. ಹೀಗೆ ಎಲ್ಲರೂ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ನಂತರ ಶಕ್ತಿ ಮೀರಿ ಮಹಿಳೆಯರಿಗೆ 'ಉಚಿತ' ಸಲಹೆಗಳನ್ನು ನೀಡಿ ಕೃತಾರ್ಥರಾಗುತ್ತಿದ್ದಾರೆ.

ಕೂಡಲಸಂಗಮ ದಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನಿನ್ನೆ ಧಾರವಾಡದಲ್ಲಿ ಸುದ್ದಿಗೋಷ್ಟಿಯಲ್ಲಿ ಏನು ಹೇಳಿದ್ದಾರೆ ಕೇಳಿ:

'ಮಹಿಳೆಯರೇ, ಪುರುಷರನ್ನು ಪ್ರಚೋದಿಸುವ ಉಡುಪು ಧರಿಸಬೇಡಿ. ರಾತ್ರಿ ವೇಳೆ ಅಡ್ಡಾಡಬೇಡಿ. ಮಕ್ಕಳನ್ನು ಧಾರ್ಮಿಕ ಕಟ್ಟುಪಾಡಿನಲ್ಲಿ ಬೆಳೆಸಿದರೆ ಅತ್ಯಾಚಾರ ಆಗೋಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿದ್ದರಿಂದಲೇ ಅತ್ಯಾಚಾರ ಹೆಚ್ಚಾಗುತ್ತಿರುವುದು'.

'ಸಮಾಜದಲ್ಲಿ ದೌರ್ಜನ್ಯ ತಡೆಗಟ್ಟಲು ಸರಕಾರ ಹಿಂದಿದೆ ಎಂಬ ಭರವಸೆಯ ಜತೆಗೆ ಮಹಿಳೆಯರು ತಮ್ಮ ಬಗ್ಗೆಯೂ ಸ್ವಯಂ ಕಟ್ಟುಪಾಡು ಹಾಕಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಧಾರ್ಮಿಕ, ಸಾಂಸ್ಕೃತಿಕ ಕಟ್ಟುಪಾಡಿನೊಳಗೆ ಬೆಳೆಸಬೇಕು. ಆಗ ಅತ್ಯಾಚಾರದಂತಹ ಘಟನೆಗಳು ಕಡಿಮೆಯಾಗುತ್ತವೆ'.

'ನಡುರಾತ್ರಿ 12 ಗಂಟೆಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತಹ ಕಾಲ ಬಂದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದಂತೆ' ಎಂದು ಯಾರೋ ದಾರ್ಶನಿಕರು ಹೇಳಿದ ಮಾತು ನೆನಪಿಗೆ ಬರುತ್ತಿದೆ.
ಹೇ ರಾಮ್!

English summary
In the aftermath of Delhi molestation case Jagadguru Mathe Mahadevi has given a statement in Dharwad yesterday (Jan 7) stating women should avoid venturing out in the night times to avoid molestations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X